ಮುಂದಿನ ತಿಂಗಳು ನಡೆಯುವ ಗೋವಾ ಚುನಾವಣೆ ನಿಮಿತ್ತ ಇಂದು ಎಎಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ವರ್ಚುವಲ್ ಸಭೆಯಲ್ಲಿ ಈ ಕುರಿತು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಂತ್ರಿ ಅರವಿಂದ್ ಕೇಜ್ರಿವಾಲ್ ಭಂಡಾರಿ ಸಮುದಾಯದ ಅಮಿತ್ ಪಾಲೇಕರ್ರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ.
ವರ್ಚುವಲ್ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ಬೇರೆ ಪಕ್ಷಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತಾಗಿ ಯಾವುದೇ ಆಯ್ಕೆಗಳಿಲ್ಲ. ಆದರೆ, ಎಎಪಿ ಮುಂಚಿತವಾಗಿಯೇ ಘೋಷಿಸುತ್ತಿದ್ದೆ ಮತ್ತು ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು, ಸ್ಥಳೀಯವಾಗಿ ಈ ಸಮುದಾಯ ಹೆಚ್ಚಾಗಿ ಇರುವ ಕಾರಣ ಮತ್ತು ರಾಜಕೀಯದಲ್ಲಿ ಅಷ್ಟಾಗಿ ಪ್ರಾತಿನಿತ್ಯ ಪಡೆಯದ ಕಾರಣ ಈ ಸಮುದಾಯದ ನಾಯಕನನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.