
ಸ್ವಾತಂತ್ರ್ಯೋತ್ಸವ ಸಂಭ್ರಮದ ವೇಳೆ ರಾಷ್ಟ್ರಪತಿ ಪದ ಹಾಗು ಮುಖ್ಯಮಂತ್ರಿಗಳ ಪದಕ ಘೋಷಣೆ ಆಗುವುದು ಸಾಮಾನ್ಯ. ನಿನ್ನೆ ರಾಷ್ಟ್ರಪತಿ ಪದಕ 20 ಮಂದಿ ಪೊಲೀಸರಿಗೆ ಘೋಷಣೆ ಆಗಿತ್ತು. ಇದೀಗ ಮುಖ್ಯಮಂತ್ರಿಗಳ ಪದಕ ಘೋಷಣೆ ಆಗಿದೆ. ಆದರೆ ಗಾಂಜಾ ಪೆಡ್ಲರ್ಸ್ ಜೊತೆಗೆ ಲಿಂಕ್ ಇತ್ತು ಅನ್ನೋ ಕಾರಣಕ್ಕೆ ಅಮಾನತು ಆಗಿರುವ ಪೊಲೀಸ್ ಪೇದೆಗೂ ಮುಖ್ಯಮಂತ್ರಿ ಪದಕ ಬಂದಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ.
ಅಪರಾಧ ಪ್ರಕರಣದಲ್ಲಿ ಸಸ್ಪೆಂಡ್ ಆದ ಪೇದೆಗೆ ಸಿಎಂ ಮೆಡೆಲ್ ಬಂದಿದ್ದು, ಮುಖ್ಯಮಂತ್ರಿಗಳ ಪದಕಕ್ಕೆ ಬೆಲೆಯೇ ಇಲ್ಲವೇ..? ಎನ್ನುವಂತಾಗಿದೆ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದು, ಸಾರ್ವಜನಿಕರ ಆಸ್ತಿ ಕಳವಿಗೆ ಪರೋಕ್ಷವಾಗಿ ಸಹಾಯ ಮಾಡಿದ ಆರೋಪ ಮತ್ತು ದಾಖಲೆಗಳ ಸೋರಿಕೆ ಮಾಡುವ ಆರೋಪಗಳ ಹಿನ್ನಲೆ ಅಮಾನತು ಮಾಡಲಾಗಿತ್ತು. ಇದೀಗ ಮೈಸೂರು ಸಿಸಿಬಿ ಘಟಕದ ಮುಖ್ಯಪೇದೆ ಸಿಎಂ ಪದಕ ಬಂದಿದೆ.

ಒಂದು ತಿಂಗಳ ಹಿಂದೆ ಅಮಾನತಾಗಿರುವ ಮುಖ್ಯಪೇದೆ ಸಲೀಂ ಪಾಷಾ ಹೆಸರು, ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಪ್ರಕಟವಾಗಿದೆ. 2023 ನೇ ಸಾಲಿಗೆ ಆಯ್ಕೆಯಾದ ಪೊಲೀಸ್ ಸಿಬ್ಬಂದಿ ಅಧಿಕಾರಿಗಳ ಪಟ್ಟಿಯಲ್ಲಿ ಮುಖ್ಯಪೇದೆ ಸಲಾಂ ಪಾಷಾ ಹೆಸರು ಪ್ರಕಟ ಆಗಿದೆ. ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧಕೃತ್ಯ ನಡೆದಿತ್ತು.

ಕಳುವು ಹಾಗೂ ಗಾಂಜಾ ಪ್ರಕರಣಗಳ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಸಾಧಿಸಿದ್ದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕವೇ ಅಮಾನತು ಮಾಡಲಾಗಿತ್ತು. ಆದರೂ ಸಿಎಂ ಪದಕ ಪಟ್ಟಿಗೆ ಶಿಫಾರಸು ಮಾಡಿದ್ಯಾರು..? ಪದಕ ಸಿಗುವಂತೆ ಲಾಬಿ ಮಾಡಿದ್ಯಾರು ಅನ್ನೋ ಬಗ್ಗೆ ಜಾಲತಾಣದ ನಾಗರೀಕರ ಪ್ರಶ್ನೆ ಮಾಡುತ್ತಿದ್ದಾರೆ.
ಕೃಷ್ಣಮಣಿ




