ನೆಲಮಂಗಲ(Nelamangala): ಮೆಟಲ್ ಗ್ಯಾಸ್ ಬ್ಲಾಸ್ಟ್(Glass Blast) ಆದ ಪರಿಣಾಮ ಇಬ್ಬರು ಕಾರ್ಮಿಕರು(workers) ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ಪೇಟೆ(Dabaspete) ಎಸ್ಕೆ ಸ್ಟೀಲ್ ಕಂಪನಿಯಲ್ಲಿ ನಡೆದಿದೆ.
ಬಿಹಾರ(Bihar) ಮೂಲದ ಅಶೋಕ್ ಕುಮಾರ್ (49), ಒಡಿಶಾ ಮೂಲದ ಮುಖೇಶ್ ಕುಮಾರ್(33) ಸಾವನ್ನಪ್ಪಿದ ಕಾರ್ಮಿಕರು. ಘಟನೆಯಲ್ಲಿ ಸುಶೀಲ್ ಕುಮಾರ್ ಎಂಬ ವ್ಯಕ್ತಿ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ(Victoria Hospital) ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರು(Police) ಈ ಕುರಿತು ತನಿಖೆ ಕೈಗೊಂಡಿದ್ದಾರೆ.