• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ್; ಶರ್ಮಾ, ಜೈಸ್ವಾಲ್ ಅಮೋಘ ಪ್ರದರ್ಶನ!

ಪ್ರತಿಧ್ವನಿ by ಪ್ರತಿಧ್ವನಿ
April 23, 2024
in ಕ್ರೀಡೆ
0
ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ್; ಶರ್ಮಾ, ಜೈಸ್ವಾಲ್ ಅಮೋಘ ಪ್ರದರ್ಶನ!
Share on WhatsAppShare on FacebookShare on Telegram

ಜೈಪುರ: 17ನೇ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಮತ್ತೊಮ್ಮೆ ಮುಂಬೈ ಹೀನಾಯ ಸೋಲು ಕಂಡಿದೆ.

ADVERTISEMENT

ರಾಜಸ್ಥಾನ್ ಪರ ಸಂದೀಪ್‌ ಶರ್ಮಾ ಬೆಂಕಿ ಬೌಲಿಂಗ್, ಯಶಸ್ವಿ ಜೈಸ್ವಾಲ್‌ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ರಾಜಸ್ಥಾನ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡವು ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ 183 ರನ್ ಸಿಡಿಸಿ ಗೆಲುವಿನ ದಡ ಸೇರಿತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ಪರ ಆರಂಭಿಕ ಆಟಗಾರರಾದ ಜೋಸ್‌ ಬಟ್ಲರ್‌ ಮತ್ತು ಯಶಸ್ವಿ ಜೈಸ್ವಾಲ್‌ 74 ರನ್‌ ಗಳ ಜೊತೆಯಾಟವಾಡಿ ಆರಂಭಿಕ ಮುನ್ನಡೆ ನೀಡಿದರು. ಬಟ್ಲರ್‌ 35 ರನ್‌(25 ಎಸೆತ, 6 ಬೌಂಡರಿ) ಸಿಡಿಸಿ ಔಟ್ ಆದರು. ಆನಂತರ ಯಶಸ್ವಿ ಜೈಸ್ವಾಲ್‌ ಮತ್ತು ನಾಯಕ ಸಂಜು ಸ್ಯಾಮ್ಸನ್‌ ಮುರಿಯದ ಎರಡನೇ ವಿಕೆಟ್ ಗೆ 65 ಎಸೆತಗಳಲ್ಲಿ 109 ರನ್‌ ಗಳಿಸಿ ಗೆಲುವಿನ ನಗೆ ಬೀರುವಂತೆ ಮಾಡಿದರು.

ರಾಜಸ್ಥಾನ್ ತಂಡ ಬ್ಯಾಟಿಂಗ್ ಮಾಡುವ ವೇಳೆ ಮಳೆಯ ಸಮಸ್ಯೆ ಕೂಡ ಕಾಡಿತು. ಆದರೂ ರಾಜಸ್ಥಾನ್ ತಂಡ ಒಂದೇ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಯಶಸ್ವಿ ಜೈಸ್ವಾಲ್‌ ಔಟಾಗದೇ 104 ರನ್‌(60 ಎಸೆತ, 9 ಬೌಂಡರಿ, 7 ಸಿಕ್ಸರ್‌) ಸಿಡಿಸಿದರು. ಜೈಸ್ವಾಲ್‌ ಗೆ ಉತ್ತಮ ಸಾಥ್‌ ನೀಡಿದ ಸ್ಯಾಮ್ಸನ್‌ ಅಜೇಯ 38 ರನ್‌ (28 ಎಸೆತ, 2 ಬೌಂಡರಿ, 2 ಸಿಕ್ಸರ್‌) ಗಳಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈನ ಬ್ಯಾಟ್ಸಮನ್ ಗಳು ಬೇಗ ಬೇಗನೆ ವಿಕೆಟ್ ಒಪ್ಪಿಸಿದರು. 52 ರನ್‌ಗಳಿರುಷ್ಟವರಲ್ಲಿ ಪ್ರಮಖ 4 ವಿಕೆಟ್‌ ಉರುಳಿದ್ದವು. ಆದರೆ, ವಡೇರಾ ಮತ್ತು ತಿಲಕ್‌ ವರ್ಮಾ 5ನೇ ವಿಕೆಟಿಗೆ 52 ಎಸೆತಗಳಲ್ಲಿ 99 ರನ್‌ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ನಂತರ ಮತ್ತೆ ಮುಂಬೈ ತಂಡ ನಾಟಕೀಯ ಕುಸಿತ ಕಂಡಿತು. ಕೊನೆಯಲ್ಲಿ 28 ರನ್‌ ಗಳಿಸುವಷ್ಟರಲ್ಲಿ ಕೊನೆಯ 5 ವಿಕೆಟ್‌ ಕಳೆದುಕೊಂಡಿತು. ಪರಿಣಾಮವಾಗಿ 9 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಿತು. ರಾಯಲ್ಸ್ ಪರ ಸಂದೀಪ್‌ ಶರ್ಮಾ 18 ರನ್‌ ನೀಡಿ 5 ವಿಕೆಟ್‌ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದರು.

Tags: IPLJaiswalMIRRSharma
Previous Post

ಯುವಕನನ್ನು ಆತನ ಮನೆಯ ಮುಂದೆಯೇ ಕೊಲೆ ಮಾಡಿದ ಅನ್ಯಕೋಮಿನ ಯುವಕರು!

Next Post

ಅಂಗಿಯೊಳಗೆ ಹಣ ಇಟ್ಟುಕೊಂಡು ಸಾಗಿಸುತ್ತಿದ್ದ ಕಿಲಾಡಿ ವಶಕ್ಕೆ! ಬಸ್ ನಲ್ಲಿ ಹೊರಟಿದ್ದರೂ ಪತ್ತೆ ಮಾಡಿದ ಅಧಿಕಾರಿಗಳು!

Related Posts

CCL ಸಮಯದಲ್ಲಿ ತಾನು ಬಳಸಿದ ಕೆಟ್ಟ ಪದದ ಬಗ್ಗೆ ಸುದೀಪ್ ಹೇಳಿದ್ದೇನು
ಕ್ರೀಡೆ

CCL ಸಮಯದಲ್ಲಿ ತಾನು ಬಳಸಿದ ಕೆಟ್ಟ ಪದದ ಬಗ್ಗೆ ಸುದೀಪ್ ಹೇಳಿದ್ದೇನು

by ಪ್ರತಿಧ್ವನಿ
February 8, 2026
0

ಸಿಸಿಎಲ್ ಪಂದ್ಯದ ವೇಳೆ ಕಿಚ್ಚ ಸುದೀಪ್ ಬಳಸಿದ್ದ ಅವಾಚ್ಯ ಪದ ವೈರಲ್ ಆಗಿತ್ತು. ಈ ಕುರಿತು ಸಿಸಿಎಲ್ ಗೆಲುವಿನ ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತನಾಡಿದ್ದಾರೆ. https://youtu.be/cz8M9rbGmYc?si=pJFMwcUa7d8iEGtN ಅದು ಕೋಪದಲ್ಲಿ...

Read moreDetails
ಈ ಗೆಲುವು ಎಲ್ಲಾ ಆಟಗಾರರ ಒಗ್ಗಟ್ಟಿನ ಅಮೋಘ ಪ್ರದರ್ಶನ:  ಐಸಿಸಿ U19 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಹೆಚ್‌ಡಿಕೆ ಶುಭಹಾರೈಕೆ..

ಈ ಗೆಲುವು ಎಲ್ಲಾ ಆಟಗಾರರ ಒಗ್ಗಟ್ಟಿನ ಅಮೋಘ ಪ್ರದರ್ಶನ: ಐಸಿಸಿ U19 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಹೆಚ್‌ಡಿಕೆ ಶುಭಹಾರೈಕೆ..

February 6, 2026
ಕೆಪಿಟಿಸಿಎಲ್ ಥೀಮ್ ಪಾರ್ಕ್ ಕಾಮಗಾರಿ ಶೀಘ್ರದಲ್ಲೇ ಪೂರ್ಣ: ಸಚಿವ ಕೆ.ಜೆ.ಜಾರ್ಜ್

ಕೆಪಿಟಿಸಿಎಲ್ ಥೀಮ್ ಪಾರ್ಕ್ ಕಾಮಗಾರಿ ಶೀಘ್ರದಲ್ಲೇ ಪೂರ್ಣ: ಸಚಿವ ಕೆ.ಜೆ.ಜಾರ್ಜ್

February 6, 2026
ಇಂಗ್ಲೆಂಡ್‌ ಬಗ್ಗು ಬಡೆದ “ಮರಿಹುಲಿಗಳು” : U19 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ..

ಇಂಗ್ಲೆಂಡ್‌ ಬಗ್ಗು ಬಡೆದ “ಮರಿಹುಲಿಗಳು” : U19 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ..

February 6, 2026
U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

February 6, 2026
Next Post
ಅಂಗಿಯೊಳಗೆ ಹಣ ಇಟ್ಟುಕೊಂಡು ಸಾಗಿಸುತ್ತಿದ್ದ ಕಿಲಾಡಿ ವಶಕ್ಕೆ! ಬಸ್ ನಲ್ಲಿ ಹೊರಟಿದ್ದರೂ ಪತ್ತೆ ಮಾಡಿದ ಅಧಿಕಾರಿಗಳು!

ಅಂಗಿಯೊಳಗೆ ಹಣ ಇಟ್ಟುಕೊಂಡು ಸಾಗಿಸುತ್ತಿದ್ದ ಕಿಲಾಡಿ ವಶಕ್ಕೆ! ಬಸ್ ನಲ್ಲಿ ಹೊರಟಿದ್ದರೂ ಪತ್ತೆ ಮಾಡಿದ ಅಧಿಕಾರಿಗಳು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada