ರಾಮನಗರ: ತೆಂಗಿನ ಕಾಯಿ ಬಿದ್ದಿದೆ ಎಂದು ನೋಡುವುದಕ್ಕೂ ಮುನ್ನ ಎಚ್ಚರ.. ಒಂದು ವೇಳೆ ನೋಡಿದ್ರೆ ಆ ಆಪತ್ತು ತಪ್ಪಿದ್ದಲ್ಲ.
ಹೌದು ರಾಮನಗರದಲ್ಲಿ ಇಂತಹದ್ದೆ ಇಂದು ಘಟನೆ ನಡೆದಿದೆ. ತೆಂಗಿನ ಕಾಯಿ ಎಂದು ತಿಳಿದುಕೊಂಡು ಅದು ಪರಿಶೀಲನೆಗೆ ಹೋದಾಗ ನಾಡಬಾಂಬ್ ಸ್ಫೋಟವಾದ ಘಟನೆ ನಡೆದಿದೆ. ಈ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನೇರಳಹಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಸ್ಫೋಟಗೊಂಡ ಪರಿಣಾಮವಾಗಿ ಓರ್ವನಿಗೆ ಗಂಭೀರ ಗಾಯವಾಗಿದೆ.
29 ವರ್ಷದ ನೌಷಾದ್ ಪಾಷಾ ಗಾಯಗೊಂಡ ವ್ಯಕ್ತಿ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇನ್ನು ಪಾಷಾ ಅವರು ಯಾರೋ ಮಟಮಂತ್ರ ಮಾಡಿಸಿಟ್ಟ ತೆಂಗಿನಕಾಯಿ ಎಂದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ನಾಡಬಾಂಬ್ ಸ್ಫೋಟಗೊಂಡಿದೆ. ಕೂಡಲೇ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕನಕಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.