ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ (Session) ಆರಂಭವಾಗಿದೆ.ಅಧಿವೇಶನಕ್ಕೆ ಬಿಜೆಪಿ, ಜೆಡಿಎಸ್ (Bjp & Jds) ನಾಯಕರು ಪಾದಯಾತ್ರೆ ಮೂಲಕ ಆಗಮಿಸಿದ್ರು. ವಾಲ್ಮೀಕಿ ನಿಗಮದಲ್ಲಿ (Valmiki developement) ನಡೆದ ಅಕ್ರಮ ಖಂಡಿಸಿ ಪಾದಯಾತ್ರೆ ನಡೆಸೋ ಮೂಲಕ ಆಕ್ರೋಶ ಹೊರಹಾಕಿದ್ರು.

ಶಾಸಕರ ಭವನದಿಂದ ವಿಧಾನಸೌಧದವರೆಗೂ ಪಾದಯಾತ್ರೆ ನಡೆಸಿ ಸಿಎಂ (Cm), ಬಸನಗೌಡ ದದ್ದಲ್ (Basana gowda daddal) ರಾಜೀನಾಮೆಗೆ ಆಗ್ರಹಿಸಿದ್ರು. ವಿಪಕ್ಷ ನಾಯಕ ಆರ್.ಅಶೋಕ್ (R Ashok), ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ (BY Vijayendra) ಸೇರಿದಂತೆ ಬಿಜೆಪಿ, ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ರು.

ಇನ್ನು ಅಧಿವೇಶನಕ್ಕೆ ತೆರಳುವ ಮುನ್ನ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮುಖ್ಯಮಂತ್ರಿಗಳಿಗೆ ನಿಜವಾಗೂ ತಾಕತ್ತಿದ್ದರೆ ಮೂಡ ಹಗರಣವನ್ನ (MUDA) ಸಿಬಿಐ (CBI)ತನಿಖೆಗೆ ಕೊಡಬೇಕು. ಮುಡಾ ಹಗರಣ ದೊಡ್ಡ ಹಗರಣ, ಹೀಗಾಗಿ ಮುಡಾ ಹಗರಣವನ್ನ ಸಿಬಿಐಗೆ ಕೊಡಲೇಬೇಕು. ತನಿಖೆಯನ್ನ ಸಿಬಿಐಗೆ ಕೊಡುವವರೆಗೂ ನಾವು ಹೋರಾಟ ಮಾಡ್ತವೆ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು.