• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

‘PLANDEMIC : THE HIDDEN AGENDA BEHIND COVID-19’ ಸಾಕ್ಷ್ಯ ಚಿತ್ರ ಬಿಚ್ಚಿಟ್ಟ ಸತ್ಯಗಳೇನು..?

by
May 13, 2020
in ದೇಶ
0
‘PLANDEMIC : THE HIDDEN AGENDA BEHIND COVID-19’ ಸಾಕ್ಷ್ಯ ಚಿತ್ರ ಬಿಚ್ಚಿಟ್ಟ ಸತ್ಯಗಳೇನು..?
Share on WhatsAppShare on FacebookShare on Telegram

ಅಮೆರಿಕಾ ಮೂಲದ ನಿರ್ದೇಶಕ ಮಿಕ್ಕಿ ವಿಲ್ಲೀಸ್ ಎಂಬವರು PLANDEMIC: The Hidden Agenda Behind Covid-19 ಎಂಬ ಶಿರ್ಷಿಕೆಯಡಿ ಒಂದು ಸಾಕ್ಷ್ಯ ಚಿತ್ರ ತಯಾರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಸದ್ಯ ಇಡೀ ಜಗತ್ತಿನ ಚರ್ಚೆಯ ಕೇಂದ್ರ ಬಿಂದುವಾಗಿರುವ ಕರೋನಾ ವೈರಸ್ ಕುರಿತಾದ ವೀಡಿಯೋವಾಗಿದೆ. ವೀಡಿಯೋದಲ್ಲೂ ಹಲವು ವೈದ್ಯರ ತುಣುಕು ಮಾತುಗಳು, ಹಿರಿಯ ವೈದ್ಯರ ಹಳೆಯ ಭಾಷಣಗಳ ತುಣುಕುಗಳ ಜೊತೆಗೆ ಅಮೆರಿಕಾದ ಖ್ಯಾತ ಸಂಶೋಧಕಿ ಡಾ. ಜುಡಿ ಮಿಕೋವಿಟ್ಸ್ ಎಂಬವರ ಸಂದರ್ಶನವನ್ನು ಒಳಗೊಂಡಿದೆ.

ADVERTISEMENT

ಈ ಹಿಂದೆ ಜುಡಿ ಮಿಕೋವಿಟ್ಸ್ ಬರೆದಿದ್ದ PLAGUE OF CORRUPTION ಎಂಬ ಕೃತಿ ದೊಡ್ಡ ಮಟ್ಟದಲ್ಲಿ ಸದ್ದಾಗಿತ್ತು. ಪ್ಲೇಗ್ ಎಂಬ ವೈರಾಣುವನ್ನು ಮುಂದಿಟ್ಟುಕೊಂಡು ನಡೆದ ಭ್ರಷ್ಟಾಚಾರದ ಜೊತೆಗೆ ವಿಜ್ಞಾನ ನಡೆದುಕೊಳ್ಳಬೇಕಾದ ರೀತಿ ಮತ್ತು ಪ್ಲೇಗ್ ಸೋಂಕಿನ ಬಗ್ಗೆ ವಿವರಿಸಿಲಾಗಿತ್ತು. ಈ ಕಾರಣಕ್ಕೆ ಆಗಿನ ಅಮೆರಿಕಾ ಸರ್ಕಾರ ಜುಡಿ ಮಿಕೋವಿಟ್ಸ್ ರನ್ನು ಜೈಲಿಗೆ ಅಟ್ಟಿತು. ಐದು ವರ್ಷದ ಸೆರೆವಾಸದ ಬಳಿಕ ಜುಡಿ ಬಿಡುಗಡೆಗೊಂಡು ಹೊರಬಂದಿದ್ದರು. ಆದರೆ ಈಗ ಮತ್ತೆ ಈ ವಿಚಾರವನ್ನುಮುನ್ನಲೆಗೆ ತಂದಿದ್ದು ಅಮೆರಿಕಾದ ನಿರ್ದೇಶಕ ಮಿಕ್ಕಿ ವಿಲ್ಲೀಸ್.

