ಇದೇ ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ(karnataka assembly election 2023) ನಡೆಯಲಿದೆ. ಈಗಾಗಲೇ ಪಕ್ಷದ ನಾಯಕರು ರಾಜ್ಯದ ಮೂಲೆ ಮೂಲೆಗೂ ತಿರುಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕನಕಪುರ(kanakapura) ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK shivakumar) ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಂದಾಯ ಸಚಿವ ಆರ್.ಅಶೋಕ್(R ashok) ಸ್ಪರ್ಧಿಸುತ್ತಿದ್ದಾರೆ. ಇಂದು ಕನಕಪುರ ಕ್ಷೇತ್ರದಲ್ಲಿ ಆರ್.ಅಶೋಕ್ ಮತ ಪ್ರಚಾರ ನಡೆಸಬೇಕಿತ್ತು. ಆದರೆ ಪ್ರಚಾರ ದಿಢೀರ್ ರದ್ದಾಗಿದೆ. ಹೌದು.. ಕನಕಪುರದಲ್ಲಿ ಇಂದೇ ಡಿಕೆಶಿ ಪರ ಡಿಕೆ ಸುರೇಶ್(DK suresh) ಪ್ರಚಾರ ನಡೆಸಲಿದ್ದು, ಬಿಜೆಪಿ –ಕಾಂಗ್ರೆಸ್(BJP – congress) ಅಭ್ಯರ್ಥಿಗಳು ಒಂದೇ ಮಾರ್ಗದಲ್ಲಿ ಪ್ರಚಾರ ಮಾಡಿದ್ರೆ ಘರ್ಷಣೆ ಎದುರಾಗುವ ಸಂದರ್ಭ ಬರಬಹುದು ಅಂತ ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಚಾರವನ್ನ ರದ್ದು ಮಾಡಲಾಗಿದೆ.
![](https://pratidhvani.com/wp-content/uploads/2023/05/hRE3TFDg.jpg)
ಬಿಜೆಪಿ ಅಭ್ಯರ್ಥಿ(BJP candidate) ಆರ್ ಅಶೋಕ್, ಕನಕಪುರ(kanakapura) ಕ್ಷೇತ್ರದ ಅರಳಾಳು ಸಂದ್ರಗೇಟ್, ಚಿಕ್ಕಮುದವಾಡಿ, ಚಿಕ್ಕೇನಹಳ್ಳಿ ವಾಡೇದೊಡ್ಡಿ ಮುಂತಾದೆಡೆ ಪ್ರಚಾರ ಮಾಡಬೇಕಿತ್ತು. ಆದ್ರೆ ಇದೇ ಮಾರ್ಗದಲ್ಲಿ ಸಂಸದ ಡಿಕೆ ಸುರೇಶ್ ಅವರು ಡಿಕೆ ಶಿವಕುಮಾರ್(DK shivakumar) ಪರವಾಗಿ ಪ್ರಚಾರ ನಡೆಸುವ ಹಿನ್ನೆಲೆ ಅಶೋಕ್ ಪ್ರಚಾರಕ್ಕೆ ಪೊಲೀಸರು(police) ನಿರಾಕರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಘರ್ಷಣೆ ನಡೆಯುವ ಸಾಧ್ಯತೆ ಹಿನ್ನೆಲೆ ಪೊಲೀಸರಿಂದ ಅನುಮತಿ ನಿರಾಕರಿಸಲಾಗಿದೆ.
![](https://pratidhvani.com/wp-content/uploads/2023/05/WhatsApp-Image-2023-05-02-at-8.36.24-PM-1-1024x143.jpeg)