ರಾಷ್ಟ್ರೀಯ ಸ್ವಯಂಸೇವಾ ಸಂಘದ ಶತಮಾನೋತ್ಸವದ ಅಂಗವಾಗಿ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭಾಷಣ ಮಾಡಿದರು.

ಹೊಗಳಿಕೆಗಾಗಿ ಆರ್ಎಸ್ಎಸ್ ಏನನ್ನೂ ಮಾಡುವುದಿಲ್ಲ. ಆರ್ ಎಸ್ ಎಸ್ ತನಗೋಸ್ಕರ ಏನನ್ನು ಮಾಡಿಕೊಳ್ಳುವುದಿಲ್ಲ.ನಾವು ಇನ್ನು 5000 ಕಾರ್ಯಕ್ರಮಗಳನ್ನು ಮಾಡುತ್ತೇವೆ.ಇಂದಿನ ಕಾರ್ಯಕ್ರಮಕ್ಕೆ ಮೈದಾನ ಪಡೆಯಲು ಓಡಾಡಿಸಿದರು. ನೀವು ಮೈದಾನ ಕೊಡದಿದ್ದರೆ ರಸ್ತೆಗಳನ್ನೇ ಮೈದಾನ ಮಾಡುತ್ತೇವೆ ಎಂದರು ಬಿ.ಎಲ್. ಸಂತೋಷ್.

ಟಿಪ್ಪು ಸುಲ್ತಾನ್ 1 ಲಕ್ಷ ಜನರನ್ನ ಕೊಂದ ಎಂಬುದು ದ್ವೇಷ ಭಾಷಣ ಅಲ್ಲ. ಅದು ಇತಿಹಾಸ ನಿಮಗೆ ಅದು ಸಹಿಸಲು ಸಾಧ್ಯವಿಲ್ಲ ಎಂದಾದರೆ ಅದನ್ನು ದ್ವೇಷ ಭಾಷಣ ಎನ್ನಬಹುದು. ಹಿಂದುತ್ವ ಹಾಗೂ ಹಿಂದೂ ರಾಷ್ಟ್ರ ಯಾರ ವಿರುದ್ಧವೂ ಅಲ್ಲ ಎಂದು ಬಿ ಎಲ್ ಸಂತೋಷ್ ತಿಳಿಸಿದರು.






