ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಆತಂಕ ಶುರುವಾಗಿದೆ . ಸಚಿವ ಸಂಪುಟ (Cabinet) ಪುನರಚನೆ ಮಾಡುವ ಮೂಲಕ , ಸಚಿವರುಗಳ (Ministers) ತಲೆದಂಡವಾಗಲಿದೆ ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ .ಇದಕ್ಕೆ ಕಾರಣ ಲೋಕಸಭಾ ಚುನಾವಣೆಯ ಫಲಿತಾಂಶ.
![](https://pratidhvani.com/wp-content/uploads/2024/05/IMG_7838.jpeg)
ಈ ಬಾರಿ ರಾಜ್ಯದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳನ್ನ (Parliment seats) ಗೆಲ್ಲಲೇಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಸಚಿವರುಗಳ ಮಕ್ಕಳು ಮತ್ತು ಕುಟುಂಬಸ್ಥರಿಗೆ ಟಿಕೆಟ್ (Ticket) ನೀಡುವ ಮೂಲಕ ರಣತಂತ್ರ ರೂಪಿಸಿತ್ತು . ತಮ್ಮ ಕುಟುಂಬದ ಸದಸ್ಯರನ್ನ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನ ಸಚಿವರ ಹೆಗಲಿಗೆ ನೀಡಿತ್ತು.
![](https://pratidhvani.com/wp-content/uploads/2024/05/IMG_7837.jpeg)
ಒಂದು ವೇಳೆ ಸಚಿವರು ಈ ಜವಾಬ್ದಾರಿಯಲ್ಲಿ ಎಡವಿದರೆ ,ಅಂದ್ರೆ ತಮ್ಮ ಮಕ್ಕಳನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗದಿದ್ದಲ್ಲಿ ಆ ಸಚಿವರ ತಲೆದಂಡವಾಗಲಿದೆ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನೆ ಮಾಡಲಾಗಿತ್ತು. ಇದೀಗ ಮತ್ತೆ ಆ ಚರ್ಚೆ ಮುನ್ನೆಲೆಗೆ ಬಂದಿದ್ದು ಸಂಪುಟ ಪುನರ್ ರಚನೆಯಾದರೆ ಫಲಿತಾಂಶ ಬಂದ ನಂತರ ಯಾವೆಲ್ಲ ಸಚಿವರ ತಲೆದಂಡವಾಗಲಿದೆಯೋ ಎಂಬ ಆತಂಕ ಹೆಚ್ಚಾಗಿದೆ.