ಒಂದೆಡೆ ದೇಶದ ಎಲ್ಲಾ ವಿಪಕ್ಷಗಳು ಒಗ್ಗಾಟ್ಟಾಗಿ ಬಿಜೆಪಿಯನ್ನು ವಿರೋಧಿಸುವ ಯೋಜನೆ ರೂಪಿಸುತ್ತಿದ್ದರೆ ಮತ್ತೊಂದೆಡೆ ಬಿಜೆಪಿ ಸೈಲೆಂಟಾಗಿ ಎನ್ಸಿಪಿಯ ಅಜಿತ್ ಪವಾರ್ರನ್ನು ತಮ್ಮ ತೆಕ್ಕೆಗೆ ಸೆಳೆದಿದೆ.
ಮಹಾರಾಷ್ಟ್ರದಲ್ಲಿ ಶಿಂಧೆ ನೇತೃತ್ವದ ಶಿವಸೇನೆ ಮತ್ತ ಬಿಜೆಪಿ ಅಧಿಕಾರದಲ್ಲಿದ್ದು ಈಗ ಎನ್ಸಿಪಿಯ ಅಜಿತ್ ಪವಾರ್ ತಮ್ಮ ಬೆಂಬಲಿಗರೊಂದಿಗೆ ಮೈತ್ರಿ ಸರ್ಕಾರದ ತೆಕ್ಕೆಗೆ ಜಾರಿದ್ದಾರೆ. ಅಜಿತ್ ಬಣದ 9 ಜನ ಶಾಸಕರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ತಮಗೆ 40 ಶಾಸಕರ ಬೆಂಬಲ ಇದೆ ಎಂದು ಹೇಳಿರುವ ಅಜಿತ್ ಪವಾರ್, ಇಂದು ಬೆಳ್ಳಂಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದು ತಮ್ಮ ನಿರ್ಧಾರ ಪ್ರಕಟಿಸಿದ್ದರು. ಈ ಹಠಾತ್ ನಿರ್ಧಾರಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.
ಹಿರಿಯ ನಾಯಕರಾದ ಛಗನ್ ಭುಜಬಲ, ದಿಲೀಪ್ ವಾಲ್ಸೆ ಸೇರಿದಂತೆ, ಧನಂಜಯ ಮುಂಡೆ, ಹಸನ್ ಮುಶ್ರೀಫ್, ಧರ್ಮರಾವ್ ಬಾಬಾ, ಅದಿತಿ ತಟಕಾರೆ, ಅನಿಲ್ ಪಾಟಿಲ್, ಸಂಜಯ್ ಬನ್ಸೋಡೆಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಇದೆ.






