• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಪುನೀತ್ ರಾಜಕುಮಾರ್ ಶ್ರೇಷ್ಠ ಮಾನವತಾವಾದಿ:ಬಸವರಾಜ ಬೊಮ್ಮಾಯಿ

ಪ್ರತಿಧ್ವನಿ by ಪ್ರತಿಧ್ವನಿ
September 25, 2025
in Top Story, ಕರ್ನಾಟಕ, ರಾಜಕೀಯ, ಸಿನಿಮಾ
0
ಪುನೀತ್ ರಾಜಕುಮಾರ್ ಶ್ರೇಷ್ಠ ಮಾನವತಾವಾದಿ:ಬಸವರಾಜ ಬೊಮ್ಮಾಯಿ
Share on WhatsAppShare on FacebookShare on Telegram

ಚಿಕ್ಕಮಗಳೂರು: ದಿವಂಗತ ಪುನೀತ್ ರಾಜಕುಮಾರ್ ಒಬ್ಬ ನಟ ಎನ್ನುವುದಕ್ಕಿಂತ ಒಬ್ಬ ಮುಗ್ಧವಾಗಿರುವ ಶ್ರೇಷ್ಠ ಮಾನವತಾವಾದಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಅವರು ಚಿಕ್ಕಮಗಳೂರಿನಲ್ಲಿ ಡಾ. ರಾಜಕುಮಾರ ಅಭಿಮಾನಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಡಾ. ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತ್ ರಾಜಕುಮಾರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಡಾ. ರಾಜಕುಮಾರ ಅಭಿಮಾನಿ ಸಂಘದವರು ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಮಾಡಲು ಬರಬೇಕು ಎಂದು ಹೇಳಿದರು. ನನಗೆ ಪುನಿತ್ ರಾಜಕುಮಾರ್ ಅವರ ಮೇಲಿನ ಪ್ರೀತಿ ವಿಶ್ವಾಸ ನನ್ನನ್ನು ಸೆಳೆದು ಇಲ್ಲಿಗೆ ತಂದಿದೆ. ಒಬ್ಬ ವ್ಯಕ್ತಿ ಅತ್ಯಂತ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದರೆ ಕರ್ನಾಟಕದಲ್ಲಿ ಪುನಿತ್ ರಾಜಕುಮಾರ್ ಮಾತ್ರ ಅವರನ್ನು ಕಂಡರೆ ಎಲ್ಲ ಜನ ಹಿರಿಯರು, ಕಿರಿಯರು ಎಲ್ಲರೂ ಬಹಳಷ್ಟು ಪ್ರೀತಿ ಅಭಿಮಾನ ವ್ಯಕ್ತಪಡಿಸುತ್ತಿದ್ದರು. ಡಾ. ರಾಜಕುಮಾ‌ರ್ ಅವರ ಮೇಲಿರುವ ಪ್ರೀತಿ, ಅಷ್ಟೇ ಪ್ರೀತಿ ಪುನಿತ್ ರಾಜಕಮಾರ ಮೇಲೆ ಕನ್ನಡದ ಜನರು ತೋರಿಸಿದ್ದಾರೆ. ಆ ಆಕರ್ಷಕವಾಗಿರುವ ವ್ಯಕ್ತಿತ್ವ ಮತ್ತು ಆ ನಗು ಎಂತಹ ಪರಿಚಯ ಇಲ್ಲದವರನ್ನೂ ಕೂಡ ಆಕರ್ಷನೀಯ ಮಾಡುವ ಶಕ್ತಿ ಪುನಿತ್ ರಾಜಕುಮಾರ್ ಅವರಲ್ಲಿತ್ತು ಎಂದು ಹೇಳಿದರು.

