ನಟ ದರ್ಶನ್ (Actor darshan) ವಿರುದ್ಧ ಮಾಫಿ ಸಾಕ್ಷಿಯಾಗುವಂತೆ ಸಹ ಆರೋಪಿಗಳಿಗೆ ಒತ್ತಡ ಹಾಕಲಾಗಿದೆ ಎಂದು ವಕೀಲ ಸುನೀಲ್ ಕುಮಾರ್ (Lawyer Sunil kumar) ಆರೋಪಿಸಿದ್ದಾರೆ. ಪೊಲೀಸರು ಮತ್ತು ವಕೀಲರ ಹೆಸರಲ್ಲಿ ಮೂರ್ನಾಲ್ಕು ಆರೋಪಿಗಳನ್ನ ಭೇಟಿಯಾಗಿ ದರ್ಶನ್ ವಿರುದ್ಧ ಮಾಫಿ ಸಾಕ್ಷಿಯಾಗುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ಕೂಡ ತರಲಾಗಿದ್ದು, ಅರ್ಜಿ ಹಾಕುವಂತೆ ಜಡ್ಜ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಕೋರ್ಟ್ಗೆ ಅರ್ಜಿ ಹಾಕಲಾಗುವುದು ಎಂದು ವಕೀಲ ಸುನೀಲ್ ಕುಮಾರ್ ಹೇಳಿದ್ದಾರೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಕೇಸ್ ಗೆ (Renuka swamy murder case) ಸಂಬಂಧಪಟ್ಟಂತೆ ಇಂದು ಸಿಟಿ ಸಿವಿಲ್ ಕೋರ್ಟ್ಗೆ A1 ಪವಿತ್ರಾ (Pavitra gowda), A2 ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ಹಾಜರಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡುವಾಗ ಪ್ರತಿ ವಿಚಾರಣೆ ವೇಳೆ ಕೋರ್ಟ್ಗೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿತ್ತು.ಇವತ್ತು ಬೆಳಗ್ಗೆ 11ಗಂಟೆ ಸುಮಾರಿಗೆ 57ನೇ ಸಿಸಿಹೆಚ್ ಕೋರ್ಟ್ ಗೆ ಆರೋಪಿಗಳು ಹಾಜರಾಗಿದ್ದರು.
ಇಂದು ನ್ಯಾ.ಜೈಶಂಕರ್ ಅವರಿಂದ ವಿಚಾರಣೆ ನಡೆದಿದೆ. ಈ ಹಿನ್ನಲೆ ಇವತ್ತು ಕೊರ್ಟ್ಗೆ ಪವಿತ್ರಾ, ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ಹಾಜರಾಗಿದ್ದರು.