ಒಡಿಶಾದಲ್ಲಿ ರೈಲು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಡುವ ಅನೇಕ ರೈಲುಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದವರ ಹಣ ಮರುಪಾವತಿ ಮಾಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬೆಂಗಳೂರಿನಿಂದ ಹೊರಬೇಕಿದ್ದ ಬೆಂಗಳೂರು – ಕಾಮಾಖ್ಯ ಎಸಿ ಎಸ್ಎಫ್ ಎಕ್ಸ್ಪ್ರೆಸ್ 12551, ಬೆಂಗಳೂರು – ಹೌರಾ ಎಕ್ಸ್ಪ್ರೆಸ್ 12864, ಬೆಂಗಳೂರು – ಭಾಗಲ್ಪುರ್ ಅಂಗ ಎಕ್ಸ್ಪ್ರೆಸ್ 12253 ರದ್ದುಗೊಂಡಿವೆ.

ಇನ್ನು ಅನೇಕ ರೈಲುಗಳ ಮಾರ್ಗ ಕೂಡ ಬದಲಾವಣೆಯಾಗಿದ್ದು ಈ ಬಗ್ಗೆ ಕೂಡ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. 12246 ಬೆಂಗಳೂರು – ಹೌರಾ ಎಕ್ಸ್ಪ್ರೆಸ್ ರೈಲು ನರಾಜ್-ಅಂಗುಲ್-ಸಂಬಲ್ಪುರ್ ನಗರ-ಜಾರ್ಸುಗುಡಾ ಮೂಲಕ ಪ್ರಯಾಣಿಸಲಿದೆ. 12503 ಬೆಂಗಳೂರು-ಅಗರ್ತಲಾ ಎಕ್ಸ್ಪ್ರೆಸ್ ಬೆಂಗಳೂರಿನಿಂದ ತಿಟಿಲಗಢ ಜಾರ್ಸುಗುಡಾ, ಬೆಂಗಳೂರು-1286 ಮೂಲಕ ಸಂಚರಿಸಲಿದೆ..