SL Bhyrappa passes away: ಭೈರಪ್ಪನವರ ಸ್ಮಾರಕ ಮಾಡಬೇಕು ಅನ್ನೋ ಬೇಡಿಕೆ.. DCM ಡಿಕೆಶಿ ಹೇಳಿದ್ದೇನು?#pratidhvani

ಮುಗ್ದತೆ ಕಾಪಾಡಿಕೊಂಡಿದ್ದರು
ಎಲ್ಲಕ್ಕಿಂತ ಎರಡು ಕಷ್ಟದ ಕೆಲಸಗಳು ನಾವು ಮಕ್ಕಳಿದ್ದಾಗ ನಮ್ಮ ಮುಖ ಮುಗ್ಧವಾಗಿರುತ್ತದೆ. ದೊಡ್ಡವರಾದ ಮೇಲೆ ಅಕ್ರಾಳವಿಕ್ರಾಳ ಆಗುತ್ತವೆ. ಅದನ್ನು ಜೀವನ ಇಡಿ ಎಲ್ಲರೂ ಕಾಯ್ದುಕೊಳ್ಳುವುದು ಕಷ್ಟ ಪುನೀತ್ ರಾಜಕುಮಾ‌ರ್ ಅವರು ನಲವತ್ತು ವರ್ಷ ಆದೂ ಮುಗ್ಧತೆ ಕಾಪಾಡಿಕೊಂಡು ಬಂದಿದ್ದರು. ಒಳ್ಳೆಯ ಮನಸ್ಸು ಇದ್ದರೆ ಮಾತ್ರ ಅದನ್ನು ಕಾಪಾಡಿಕೊಂಡು ಬರಲು ಸಾಧ್ಯ. ನಾನು ಪುನಿತ್ ರಾಜಕುಮಾರ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ನೋಡಿಕೊಂಡು ಬಂದಿದ್ದೇನೆ. ಅವರು ಬದುಕಿದ್ದರೆ ಭಾರತದಲ್ಲಿಯೇ ಅತ್ಯಂತ ಪ್ರಸಿದ್ದ ನಟ ಪುನಿತ್ ರಾಜಕುಮಾರ ಆಗುತ್ತಿದ್ದರು. ಬಾಲ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅಭಿನಯ ಕಲೆ ಅವರಿಗೆ ದೈವದತ್ತವಾಗಿ ಬಂದಿತ್ತು. ಅವರ ಸಾವು ಬಹಳ ಅನಿರೀಕ್ಷಿತ ಅವರ ಸಾವಿಗಿಂತ ನಾಲ್ಕು ದಿನ ಮುಂಚೆ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಅಕಾಡೆಮಿ ಕಾರ್ಯಕ್ರಮದ ಉದ್ಘಾಟನೆಗೆ ಕರೆಯಲು ಬಂದಿದ್ದರು. ಅವರ ಸಾವಿನ ಸುದ್ದಿ ಕೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಆದರೆ, ದುರ್ದೈವ ಸತ್ಯವಾಗಿತ್ತು. ಡಾ. ರಾಜಕುಮಾ‌ರ್ ಅವರ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಆದ ಘಟನೆ ಆಗದಂತೆ ನಾನು ಎಲ್ಲರ ಸಹಕಾರದಿಂದ ಶಾಂತಿಯುತವಾಗಿ ಪುನಿತ್ ರಾಜಕುಮಾ‌ರ್ ಅವರ ಅಂತ್ಯ ಸಂಸ್ಕಾರ ಮಾಡಿದೆ. ರಾಜಕುಮಾ‌ರ್ ಕುಟುಂಬದ ಶಿವರಾಜಕುಮಾರ, ರಾಘವೇಂದ್ರ ರಾಜಕುಮಾರ್, ಸಾ.ರಾ. ಗೋವಿಂದು, ರಾಜಕೀಯ ನಾಯಕರು, ಪೊಲೀಸ್ ಇಲಾಖೆ ಎಲ್ಲರೂ ಸಹಕಾರ ನೀಡಿದರು ಎಂದು ಹೇಳಿದರು.

ಕರ್ನಾಟಕ ರತ್ನ
ಪುನಿತ್ ರಾಜಕುಮಾರ್ ಒಬ್ಬ ನಟ ಎನ್ನುವುದಕ್ಕಿಂತ ಒಬ್ಬ ಮುಗ್ಧವಾಗಿರುವ ಶೇಷ್ಠ ಮಾನವತಾವಾದಿ. ಬಹಳ ಜನ ನಾನು ಅವರ ಹಣೆಗೆ ಕೊಟ್ಟ ಮುತ್ತಿನ ಬಗ್ಗೆ ಚರ್ಚೆ ಮಾಡುತ್ತಾರೆ. ಬೆಳಗಿನ ಎರಡು ಗಂಟೆ ಸುಮಾರು ಇಪ್ಪತ್ತೈದು ಲಕ್ಷಕ್ಕಿಂತಲೂ ಹೆಚ್ಚು ಜನ ಬಂದಿದ್ದರು. ಅಂತಿಮ ದರ್ಶನ ಮಾಡುವಾಗ ನನ್ನ ಮೇಲೆ ನಾನು ನಿಯಂತಣ ಕಳೆದುಕೊಂಡು ನಾನು ಅವನ ಹಣೆಗೆ ಮುತ್ತು ಕೊಟ್ಟೆ, ಆ ಮುಗ್ಧತೆ ಆ ಸಾವಿನಲೂ ಇತ್ತು. ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಅವರು ಇರುತ್ತಾರೆ. ಪುನಿತ್ ರಾಜಕುಮಾರ್ ಅವರು ಈಗಲೂ ಎಲ್ಲರ ಹೃದಯದಲ್ಲಿ ಇದ್ದಾರೆ. ಒಬ್ಬ ವ್ಯಕ್ತಿಗೆ ಗೌರವ ಪೂರಕವಾಗಿ ವಿದಾಯ ಮಾಡುವುದು ಮುಖ್ಯ ಆ ಕೆಲಸ ನಾವು ಮಾಡಿದ್ದೇವೆ. ಪುನಿತ್ ರಾಜಕುಮಾರ್ ಅವರ ಅಭಿಮಾನಿಗಳು ಎಲ್ಲ ಕಡೆ ಇದ್ದಾರೆ. ಮಹಾರಾಷ್ಟ್ರದ ಗಡಿ ಭಾಗದ ಬೀದರ್‌ನಲ್ಲಿಯೂ ಅಭಿಮಾನಿಗಳಿದ್ದಾರೆ. ಪ್ರೀತಿಗೆ ಯಾವುದೇ ಗಡಿ ಇರುವುದಿಲ್ಲ. ಅಂತಹ ಪ್ರೀತಿ ಪುನಿತ್ ರಾಜಕುಮಾರ್ ಹುಟ್ಟು ಹಾಕಿದ್ದಾರೆ ಎಂದರು.

DK Shivakumar : ಕಾವೇರಿ ಆರತಿಗೆ ವೀಕ್ಷಣೆ ಮಾಡೋಕೆ ಹೋಗ್ತಿದ್ದೀನಿ  #pratidhvani #siddaramaiah #dkshivakumar

ಚಿಕ್ಕಮಗಳೂರಿನಲ್ಲಿ ರಾಜಕುಮಾ‌ರ್ ಅವರ ಅಭಿಮಾನಿಗಳು ಸಾಕಷ್ಟು ಇದ್ದಾರೆ. ಅವರಿಗೂ ಚಿಕ್ಕಮಗಳೂರಿನ ಬಗ್ಗೆ ಅಭಿಮಾನ ಇತ್ತು. ಅವರ ಬಹುತೇಕ ಚಿತ್ರಗಳು ಇಲ್ಲಿ ಚಿತ್ರೀಕರಣವಾಗಿವೆ. ಅದು ಪ್ರೀತಿ ವಿಶ್ವಾಸದಿಂದ ಪುನಿತ್ ರಾಜಕುಮಾರ ಪುತ್ಥಳಿ ಅನಾವರಣ ಮಾಡಲು ಕಾರಣವಾಗಿದೆ. ಪುನಿತ್ ರಾಜಕುಮಾ‌ರ್ ಪುಣ್ಯಸ್ಮರಣೆಯ ದಿನ ಕರ್ನಾಟಕ ಚಿತ್ರರಂಗದವರು, ತಮಿಳು, ತೆಲಗು ಚಿತ್ರರಂಗದವರು ಎಲ್ಲರೂ ಬಂದಿದ್ದರು. ಪುನಿತ್ ರಾಜಕುಮಾ‌ರ್ ಅವರ ಸವಿ ನೆನಪಿಗಾಗಿ ಏನಾದರೂ ಮಾಡಬೇಕೆಂದು ಎಲ್ಲರ ಬಯಕೆ ಇತ್ತು. ನನಗೆ ಕೊನೆವರೆಗೂ ಏನು ಮಾಡಬೇಕೆಂದು ಗೊಂದಲ ಇತ್ತು. ಸ್ಟೇಜ್ ಮೇಲೆ ಹೋದ ತಕ್ಷಣ ಕರ್ನಾಟಕ ರತ್ನವನ್ನು ಘೋಷಣೆ ಮಾಡಿದೆ. ತಂದೆ ಮಗ ಇಬ್ಬರೂ ಕರ್ನಾಟಕ ರತ್ನ ಪ್ರಶಸ್ತಿ ಪಡೆದಿದ್ದಾರೆ. ಕಿರಿಯ ವಯಸ್ಸಿನಲ್ಲಿ ಪುನಿತ್ ಕರ್ನಾಟಕ ರತ್ನವನ್ನು ಪಡೆದಿದ್ದಾರೆ. ಅಂತಹ ಕರ್ನಾಟಕ ರತ್ನನ ಪುತ್ಥಳಿ ಅನಾರವಣ ಮಾಡಲು ನನ್ನನ್ನು ಕರೆಯಿಸಿ ಗೌರವಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದರು.
ಕಾರ್ಯಕ್ರಮದಲಲಿ ಓಂಕಾರ ಗೌಡ, ಅಶ್ವಿನಿ ಪುನಿತ್ ರಾಜಕುಮಾರ್, ಶಾಸಕ ತಮ್ಮಯ್ಯ, ಮಾಜಿ ಸಚಿವ ಬಿ.ಎಲ್.ಶಂಕರ್, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಮತ್ತಿತರರು ಹಾಜರಿದ್ದರು.

Tags: basavaraj bommai on puneeth rajkumarbasavaraj bommai puneeth rajkumarcm basavaraj bommai kiss to puneeth rajkumarcm bbasavaraj bommai puneeth rajkumarcm bommai meet ashwini puneeth rajkumarcm bommai on power star puneeth rajkumarcm bommai on puneeth rajkumarcm bommai visit puneeth rajkumar houseDr Puneeth Rajkumarpuneet rajkumarpuneeth rajkumarpuneeth rajkumar and cm bommaipuneeth rajkumar namanapuneeth rajkumar no morerip puneeth rajkumar
Previous Post

ಕತ್ತೆಕಿರುಬ ತಪ್ಪಿಸಲು ಹೋಗಿ ರಸ್ತೆ ಬದಿ ಕಂದಕಕ್ಕೆ ಪೊಲೀಸ್ ಜೀಪ್ ಪಲ್ಟಿ ಪ್ರಕರಣ

Next Post

ಉಪ ಮುಖ್ಯಮಂತ್ರಿಗಳಿಂದ ಕಾವೇರಿ ಆರತಿ ಪರಿಶೀಲನೆ

Related Posts

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
0

"ಮನಮೋಹನ್ ಸಿಂಗ್ ಅವರು ಅನೇಕ ಅಧ್ಯಯನ ನಡೆಸಿ ನರೇಗಾ ಯೋಜನೆ ಜಾರಿಗೆ ತಂದಿದ್ದರು. ಮೋದಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್...

Read moreDetails

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

December 23, 2025

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025
ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

December 23, 2025
Next Post
ಉಪ ಮುಖ್ಯಮಂತ್ರಿಗಳಿಂದ ಕಾವೇರಿ ಆರತಿ ಪರಿಶೀಲನೆ

ಉಪ ಮುಖ್ಯಮಂತ್ರಿಗಳಿಂದ ಕಾವೇರಿ ಆರತಿ ಪರಿಶೀಲನೆ

Recent News

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada