• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಗಡಿ ವಿವಾದ: ಭಾರತ-ಚೀನಾ ಗಡಿಯಲ್ಲಿ 50,000 ಹೆಚ್ಚುವರಿ ಸೈನಿಕರ ನಿಯೋಜನೆ

Shivakumar A by Shivakumar A
June 29, 2021
in ವಿದೇಶ
0
ಗಡಿ ವಿವಾದ: ಭಾರತ-ಚೀನಾ ಗಡಿಯಲ್ಲಿ 50,000 ಹೆಚ್ಚುವರಿ ಸೈನಿಕರ ನಿಯೋಜನೆ
Share on WhatsAppShare on FacebookShare on Telegram

ಭಾರತ ಮತ್ತು ಚೀನಾ ನಡುವಿನ ಗಡಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಭಾರತ ಸೇನೆಯ 50,000 ಸೈನಿಕರನ್ನು ಹೆಚ್ಚುವರಿಯಾಗಿ ಚೀನಾ ಗಡಿಯಲ್ಲಿ ನಿಯೋಜಿಸಲಾಗಿದೆ. ಈಗ ಬರೋಬ್ಬರಿ ಎರಡು ಲಕ್ಷದಷ್ಟು ಸೈನಿಕರು ಭಾರತ ಚೀನಾ ಗಡಿಯನ್ನು ಕಾವಲು ಕಾಯುತ್ತಿದ್ದಾರೆ. ಹಲವು ದಶಕಗಳ ನಂತರ ಮೊದಲ ಬಾರಿಗೆ ಚೀನಾ ಗಡಿಯಲ್ಲಿ ಇಷ್ಟರ ಮಟ್ಟಿನ ಸೇನೆ ಜಮಾವಣೆಯಾಗಿದೆ.

ADVERTISEMENT

ಪ್ರಪಂಚದ ಎರಡನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ಚೀನಾದೊಂದಿಗೆ 1962ರಲ್ಲಿ ಭಾರತ ಕೊನೆಯ ಬಾರಿಗೆ ಯುದ್ದ ಮಾಡಿತ್ತು. ಇದಕ್ಕೂ ಮೊದಲು ಹಾಗೂ ನಂತರವೂ ಪಾಕಿಸ್ತಾನ ಗಡಿಯಡೆಗೆ ಹೆಚ್ಚಿನ ಗಮನ ಹರಿಸಲಾಗಿತ್ತು. 1962ರ ಬಳಿಕ ಚೀನಾ ಸೈನಿಕರೊಂದಿಗೆ ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಅತೀ ದೊಡ್ಡ ಮುಖಾಮುಖಿ ನಡೆದಿತ್ತು. ಭಾರತದ ಹಲವು ಸೈನಿಕರು ಈ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು.

ಈ ಘಟನೆಯ ನಂತರ ಪಾಕಿಸ್ತಾನದೊಂದಿಗೆ ನಡೆಯುತ್ತಿದ್ದ ಮುಸುಕಿನ ಯುದ್ದ ಅಲ್ಪಮಟ್ಟಿಗೆ ತಣ್ಣಗಾಗಿ, ಭಾರತವು ಚೀನಾ ಗಡಿಯೆಡೆಗೆ ಗಮನ ಹರಿಸಿತ್ತು. ಭಾರತ ಹಾಗೂ ಚೀನಾ ಎರಡೂ ರಾಷ್ಟ್ರಗಳು ಭಾರಿ ಸಂಖ್ಯೆಯಲ್ಲಿ ಸೇನೆ ಮತ್ತು ಸೇನಾ ಪರಿಕರಗಳ ಜಮಾವಣೆಯನ್ನು ಮಾಡಲು ಆರಂಭಿಸಿದ್ದವು. ಹಲವು ಬಾರಿ ಬೀಜಿಂಗ್ ನೊಂದಿಗೆ ಮಾತುಕತೆ ನಡೆಸಿದ ಬಳಿಕ ಸೇನೆಯನ್ನು ವಾಪಾಸ್ ಪಡೆಯಲು ತೀರ್ಮಾನಿಸಲಾಗಿತ್ತು. ಆದರೆ, ಇದ್ಯಾವುದೂ ಪ್ರಯೋಜವಾಗಿರಲಿಲ್ಲ.

ಈ ಹಿಂದೆ ಕೇವಲ ಚೀನಿ ಸೈನಿಕರನ್ನು ತಡೆಯಲು ಶಕ್ತವಾಗುವಷ್ಟು ಮಾತ್ರ ಸೇನಾ ತುಕಡಿಯನ್ನು ನಿಯೋಜಸಲಾಗಿತ್ತು. ಆದರೆ, ಈಗ ನಿಯೋಜಿಸಿರುವ ಸೇನಾ ತುಕಡಿಯ ಸಂಖ್ಯೆ ಚೀನಾ ಮೇಲೆ ದಾಳಿ ಮಾಡುವಷ್ಟು ಶಕ್ತವಾಗಿದೆ ಎಂದು ಮಿಲಿಟರಿ ತಜ್ಞರು ಹೇಳುತ್ತಾರೆ. ದಾಳಿಯ ಜತೆ ಜತೆಗೇ, ಚೀನಾ ವಶಪಡಿಸಿಕೊಂಡಿರುವ ಭೂಮಿಯನ್ನೂ ಭಾರತ ವಶಪಡಿಸಿಕೊಳ್ಳುವ ಸಾಧ್ಯತೆಗಳಿವೆ.
ಪ್ರಸ್ತುತ ಗಡಿಯಲ್ಲಿ ಚೀನಾ ದೇಶದ ಸೈನಿಕರು ಎಷ್ಟು ಸಂಖ್ಯೆಯಲ್ಲಿ ಜಮಾವಣೆಯಾಗಿದ್ದಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಆದರೆ, ಟಿಬೇಟ್ ನಲ್ಲಿ ನಿಯುಕ್ತರಾಗಿದ್ದ ಚೀನೀ ಸೈನಿಕರ ತುಕಡಿಯು, ಕ್ಸಿನ್ ಜಿಯಾಂಗ್ ಮಿಲಿಟರಿ ಕಮಾಂಡ್ ಜತೆ ಸೇರ್ಪಡೆಯಾಗಿದೆ. ಈ ಪಡೆಯು, ಹಿಮಾಲಯದುದ್ದಕ್ಕೂ, ಗಸ್ತು ತಿರುಗಲು ಬಳಸುವ ತುಕಡಿಯಾಗಿದೆ.

ಇನ್ನು ಟಿಬೆಟ್ ನ ವಿವಾದಿತ ಗಡಿಯಲ್ಲಿ ಹೊಸ ಏರ್ ಬೇಸ್ ಸೇರಿದಂತೆ ಯುದ್ದ ವಿಮಾನಗಳಿಗೆ ಬಾಂಬ್ ಪ್ರೂಫ್ ಬಂಕರ್ ಗಳನ್ನು ನಿರ್ಮಿಸಲು ಚೀನಾ ಆರಂಭಿಸಿದೆ. ಇದರೊಂದಿಗೆ, ಇತರ ಸೇನಾ ಪರಿಕರಗಳ ಜಮಾವಣೆಯತ್ತ ಕೂಡಾ ಚೀನಾ ಗಮನ ಹರಿಸಿದೆ.

ಈ ಹಂತದಲ್ಲಿ ಚೀನೀ ಸೈನಿಕರ ಬಲದ ಕುರಿತು ತಪ್ಪಾದ ಲೆಕ್ಕಾಚಾರ ಮಾಡಿದ್ದಲ್ಲಿ, ಗಲ್ವಾನ್ ಸಂಘರ್ಷಕ್ಕಿಂತಲೂ ದೊಡ್ಡ ಮಟ್ಟದ ಘರ್ಷಣೆ ಉಂಟಾಗುವ ಸಾಧ್ಯತೆಯಿದೆ. ಈ ಹಿಂದಿನಂತೆ ಯಥಾ ಸ್ಥಿತಿಯನ್ನು ಮುಂದುವರೆಸಲು ನಡೆಸಿರುವ ಮಾತುಕತೆಗಳು ಕೂಡಾ ಅಷ್ಟರಮಟ್ಟಿಗೆ ಪ್ರಯೋಜನವಾಗಲಿಲ್ಲ.

ಕಳೆದ ನಾಲ್ಕು ದಶಕಗಳಲ್ಲಿಯೇ ಕಂಡಿರದ ಮಟ್ಟಿಗೆ ಭಾರತ ಆರ್ಥಿಕತೆ ಪಾತಾಳಕ್ಕೆ ಇಳಿದಿದೆ. ಇಂತಹ ಸಂದರ್ಭದಲ್ಲಿ ಕೋವಿಡ್ ಸಂಕಷ್ಟವೂ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಸಂದರ್ಭದಲ್ಲಿ ಚೀನಾದೊಂದಿಗೆ ಕೈಮಿಲಾಯಿಸುವ ಪರಿಸ್ಥಿತಿ ಎದುರಾದರೆ, ಭಾರತ ದಿಟ್ಟ ಉತ್ತರವನ್ನು ನೀಡುವುದರಲ್ಲಿ ಸಂಶಯವೇನೂ ಇಲ್ಲ. ಆದರೆ, ಇದರ ಪರಿಣಾಮ ಭಾರತದ ಮೇಲೆ ಮತ್ತಷ್ಟು ಘೋರವಾಗಿರಲಿದೆ.

Previous Post

ಪೇರಲ ನಾಡಿನ ರೈತರು ಸಂಕಷ್ಟದಲ್ಲಿ: ಒಂದೂವರೆ ವರ್ಷದಿಂದ ನಷ್ಟದಿಂದ ತತ್ತರಿಸಿದ ಬೆಳೆಗಾರರು

Next Post

ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಜಗಳದಲ್ಲಿ ಲಾಭ ಹುಡುಕುತ್ತಿರುವ ಪರಮೇಶ್ವರ್, ಮುನಿಯಪ್ಪ

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ವಿದೇಶ

ಅಮೆರಿಕದ ಹೊಸ ಮಸೂದೆಯಿಂದ ಭಾರತೀಯರಿಗೆ ಆತಂಕ ಹೆಚ್ಚಳ

by ಪ್ರತಿಧ್ವನಿ
April 27, 2026
0

 ಅಮೆರಿಕದಲ್ಲಿ H-1B ವೀಸಾ ನೀತಿಯನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ರಿಪಬ್ಲಿಕನ್ ಶಾಸಕರ ಗುಂಪೊಂದು ಹೊಸ ಮಸೂದೆಯನ್ನು ಮಂಡಿಸಿದ್ದು, ಇದು ವಿದೇಶಿ ಉದ್ಯೋಗಿಗಳ, ವಿಶೇಷವಾಗಿ ಭಾರತೀಯರ ನಡುವೆ ಆತಂಕವನ್ನು ಹೆಚ್ಚಿಸಿದೆ.ಅರಿಜೋನಾ...

Read moreDetails
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

April 27, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
Next Post
ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಜಗಳದಲ್ಲಿ ಲಾಭ ಹುಡುಕುತ್ತಿರುವ ಪರಮೇಶ್ವರ್, ಮುನಿಯಪ್ಪ

ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಜಗಳದಲ್ಲಿ ಲಾಭ ಹುಡುಕುತ್ತಿರುವ ಪರಮೇಶ್ವರ್, ಮುನಿಯಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada