ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy murder case) ಬಳ್ಳಾರಿ ಜೈಲಿನಲ್ಲಿರೋ (Bellary jail) ನಟ ಆರೋಪಿ ದರ್ಶನ್ (Actor darshan) ತಮ್ಮ ತಾಯಿಯನ್ನ ನೋಡಬೇಕೆನ್ನುವ ಹಂಬಲ ವ್ಯಕ್ತಪಡಿಸಿದ್ದರು. ಹೀಗೆ ತಾಯಿ ಭೇಟಿಗೆ ಹಾತೊರೆಯುತ್ತಿದ್ದ ದರ್ಶನ್ ಆಸೆ ಇಂದಿಗೆ ಈಡೇರಿದೆ.
ದರ್ಶನ್ ತಾಯಿ ಮೀನಾ ತೂಗುದೀಪ (Meena toogudeep) ಬಳ್ಳಾರಿ ಜೈಲಿನಲ್ಲಿರೋ ತಮ್ಮ ಪುತ್ರನ ಭೇಟಿಯಾಗಿದ್ದಾರೆ. ಮಗಳು, ಅಳಿಯ ಮತ್ತು ಮೊಮ್ಮಕ್ಕಳ ಜೊತೆ ಜೈಲಿಗೆ ಆಗಮಿಸಿದ ಮೀನಾ ದರ್ಸನ್ರನ್ನ ಭೇಟಿಯಾದ್ರು.
ಜೈಲಿನಲ್ಲಿ ಮಗನ ಸ್ಥಿತಿ ನೋಡಿ ತಾಯಿ ಮೀನಾ ಕಣ್ಣೀರಿಟ್ಟಿದ್ದು, ದರ್ಶನ್ ಕೂಡ ಭಾವುಕರಾದ್ರು.ಆ ಬಳಿಕ ಸಮಾಧಾನ ಮಾಡಿಕೊಂಡು ತಾಯಿ ಹಾಗೂ ಸಹೋದರಿಯನ್ನ ಸಮಾಧಾನಪಡಿಸಿದ್ರು. ಮಗನಿಗಾಗಿ ಮೀನಾ ತೂಗುದೀಪ್ ಎರಡು ಬ್ಯಾಗ್ನಲ್ಲಿ ಸ್ವೀಟ್ಸ್, ಊಟದ ಬಾಕ್ಸ್, ಹಣ್ಣು ತಂದಿದ್ದರು.