ರಾಜ್ಯ ರಾಜಕೀಯದಲ್ಲಿ ತೀವ್ರ ಗದ್ದಲ ಎಬ್ಬಿಸಿರುವ ಪಠ್ಯ ಪರಿಷ್ಕರಣೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಜಕೀಯ ಮಾಡುವುದಕ್ಕಿಂತ ಕೂತು ಮಾತನಾಡುವುದು ಲೇಸು ಎಂದು ಸಾಹಿತಿಗಳಿಗೆ ತಿಳಿ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಈಶ್ವರಪ್ಪ ಈ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದಾಗ ಅವರ ವಿಚಾರಧಾರೆಗೆ ಅನುಗುಣವಾಗಿ ಪಠ್ಯವನ್ನು ತಯಾರಿಸಿದ್ದರು. ಇವತ್ತಿನ ಪರಿಷ್ಕರಣೆಯಾದ ಪಠ್ಯದ ಮೂಲಕ ಭಾರತೀಯ ಸಂಸ್ಕೃತ್ತಿಯನ್ನ ವಿದ್ಯಾರ್ಥಿಗಳಿಗೆ ಹೇಳಲು ಹೊರಟ್ಟಿದ್ದೇವೆ ಎಂದು ಹೇಳಿದ್ದಾರೆ.
ಸದ್ಯ ಪರಿಷ್ಕೃತವಾದ ಪಠ್ಯದಲ್ಲಿ ಯಾವ ಅಂಶಗಳು ಸರಿಯಿಲ್ಲ ಅದನ್ನು ತಿದ್ದಿ ಹೇಳುವ ಕೆಲಸ ಮಾಡಬೇಕು. ಅದರೆ, ಇಲ್ಲಿ ರಾಜಕೀಯ ತತ್ವ ಸಿದ್ದಾಂತಗಳನ್ನು ತಂದು ರಾಜ್ಯದಲ್ಲಿ ಗೊಂದಲು ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಪಠ್ಯಕ್ರಮ ಸರಿಯಿಲ್ಲ, ಲೇಖನ ಕೈಬಿಡುವಂತೆ ಪತ್ರಿಕಾ ಹೇಳಿಕೆ ನೀಡುವುದು ಸರಿಯಲ್ಲ ಇದನ್ನೆಲ್ಲ ನೋಡಿದರೆ ಇದರಲ್ಲಿ ಎಷ್ಟರ ಮಟ್ಟಿಗೆ ರಾಜಕಾರಣ ಅಡಗಿದೆ ಎಂದಬುದನ್ನ ಗಮನಿಸಬೇಕು ಎಂದಿದ್ದಾರೆ.
ತಮ್ಮ ಲೇಖನವನ್ನ ಕೈಬಿಡುವಂತೆ ಪತ್ರ ಬರೆದಿರುವ 9 ಮಂದಿ ಪೈಕಿ 7 ಜನರ ಪಾಠಗಳನ್ನ ಸಮಿತಿಯವರೇ ಕೈಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ದೇಶದ ಮಹಾಪುರುಷರ್ ಬಗ್ಗೆ ವಿದ್ಯಾರ್ಥಿಗಳು ಒದುವ ಬದಲು ವಿದೇಶಿಯರಾದ ನೆಫೋಲಿಯನ್, ಮೊಘಲರು ಹಾಗು ಮೈಸೂರು ಹುಲಿ ಟಿಪ್ಪು ಗೇಟ್ ಎಂದು ಮಕ್ಕಳು ಒದುತ್ತಿದ್ದರು ಇನ್ನಮೇಲೆ ಹಾಗಾಗುವುದಿಲ್ಲ ಅದನ್ನೆಲ್ಲ ಸರಿಪಡಿಸಲಾಗಿದೆ.






