• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಕರ್ನಾಟಕವನ್ನು ಸಿದ್ದರಾಮಯ್ಯ, ಡಿಕೆಶಿ ನೋಡ್ಕೊಳ್ತಾರೆ.. ನಿಮ್ಮದು ನೀವು ನೋಡ್ಕಳಿ..!

Krishna Mani by Krishna Mani
April 17, 2024
in Uncategorized
0
ರಣಕಣವಾದ ಹಳೆ ಮೈಸೂರು ಭಾಗದ ಲೋಕಸಭಾ ಕದನ! ನಾಳೆ ಮೈಸೂರಿನಲ್ಲಿ ಅಬ್ಬರಿಸಲಿರುವ ನಮೋ !
Share on WhatsAppShare on FacebookShare on Telegram

ಕರ್ನಾಟಕದ ಮಾನವನ್ನು ಕಳೆಯಲು ಮುಂದಾದ ಕೇರಳ ಕಾಂಗ್ರೆಸ್‌ಗೆ ಮಾಜಿ ಇನ್ಫೋಸಿಸ್‌ ಡೈರೆಕ್ಟರ್‌‌ ಮೋಹನ್‌ ದಾಸ್‌ ಪೈ (TV Mohan Das Pai) ಸರಿಯಾಗಿಯೇ ಚಾಟಿ ಬೀಸಿದ್ದಾರೆ. ಕೇರಳದ ತಿರುವನಂತಪುರಂ (Thiruvananthapuram) ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿರುವ ರಾಜೀವ್‌ ಚಂದ್ರಶೇಖರ್‌ (Rajeev Chandrasekhar) ಅವರನ್ನು ಅಣಿಯಲು ಕಾಂಗ್ರೆಸ್‌ ಟೀಕಾಪ್ರಹಾರ ಮಾಡಿತ್ತು. ಬೆಂಗಳೂರಿನಲ್ಲಿ ಕಾಂಗ್ರೆಸ್‌ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗೆ ರಾಜೀವ್‌ ಚಂದ್ರ ಶೇಖರ್‌ ಅಡ್ಡಿಯಾಗಿದ್ದರು ಎಂದು ವಾಗ್ದಾಳಿ ಮಾಡಿತ್ತು. ಇದಕ್ಕೆ ಉದ್ಯಮಿ ಮೋಹನ್‌ ದಾಸ್‌ ಪೈ ಕೇರಳ ಕಾಂಗ್ರೆಸ್‌ನ ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಕಾಂಗ್ರೆಸ್ ಪಕ್ಷದ ಕೇರಳ ಘಟಕ ರಾಜೀವ್‌ ಚಂದ್ರಶೇಖರ್‌ ವಿರುದ್ಧ ವಾಗ್ದಾಳಿ ಮಾಡಿತ್ತು. X ಪೋಸ್ಟ್‌ನಲ್ಲೂ ಈ ಬಗ್ಗೆ ಪೋಸ್ಟ್‌ ಮಾಡಿತ್ತು. ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸ್ಟೀಲ್-ಬ್ರಿಡ್ಜ್ ಯೋಜನೆ (Steel-Bridge Project) ಮಾಡಲು ಮುಂದಾಗಿತ್ತು. ಆದರೆ ಆ ಯೋಜನೆ ವಿರುದ್ಧ ಆಂದೋಲನದ ನೇತೃತ್ವ ವಹಿಸಿದ್ದ ರಾಜೀವ್ ಚಂದ್ರಶೇಖರ್, ಬಹು ದೊಡ್ಡ ಯೋಜನೆಯನ್ನು ಕೈಬಿಡುವಂತೆ ಮಾಡಿದ್ದರು. ಅದರಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಹೋಗಲು ಸಾಧ್ಯವಾಗದೆ 2016 ರಲ್ಲಿ 374 ಜನರು ವಿಮಾನವನ್ನು ತಪ್ಪಿಸಿಕೊಳ್ಳುವಂತೆ ಆಗಿತ್ತು. 7 ಕಿಲೋ ಮೀಟರ್‌ ದೂರ ಸಂಚಾರ ಮಾಡಲು 45 ನಿಮಿಷದಿಂದ 1 ಗಂಟೆ ಕಾಲ ಬೇಕಾಗಿದೆ. 1,350 ಕೋಟಿ ವೆಚ್ಚದ 6.7 ಕಿಲೋ ಮೀಟರ್ ಉದ್ದದ 6 ಲೈನ್ ಸ್ಟೀಲ್ ಫ್ಲೈಓವರ್ ಮಾಡಿದ್ದರೆ ಸಾಕಷ್ಟು ಆ್ಯಂಬುಲೆನ್ಸ್‌ ಸಂಚಾರಕ್ಕೂ ಅನುಕೂಲ ಆಗ್ತಿತ್ತು ಎಂದಿತ್ತು.

Siddu, DK will take care of Bengaluru, mind your own business, Pai tells Congress in Kerala – The Economic … https://t.co/hP7mSFUuHF via @economictimes. @CongressKeralam should stop abusing Bengaluru

— Mohandas Pai (@TVMohandasPai) April 14, 2024

ಬೆಂಗಳೂರಿನ ನಿವಾಸಿ ಆಗಿರುವ ರಾಜೀವ್‌ ಚಂದ್ರಶೇಖರ್‌ ಮೂಲತಃ ಮಲಯಾಳಿ, ತಿರುವನಂತಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಶಶಿ ತರೂರ್ ವಿರುದ್ಧ ಸ್ಪರ್ಧಿಸಿದ್ದಾರೆ. ಈ ವೇಳೆ ರಾಜೀವ್‌ ಚಂದ್ರಶೇಖರ್‌ ಅವರನ್ನು ಅಣಿಯಲು ಕಾಂಗ್ರೆಸ್‌ನ ಪಕ್ಷದ ಕೇರಳ ಘಟಕ ಕರುನಾಡಿನ ಬಗ್ಗೆ ಮಾತನಾಡಿದ್ದಕ್ಕೆ ಎಕ್ಸ್‌ ಪೋಸ್ಟ್‌ನಲ್ಲೇ ತಿರುಗೇಟು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಲ್ಲಿ ನಮ್ಮ ಜೀವನವನ್ನು ಹೇಗೆ ಸುಧಾರಿಸಬೇಕು ಎಂದು ತಿಳಿದಿದ್ದಾರೆ. ನಿಮ್ಮದನ್ನು ನೀವು ನೋಡಿಕೊಳ್ಳಿ, ಕೇರಳದಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ವಲಸೆ ಹೋಗುತ್ತಿರುವುದನ್ನು ತಡೆದು ಕೇರಳವನ್ನು ಉಳಿಸಿಕೊಳ್ಳಿ ಎಂದು ಕಿಚಾಯಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಲು ಮುಂದಾಗಿದ್ದ ಸ್ಟೀಲ್‌ ಬ್ರಿಡ್ಜ್‌ ಯೋಜನೆಗೆ ಬೆಂಗಳೂರು ಫೌಂಡೇಷನ್‌ ಸೇರಿದಂತೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಕೇಳಿ ಬಂದಿತ್ತು. ಅದೇ ಕಾರಣಕ್ಕೆ ಸ್ಟೀಲ್‌ ಬ್ರಿಡ್ಜ್‌ ಯೋಜನೆಯನ್ನು ಕಾಂಗ್ರೆಸ್‌‌ ಸರ್ಕಾರ ಕೈಬಿಡಬೇಕಾಗಿ ಬಂದಿತ್ತು. ಇದನ್ನು ಕೆಣಕಿದ ಕಾಂಗ್ರೆಸ್‌ ಕೇರಳ ಘಟಕ ಸರಿಯಾಗಿಯೇ ಪೆಟ್ಟು ತಿಂದಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ತಿದ್ದ ಮೋಹನ್‌ ದಾಸ್‌ ಪೈ ಅವರು ಇದೀಗ ಕರ್ನಾಟಕವನ್ನು ಜರಿದಿದ್ದಕ್ಕಾಗಿ ಕೇರಳ ಕಾಂಗ್ರೆಸ್‌ ಘಟಕವನ್ನು ಟೀಕಿಸಿರುವುದು ಭಾರೀ ಪ್ರಶಂಸೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೃಷ್ಣಮಣಿ

Tags: congressCongress PartyKeralalokasabhaMohandas Pairajiv chandrashekersteel bridgeಕೇರಳಬಿಜೆಪಿಸಿದ್ದರಾಮಯ್ಯ
Previous Post

ಬಿಜೆಪಿ ಸಂಸದ ಕಾಂಗ್ರೆಸ್‌ ಸೇರ್ಪಡೆ ಖಚಿತ.. ಸಂಸದ ಸ್ಥಾನಕ್ಕೆ ರಾಜೀನಾಮೆ..

Next Post

ಕರ್ನಾಟಕದಲ್ಲಿ 18 ಕೋಟಿ ಹಣ ಸೀಜ್‌.. ಯಾರದ್ದು ಗೊತ್ತಾ..?

Related Posts

ಗ್ಯಾರಂಟಿಗೆ ಹಣವಿಲ್ಲ, ಅಭಿವೃದ್ಧಿಗೆ ರೂಪಾಯಿಯೂ ಇಲ್ಲ: ಬಿ.ವೈ.ವಿಜಯೇಂದ್ರ
Uncategorized

ಗ್ಯಾರಂಟಿಗೆ ಹಣವಿಲ್ಲ, ಅಭಿವೃದ್ಧಿಗೆ ರೂಪಾಯಿಯೂ ಇಲ್ಲ: ಬಿ.ವೈ.ವಿಜಯೇಂದ್ರ

by ಪ್ರತಿಧ್ವನಿ
March 5, 2026
0

ಚಿಕ್ಕೋಡಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣದ ಅಭಾವ ಎದುರಿಸುತ್ತಿದ್ದು, ಅಭಿವೃದ್ಧಿಗೆ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ....

Read moreDetails
ಷೇರು ಮಾರುಕಟ್ಟೆ ಹೂಡಿಕೆ  ಲಾಭದ ಆಸೆ ತೋರಿಸಿ  5 ತಿಂಗಳಿನಲ್ಲಿ  ಒಟ್ಟು 1420 ಕೋಟಿ ರೂ ವಂಚನೆ

ಯುದ್ಧ: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ; ಇಂದು ಇಷ್ಟು ಲಕ್ಷ ಕೋಟಿ ನಷ್ಟ!

March 4, 2026
“ಒಳ ಮೀಸಲಾತಿ ಜಾರಿ ಮಾಡದೇ ಹುದ್ದೆ ಭರ್ತಿಯಾದರೆ, ರಾಜ್ಯದಲ್ಲಿ ಮುಂದಿನ ಘಟನೆಗಳಿಗೆ ನೀವೇ ಹೊಣೆ”

“ಒಳ ಮೀಸಲಾತಿ ಜಾರಿ ಮಾಡದೇ ಹುದ್ದೆ ಭರ್ತಿಯಾದರೆ, ರಾಜ್ಯದಲ್ಲಿ ಮುಂದಿನ ಘಟನೆಗಳಿಗೆ ನೀವೇ ಹೊಣೆ”

March 4, 2026
ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

ಇರಾಕ್ -ಇರಾನ್ ಯುದ್ಧ: ಸೋಮವಾರ ಇಡೀ ದಿನ ನಡೆದದ್ದೇನು?

March 3, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
ಕರ್ನಾಟಕದಲ್ಲಿ 18 ಕೋಟಿ ಹಣ ಸೀಜ್‌.. ಯಾರದ್ದು ಗೊತ್ತಾ..?

ಕರ್ನಾಟಕದಲ್ಲಿ 18 ಕೋಟಿ ಹಣ ಸೀಜ್‌.. ಯಾರದ್ದು ಗೊತ್ತಾ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada