
ಡಿನೋಟಿಫಿಕೇಷನ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದರು. ಕೃಷ್ಣೇಭೈರೇಗೌಡ ನೇತೃತ್ವದಲ್ಲಿ ಸುದ್ದಿಗೋಷ್ಠಿ ಮಾಡಿ ಯಾರೋ ಬರೆದು ಕೊಟ್ಟಿದ್ದನ್ನ ಓದಿದ್ದಾರೆ. 3 ತಿಂಗಳಿಂದ ನನ್ನನ್ನ ಸಿಕ್ಕಿಸಲು ಪ್ಲ್ಯಾನ್ ಮಾಡಿದ್ದಾರೆ. ನನ್ನ ಹೆಂಡತಿಯ ತಾಯಿಯ ಪ್ರಾಪರ್ಟಿ ಹೌದು. ಆ ಪ್ರಾಪರ್ಟಿ ಕಾನೂನಾತ್ಮಕವಾಗಿ ಸರಿಯಿದೆ ಅಂತ ತಿರುಗೇಟು ನೀಡಿದ್ದಾರೆ. ಕೃಷ್ಣಭೈರೇಗೌಡ ವಿದೇಶದಲ್ಲಿ ಓದಿ ಬಂದಿದ್ದಾರೆ. ಬಹಳ ಮೇಧಾವಿ ಎಂದುಕೊಂಡಿದ್ದೆ. ಹೆಬ್ಬೆಟ್ಟು ರೀತಿ ಮಾತನಾಡಿದ್ದಾರೆ ಎಂದಿದ್ದರು. ಈ ಮಾತಿಗೆ ಕಥಷ್ಣಬೈರೇಗೌಡ ತಿರುಗೇಟು ನೀಡಿದ್ದಾರೆ.

ಹೆಬ್ಬೆಟ್ಟು ಎಂದ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಕೃಷ್ಣ ಭೈರೆಗೌಡ ತಿರುಗೇಟು ನೀಡಿದ್ದಾರೆ. ಹೆಬ್ಬೆಟ್ಟು, ಸತ್ಯ ಹರಿಶ್ಚಂದ್ರನಾ ಅಂತ ವೈಯುಕ್ತಿಕವಾಗಿ ಮಾತನಾಡಿದ್ದಾರೆ. ವೈಯುಕ್ತಿಕ ಮಟ್ಡಕ್ಕೆ ಇಳಿದು ನಾನು ಮಾತನಾಡಲ್ಲ. ಅದು ಯಾವತ್ತು ನನ್ನ ಸಂಸ್ಕೃತಿ ಅಲ್ಲ. ನಾನು ಯಾವತ್ತೂ ಸತ್ಯಹರಿಶ್ಚಂದ್ರ ಅಂತ ಮಾತನಾಡಿಲ್ಲ. ಈ ವಿಚಾರದಲ್ಲಿ ವಿಷಯಾಂತರ ಬೇಡ. ಯಾರು ಅಸ್ತಿತ್ವದಲ್ಲೇ ಇರದ ದಾರಿಯಲ್ಲಿ ಹೋಗುವ ದಾಸಯ್ಯ ರಾಜಶೇಖರ್ನಿಂದ ಅರ್ಜಿ ಪಡೆದಿದ್ದು ನಿಜನಾ..? ಇಲ್ವ..? ಎಂದು ಪ್ರಶ್ನಿಸಿದ್ದಾರೆ.

ಪ್ರಕರಣದಲ್ಲಿ ಸಂಬಂಧವಿಲ್ಲದ ರಾಜಶೇಖರ್ನ ಅರ್ಜಿ ಪುಟಪ್ ಮಾಡಲು ಬರೆದಿದ್ದು ನಿಜನಾ ಅಲ್ವ..? ಯಾರದೋ ಜಮೀನು ಡಿನೋಟಿಪೈ ಮಾಡಲು ಮನವಿ ಕೊಟ್ಟ ರಾಜಶೇಖರ್ ಯಾರು..? ಡಿನೋಟಿಪೈ ಆದ ಜಮೀನು ನಿಮ್ಮ ಅತ್ತೆಗೆ ಜಿಪಿಎ ಆಗಿದ್ದು ನಿಜಾನ ಅಲ್ವ…? ಅನಿತಾ ಕುಮಾರಸ್ವಾಮಿ ನಿಮ್ಮ ಧರ್ಮಪತ್ನಿ ಹೌದ ಅಲ್ವ..? ವಿಮಲಾರವರು ಅತ್ತೆ ಹೌದ ಅಲ್ವ..? ಕುಟುಂಬದ ಲಾಭಕ್ಕಾಗಿ ಫೈಲ್ ಪುಟಪ್ ಮಾಡಿ ಅಂತ ಬರೆದಿದ್ದು ಹೌದ ಅಲ್ವ..? ಸತ್ತ ವ್ಯಕ್ತಿ ಹೆಸರಿಗೆ ಡಿನೋಟಿಪೈ ಆಗಿದ್ದು ನಿಜಾನ ಇಲ್ವ..? ಮುಡಾದಲ್ಲೂ ಬಾಮೈದನಿಗೆ ರಿಜಿಸ್ಟರ್ ಆಗಿದೆ, ಗಂಗೇನಹಳ್ಳಿಯಲ್ಲೂ ಬಾಮೈದನಿಗೆ ರಿಜಿಸ್ಟರ್ ಆಗಿದೆ. ಚುನಾವಣಾ ರಾಜಕೀಯದಲ್ಲಿ ಇರೋರು ಯಾವತ್ತೂ ಸತ್ಯಹರಿಶ್ಚರಂದ್ರ ಆಗಿರಲು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ.
ನಾನು ಎಲ್ಲೂ ಕದ್ದು ಹೋಗಲ್ಲ ಎಂದಿದ್ದ ಕುಮಾರಸ್ವಾಮಿ, ಸುಳ್ಳು ಹೇಳಿಕೊಂಡು ಬೇರೆಯವರ ನೆರಳನ್ನು ತೆಗೆದುಕೊಳ್ಳುವುದಿಲ್ಲ. ನನಗೂ ಆರೋಪ ಮಾಡಿರುವ ಪ್ರಾಪರ್ಟಿಗೂ ಸಂಬಂಧವಿದೆ. ಇಲ್ಲ ಅಂತ ನಾನು ಹೇಳಲ್ಲ. ನನ್ನ ಹೆಂಡತಿಯ ತಾಯಿಯ ಪ್ರಾಪರ್ಟಿ ಅದು. ಪ್ರಾಪರ್ಟಿ ಕಾನೂನಾತ್ಮಕವಾಗಿ ಸರಿಯಿದೆ. ಯಾವುದೇ ಅಕ್ರಮ ಆಗಿಲ್ಲ. ಕೃಷ್ಣಭೈರೇಗೌಡ ವಿದೇಶದಲ್ಲಿ ಓದಿ ಬಂದಿದ್ದಾರೆ. ಬಹಳ ಮೇಧಾವಿ ಎಂದುಕೊಂಡಿದ್ದೆ. ಹೆಬ್ಬೆಟ್ಟು ರೀತಿ ಮಾತನಾಡಿದ್ದಾರೆ ಎಂದಿದ್ದಾರೆ. ನಾನು ಹರದನಹಳ್ಳಿ ಎಂಬ ಹಳ್ಳಿಯಲ್ಲಿ ಓದೀದವನು. ಕೃಷ್ಣೆಭೈರೇಗೌಡ ಕನಿಷ್ಠ ಏನಿದೆ ಎಂದು ಓದಬೇಕಿತ್ತು ಎಂದು ಕುಮಾರಸ್ವಾಮಿ ಟಾಂಗ್ ನೀಡಿದ್ದರು.