ಸದಾ ಕೇಂದ್ರ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಾ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಸಹ ಬಿಜೆಪಿ ವಿರುದ್ದ ಗುಜರಾತ್ನ ದಾಹೋದ್ನಲ್ಲಿ ಹರಿಹಾಯ್ದಿದ್ದಾರೆ.
ದೇಶದ ಸಂಪನ್ಮೂಲವನ್ನು ಮೋದಿ ಸರ್ಕಾರವು ಕೆಲವೇ ಕೆಲವು ಶ್ರೀಮಂತರಿಗೆ ಹರಿದು ಹಂಚಿದೆ. ಶ್ರೀಮಂತ ಹಾಗೂ ಬಡವರಿಗೆ ಎರಡು ಪ್ರತ್ಯೇಕ ಭಾರತವನ್ನು ನಿರ್ಮಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
2014ರಲ್ಲಿ ಮೋದಿ ದೇಶದ ಪ್ರಧಾನಿಯಾಗುವ ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿದ್ದರು ಆಗ ಎನು ಕೆಲಸ ಮಾಡಿದ್ದರು ಅದನ್ನು ದೇಶಾದ್ಯಂತ ಮಾಡುತ್ತಿದ್ದಾರೆ ಎಂದು ವ್ಯಂಗವಾಡಿದ್ದಾರೆ.
ಮುಂದುವರೆದು, ಇಂದು ಎರಡು ಭಾರತವನ್ನ ನಿರ್ಮಾಣ ಮಾಡಲಾಗಿದೆ ಒಂದು ಶ್ರೀಮಂತರಿಗೆ ಮತ್ತೊಂದು ಬಡವರಿಗೆ. ಕಾಂಗ್ರೆಸ್ ಎರಡು ಭಾರತವನ್ನು ಬಯಸುವುದಿಲ್ಲ ಬಿಜೆಪಿ ಆಡಳಿತದಲ್ಲಿ ಶ್ರೀಸಾಮಾನ್ಯರ ಸಂಪತ್ತನ್ನು ಕೆಲವರಿಗೆ ಮಾತ್ರ ಕೊಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಗುಜರಾತ್ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಬುಡಕಟ್ಟು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಈ ಸರ್ಕಾರ ನಿಮ್ಮಗೆ ಎನನ್ನು ಉಳಿಸುವುದಿಲ್ಲ ಎಲ್ಲವನ್ನ ಕಸಿದುಕೊಂಡು ಶ್ರೀಮಂತರಿಗೆ ನೀಡುತ್ತದೆ ನೀವು ನಿಮ್ಮ ಹಕ್ಕುಗಳನ್ನು ಸರ್ಕಾದಿಂದ ಕಸಿದುಕೊಂಡರೆ ಮಾತ್ರ ಉಳಿಯಲು ಸಾಧ್ಯ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಗಂಟೆ ಬಾರಿಸಲು ಮೊಂಬತ್ತಿ ಬೆಳಗಲು ಹೇಳಿದ್ದರು ಆದರೆ, ಕೋವಿಡ್ನಿಂದ ಜನರು ನರಳುತ್ತಿದ್ದ ಪ್ರಾಣ ಬಿಟ್ಟ ಸಮಯದಲ್ಲಿ, ಗಂಗಾ ನದಿಯಲ್ಲಿ ಹೆಣಗಳು ತೇಲಿದಾಗ ಪ್ರಧಾನಿ ಯಾಕೆ ಮೌನ ವಹಿಸಿದ್ದರು ಎಂದು ಪ್ರಶ್ನಿಸಿದ್ದಾರೆ.