ಜುಡಿ ಮಿಕೋವಿಟ್ಸ್ ಪ್ಲೇಗ್ ತೆರೆಯಲ್ಲಿ ನಡೆದ ಹುನ್ನಾವರನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಇದೇ ಕಾರಣಕ್ಕೆ ಮಿಕ್ಕಿ ವಿಲ್ಲೀಸ್ ನಿರ್ಮಿಸಿದ ಈ ʼಕೋವಿಡ್ 19 ಹಿಂದಿನ ಹಿಡೆನ್ ಅಜೆಂಡಾʼ ಸಾಕ್ಷ್ಯ ಚಿತ್ರದಲ್ಲಿ ಜುಡಿ ಅವರನ್ನ ಸಂದರ್ಶಿಸಲಾಗಿದೆ. ಈ ಸಾಕ್ಷ್ಯ ಚಿತ್ರ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ಚರ್ಚೆಯೊಂದಕ್ಕೆ ನಾಂದಿಹಾಡಿದೆ. ಈ ಸಾಕ್ಷ್ಯ ಚಿತ್ರದಲ್ಲಿ ಈ ಕೋವಿಡ್ 19 ಎಂಬುವುದು ಒಂದು ಹುನ್ನಾರವೆಂದು ಹೇಳಲಾಗಿದೆ. ಅಮೆರಿಕಾದ ರಾಷ್ಟ್ರೀಯ ಸಾಂಕ್ರಾಮಿಕ ರೋಗದ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಅಂಟೋನಿ ಫೌಚಿ ಇದರ ಹಿಂದಿರುವ ಕಾಣದ ಕೈ ಎಂದು ನೇರವಾಗಿ ಆರೋಪಿಸಲಾಗಿದೆ. ಅಲ್ಲದೇ ಈ ಸಾಕ್ಷ್ಯ ಚಿತ್ರದಲ್ಲಿ ಕೆಲವು ವೈದ್ಯರ ಬೈಟ್ ಗಳನ್ನು ನೀಡಲಾಗಿದ್ದು, ಒಬ್ಬಾತ ವೈದ್ಯ, ರೋಗಿಯ ಮೃತ ಕಾರಣದ ಪಟ್ಟಿಯಲ್ಲಿ ಕೋವಿಡ್ 19 ಎಂದು ಸೇರಿಸಲು ಸರ್ಕಾರ ಒತ್ತಾಯಿಸಿತು ಎಂಬುವುದಾಗಿ ಹೇಳಿದ್ದಾರೆ.

ಸುಮಾರು 26 ನಿಮಿಷಗಳ ಈ ವಿಡಿಯೋದಲ್ಲಿ ಕೋವಿಡ್ 19 ಎಂಬ ವೈರಸ್ ಹರಡಿದ್ದಲ್ಲ ಬದಲಿಗೆ ಉದ್ದೇಶಪೂರ್ವಕವಾಗಿ ಹರಡಿಸಿದ್ದು ಎಂಬ ಮಹತ್ವದ ಅಂಶವನ್ನು ಸಂಶೋಧಕಿ ಜುಡಿ ಮಿಕೋವಿಟ್ಸ್ ಬಯಲು ಮಾಡಿದ್ದಾರೆ. ಇಡೀ ಜಗತ್ತೇ ನಂಬಿರುವ ಹಾಗೆ, ಕರೋನಾ ವೈರಸ್ ಮೊಟ್ಟಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ಎಂಬಲ್ಲಿ ಎಂಬುವುದರ ಬಗ್ಗೆ ಮಾತನಾಡಿದ ಜುಡಿ, ವುಹಾನ್ ನಲ್ಲಿರುವ ಲ್ಯಾಬೋರೇಟರಿಯೊಂದರಲ್ಲಿ ಮೊಟ್ಟಮೊದಲು ಈ ಕರೋನಾ ವೈರಸ್ ಮೊದಲು ಪತ್ತೆಯಾಗಿದೆ. ಆದರೆ ಈ ಲ್ಯಾಬ್ ಜತೆಗೆ ಅಮೆರಿಕಾದ ಸಾಂಕ್ರಾಮಿಕ ಇಲಾಖೆಯ ನಿರ್ದೇಶಕ ಫೌಚಿ ಅವರು ನಿಖಟ ಸಂಪರ್ಕ ಹೊಂದಿದ್ದಾರೆ ಎಂದು ಮತ್ತೊಂದು ಅನುಮಾನದ ಕಟ್ಟೆ ಹೊಡೆಸಿದ್ದಾರೆ.

ಅಂದಹಾಗೆ, ಸಂಶೋಧಕಿ ಜುಡಿ ಮಿಕೋವಿಟ್ಸ್ ಸದ್ಯಕ್ಕೆ ನಿವೃತ್ತಿ ಹೊಂದಿದ್ದಾರೆ. ಆದರೆ ಈ ಹಿಂದೆ ವೃತ್ತಿಯಲ್ಲಿರುವ ಸಂಧರ್ಭದಲ್ಲಿ ಇದೇ ಅಂಟೋನಿ ಫೌಚಿ ಅವರ ತಂಡದ ಭಾಗವಾಗಿದ್ದವರು ಇವರು. ಯಾವುದೇ ಸರ್ಕಾರ ಬಂದರೂ ಫೌಚಿ ಇಲಾಖೆಯ ನಿರ್ದೇಶಕರಾಗಿಯೇ ಉಳಿದುಬಿಡುತ್ತಾರೆ ಎಂಬುವುದನ್ನು ಜುಡಿಯವರು ವ್ಯಂಗ್ಯವಾಗಿ ನುಡಿದಿದ್ದಾರೆ.

ಈ ಸಂದರ್ಶನದಲ್ಲಿ ʻಭಯಾನಕʼ ಎಂಬ ಪದ ಉಪಯೋಗಿಸಿಕೊಂಡೇ ವಿಚಾರಗಳನ್ನು ಮುಂದಿಟ್ಟಿರುವ ಜುಡಿ, ಮಾನವೀಯತೆಯನ್ನು ಸೆರೆವಾಸದಲ್ಲಿ ಇಡಲಾಗಿದೆ ಎಂದು ಸಂಕಟ ಪಟ್ಟರು. ಮನುಷ್ಯನೊಳಗಿರುವ ಭಯವನ್ನು ಬಯಲಿಗೆಳೆದು ಅದನ್ನೇ ಬಂಡವಾಳ ಮಾಡಿಕೊಳ್ಳುವ ಪಿತೂರಿ ಸಿದ್ಧಾಂಥವನ್ನು ಪೋಷಿಸಲಾಗುತ್ತಿದೆ. ಇದೊಂದು ಷಡ್ಯಂತ್ರ ಎಂದು ಬೊಟ್ಟು ಮಾಡಿದರು. ಟ್ರಂಪ್ ಸರ್ಕಾರ ತನ್ನ ವೈದ್ಯರ ಮೇಲೆ ವಿನಾಃಕಾರಣ ಒತ್ತಡ ಹೇರುತ್ತಿದೆ ಮತ್ತು ಷಡ್ಯಂತ್ರ ರೂಪದಲ್ಲಿ ಕೋವಿಡ್ 19 ಬಗ್ಗೆ ಜನರಲ್ಲಿ ಭಯ ಹುಟ್ಟಿಸುವ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ಯಕ್ಕೆ ಈ ಸಾಕ್ಷ್ಯ ಚಿತ್ರದ ಕುರಿತು ಅಂತರ್ಜಾಲ ವೇದಿಕೆಯಲ್ಲಿ ಭರದ ಚರ್ಚೆ ಸಾಗಿದ್ದು ಹತ್ತು ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅಲ್ಲದೇ ಕೆಲವು ತಾಣಗಳಲ್ಲಿ ಈ ವೀಡಿಯೋವನ್ನು ಅಪ್ಲೋಡ್ ಮಾಡಿದ ಕೆಲವೇ ಕೆಲವು ಸಮಯಗಳಲ್ಲಿ ವೀಡಿಯೋವನ್ನು ತಡೆಹಿಡಿಯಲಾಗಿದೆ. ಸದ್ಯಕ್ಕೆ ʼಬಿಟ್ ಚುಟ್ʼ ಎಂಬ ಅಂತರ್ಜಾಲ ತಾಣದಲ್ಲಿ ಟ್ರೆಂಡ್ ನಲ್ಲಿದೆ.

Tags: AmericaChinaConscpiracy therorycovid19IndiaJudy MikovitsMikki Willisplandemic documentry
Previous Post

ಕರೋನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿ

Next Post

ಆತ್ಮನಿರ್ಭರ್‌ ಪ್ಯಾಕೇಜ್:‌ ಇಂದು ಸಂಜೆ ನಿರ್ಮಲಾ ಸೀತರಾಮನ್‌ ಪತ್ರಿಕಾಗೋಷ್ಟಿ

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ಆತ್ಮನಿರ್ಭರ್‌ ಪ್ಯಾಕೇಜ್:‌ ಇಂದು ಸಂಜೆ ನಿರ್ಮಲಾ ಸೀತರಾಮನ್‌ ಪತ್ರಿಕಾಗೋಷ್ಟಿ

ಆತ್ಮನಿರ್ಭರ್‌ ಪ್ಯಾಕೇಜ್:‌ ಇಂದು ಸಂಜೆ ನಿರ್ಮಲಾ ಸೀತರಾಮನ್‌ ಪತ್ರಿಕಾಗೋಷ್ಟಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada