ಗೌರಿ – ಗಣೇಶ ಹಬ್ಬದ ಹಿನ್ನಲೆಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಊರುಗಳಿಗೆ ಹೊರಟಿದ್ದಾರೆ ಜನ. ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಜಮಾಯಿಸಿದ್ದು, ಗಣೇಶ ಹಬ್ಬದ ಪ್ರಯುಕ್ತ KSRTC ವಿಶೇಷ ಹೆಚ್ಚುವರಿ ಬಸ್ ಸೇವೆ ಒದಗಿಸಿದೆ.

ಒಟ್ಟು 1,500 ಹೆಚ್ಚುವರಿ ವಿಶೇಷ ಬಸ್ ನಿಯೋಜನೆ ಮಾಡಿದ್ದು, ಶನಿವಾರ ಗಣೇಶ ಚತುರ್ಥಿ, ಸೆಪ್ಟೆಂಬರ್ 8 ರಂದು ಭಾನುವಾರ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಹುಟ್ಟೂಗಳಿಗೆ ಹೊರಟಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಹಾಸನ, ರಾಯಚೂರು, ಬೀದರ್, ಯಾದಗಿರಿ, ಹೈದ್ರಾಬಾದ್, ತಿರುಪತಿ, ವಿಜಯವಾಡ, ಕಾರವಾರ, ಕಲಬುರಗಿ ಭಾಗಗಳಿಗೆ ಹೆಚ್ಚುವರಿ ಬಸ್ ಸೇವೆ ನೀಡಲಾಗಿದೆ.
ಹೊರ ಜಿಲ್ಲೆಗಳಿಗೂ ಕಾರ್ಯಾಚರಣೆ ಶುರು ಮಾಡಿವೆ ಬಿಎಂಟಿಸಿ ಬಸ್ಗಳು. KSRTCಯಲ್ಲಿ ಬಸ್ಗಳ ಕೊರತೆ ಎದುರಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ಗಳನ್ನ ಬಳಸಿಕೊಳ್ಳಲು KSRTC ನಿರ್ಧಾರ ಮಾಡಿದೆ. ಹಬ್ಬಕ್ಕಾಗಿ ಹೆಚ್ಚುವರಿ 200 ಬಿಎಂಟಿಸಿ ಬಸ್ಗಳನ್ನು KSRTC ಬಳಸಿಕೊಳ್ತಿದೆ. ಶಿವಮೊಗ್ಗ, ಧಾರವಾಡ, ತುಮಕೂರು , ಕೋಲಾರ, ಮೈಸೂರು ಭಾಗದಲ್ಲಿ BMTC ಬಸ್ ಕಾರ್ಯಾಚರಣೆ ಮಾಡುತ್ತಿದೆ.

1500 ಬಸ್ಗಳನ್ನು ಹೆಚ್ಚುವರಿಯಾಗಿ ನೀಡಿದರೂ ಬಸ್ಗಳಲ್ಲಿ ಜನರೋ ಜನ ಎನ್ನುವಂತಾಗಿದೆ. ಮತ್ತಷ್ಟು ಹೆಚ್ಚುವರಿ ಬಸ್ಗಳಿಗೆ ಬೇಡಿಕೆ ಬಂದಿದೆ. ಉತ್ತರ ಕರ್ನಾಟಕ ಕಡೆ ಹೊರಡುತ್ತಿರುವ ಬಸ್ಸುಗಳು ತುಂಬಿ ತುಳುಕುತ್ತಿವೆ. ಹುಬ್ಬಳ್ಳಿ, ದಾವಣಗೆರೆ, ತಿರುಪತಿ, ಬಳ್ಳಾರಿ, ಧಾರವಾಡ, ಚಿತ್ರದುರ್ಗ, ಗದಗ, ಬೆಳಗಾವಿ, ಹೊಸಪೇಟೆ, ಯಲಬುರ್ಗಾ, ಗಂಗಾವತಿ, ಜಮಖಂಡಿ, ರಾಯಚೂರು, ಬಾಗಲಕೋಟೆ, ಕೊಪ್ಪಳ ಕಡೆ ಹೋಗುತ್ತಿರುವ ಬಸ್ಸುಗಳು ಹೌಸ್ಫುಲ್ ಆಗಿ ಹೋಗುತ್ತಿವೆ.