ಸ್ಯಾಂಡಲ್ವುಡ್ ನಟ(sandalwood) ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್(raghavendra stores) ಸಿನಿಮಾ, ಕಳೆದ ವಾರವಷ್ಟೇ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಈ ಮಧ್ಯೆ ಜಗ್ಗೇಶ್ ಸಿನಿಮಾಗೆ ಚುನಾವಣಾಧಿಕಾರಿ ಅಡ್ಡಿಯಾಗಿರುವ ಆರೋಪ ಕೇಳಿಬಂದಿದೆ. ವಿಧಾನಸಭೆ ಚುನಾವಣೆಗೆ(karnataka aseembly election2023) ಸ್ಪರ್ಧಿಸಿರುವ ಬಿಜೆಪಿ(BJP) ಅಭ್ಯರ್ಥಿಗಳ ಪರವಾಗಿ ನಟ ಜಗ್ಗೇಶ್ ಪ್ರಚಾರ ಮಾಡ್ತಿರೋದ್ರಿಂದ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡಿದ್ದಾರೆ ಎನ್ನಲಾಗ್ತಿದೆ.
![](https://pratidhvani.com/wp-content/uploads/2023/05/Ambi_10-1021x1024.jpg)
ದಾವಣಗೆರೆಯ ಗೀತಾಂಜಲಿ ಥಿಯೇಟರ್ನಲ್ಲಿ ʻರಾಘವೇಂದ್ರ ಸ್ಟೋರ್ಸ್ʼ (raghavendra stores)ಸಿನಿಮಾ ಪ್ರದರ್ಶನ ಕಾಣ್ತಿದೆ. ಇಂದು ಬೆಳ್ಳಗೆ ಚಿತ್ರಮಂದಿರಕ್ಕೆ ಆಗಮಿಸಿದ್ದ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನ ಮಾಡದಂತೆ ತಿಳಿಸಿದ್ದಾರೆ. ಜಗ್ಗೇಶ್(jaggesh) ನೇರವಾಗಿ ಚುನಾವಣೆ ಪ್ರಚಾರಕ್ಕೆ(election campaign) ಇಳಿದಿರೋದ್ರಿಂದ ಹಾಗೂ ಅವರು ರಾಜ್ಯಸಭಾ ಸದಸ್ಯರು ಆಗಿರೋದ್ರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದಾರೆ.
![](https://pratidhvani.com/wp-content/uploads/2023/05/48f35854-65b1-4c4e-8c2d-9e4348c5debb-18-1024x143.jpg)
![](https://pratidhvani.com/wp-content/uploads/2023/05/Jaggesh-1.webp)
ಆದರೆ ಜಗ್ಗೇಶ್ ಕೇವಲ ಸ್ಟಾರ್ ಪ್ರಚಾರಕರು.(star campaigner) ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಅಲ್ಲದೇ, ಅನೇಕ ನಟರು ಚುನಾವಣೆ ಪ್ರಚಾರ ಮಾಡ್ತಿದ್ದಾರೆ. ನಟ ಸುದೀಪ್ ವಿಷಯದಲ್ಲಿ ಚುನಾವಣಾ ಆಯೋಗ ಯಾವುದೇ ಕ್ರಮ ತಗೆದುಕೊಂಡಿಲ್ಲ. ಆದ್ರಿಂದ ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಚಿತ್ರಮಂದಿರ ಮಾಲೀಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಚಿತ್ರ ಪ್ರದರ್ಶನಕ್ಕೆ ನಂತರ ಅನುವು ಮಾಡಿಕೊಡಲಾಗಿದೆ. ಅದಾಗ್ಯೂ ನಟ ಜಗ್ಗೇಶ್ ಅವರ ಪೋಸ್ಟರ್ ಮುಚ್ಚುವಂತೆ ಚುನಾವಣೆ(election) ಅಧಿಕಾರಿ ತಿಳಿಸಿದ್ದಾರೆ. ಈ ಹಿನ್ನೆಲೆ ಚಿತ್ರಮಂದಿರ ಮುಂದೆ ಹಾಕಲಾದ ಪೋಸ್ಟರ್(poster) ಗೆ ಬಿಳಿ ಹಾಳೆಯಿಂದ ಜಗ್ಗೇಶ್(jaggesh) ಮುಖಮುಚ್ಚಿ, ಥಿಯೇಟರ್ ಒಳಗಡೆ ಚಿತ್ರ ಪ್ರದರ್ಶನ ಮಾಡಲಾಗ್ತಿದೆ
![](https://pratidhvani.com/wp-content/uploads/2023/05/Jaggesh-2.webp)
![](https://pratidhvani.com/wp-content/uploads/2023/05/48f35854-65b1-4c4e-8c2d-9e4348c5debb-18-1024x143.jpg)