ಲವ್ ಜಿಹಾದ್ ವಿಚಾರದಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಸರ್ಮಥಿಸಿಕೊಂಡಿರುವ ಶಾಸಕ ರೇಣುಕಾಚಾರ್ಯ, ಹೌದು ಲವ್ ಜಿಹಾದ್ ನಮ್ಮ ಅಜೆಂಡಾ ಎಂದಿದ್ದಾರೆ.
ಸರ್ಕಾರ ಅಭಿವೃದ್ಧಿ ಮಾಡುತ್ತಿದ್ದು, ಅದಕ್ಕೆ ಪೂರಕವಾಗಿ ಹಣ ಬಿಡುಗಡೆ ಮಾಡುತ್ತಿದೆ. ನೀರಾವರಿ, ಆರೋಗ್ಯ ಸೇರಿದಂತೆ ಎಲ್ಲಾ ವಿಚಾರವಾಗಿ ಅಭಿವೃದ್ಧಿ ಆಗುತ್ತಿದೆ. ಆದರೆ ಲವ್ ಜಿಹಾದ್ನಿಂದ ನಮ್ಮ ಹಿಂದೂ ಹೆಣ್ಣು ಮಕ್ಕಳು ಹಾಳಾಗಬೇಕಾ? ಎಂದು ಪ್ರಶ್ನಿಸಿದ ಅವರು, ಅದಕ್ಕೆ ಅವಕಾಶ ಕೊಡುವುದಿಲ್ಲ.
ಕೇಂದ್ರದಲ್ಲಿ ತ್ರಿವಳಿ ತಲಾಕ್ ವಿಚಾರವಾಗಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುವಂತೆ ಮಾಡಿದೆ. ತ್ರಿವಳಿ ತಲಾಕ್ನಿಂದ ಮುಸ್ಲಿಂ ಹಣ್ಣು ಮಕ್ಕಳಿಗೆ ಅವಮಾನ ಆಗುತ್ತಿತ್ತು. ಮೂರು ಬಾರಿ ತಲಾಕ್ ಎಂದಾಕ್ಷಣ ಹೆಣ್ಣುಮಗಳ ಭವಿಷ್ಯ ಮುಗಿದು ಹೋಗುತ್ತಿತ್ತು. ದೇಶದಲ್ಲಿ ಮತ್ತು ರಾಜ್ಯದಲ್ಲಿ ಹೆಣ್ಣು ಮಕ್ಕಳನ್ನ ಗೌರವಿಸಿದ ಪಕ್ಷ ಬಿಜೆಪಿ. ಹೀಗಾಗಿ ಮಹಿಳೆಯರಿಗೆ ನ್ಯಾಯ ಸಿಗಬೇಕಿದೆ. ಆದ್ದರಿಂದ ಪಕ್ಷದ ಅಜೆಂಡಾ ಬಗ್ಗೆ ರಾಜ್ಯಾಧ್ಯಕ್ಷರು ಸರಿಯಾಗಿ ಹೇಳಿದ್ದು, ಲವ್ ಜಿಹಾದ್ನಿಂದ ನಮ್ಮ ಹೆಣ್ಣು ಮಕ್ಕಳು ಹೊರ ಬರಬೇಕಿದೆ ಎಂದರು.