ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಈಗಿನಿಂದಲೇ ತಯಾರಿಯನ್ನ ಆರಂಭಿಸಿವೆ, ಪರಿಣಾಮವಾಗಿ ಕೆಲ ನಾಯಕರು ಲೋಕಸಭೆ ಚುನಾವಣೆಗೆ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಇದಕ್ಕಾಗಿ ಹಲವು ಮಂದಿ ಲಾಭಿಯನ್ನ ಆರಂಭಿಸಿದ್ದಾರೆ. ಇದರ ನಡುವೆ ಈಗ ಹೆಚ್.ವಿಶ್ವನಾಥ್ ಕೂಡ ನಾನು ಸಹ ಟಿಕೆಟ್ ಕೇಳೋಣ ಅಂದುಕೊಂಡಿದ್ದೀನಿ, ಮುಂದಿನ ದಿನಗಳಲ್ಲಿ ಏನಾಗುತ್ತೋ ನೋಡೋಣ, ಯತೀಂದ್ರ ಹೆಸರು ಪ್ರಸ್ತಾಪ ಆಗಿದೆ, ಅದು ಒಳ್ಳೆಯದೇ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋಡೋಣ, ಡಿಕೆಶಿ ಒಳ್ಳೆಯ ಸ್ನೇಹಿತರು, ಈಗ ಡಿಸಿಎಂ ಆಗಿದ್ದಾರೆ, ಅವರನ್ನ ಭೇಟಿ ಮಾಡಿದ್ದೇನೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಹೆಚ್ಡಿಕೆ – ಬೊಮ್ಮಾಯಿ ವಿರುದ್ಧ ಕಿಡಿ

ಸತ್ಯಹರಿಶ್ಚಂದ್ರ ಸತ್ತ ಮೇಲೆ ಇಬ್ಬರೇ ಸತ್ಯಹರಿಶ್ಚಂದ್ರರು ಇರೋದು, ಒಬ್ಬರು H.D.ಕುಮಾರಸ್ವಾಮಿ, ಇನ್ನೊಬ್ಬರು ಬಸವರಾಜ ಬೊಮ್ಮಾಯಿ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ, ಬೊಮ್ಮಾಯಿ ಇಬ್ಬರೂ ಮುಖ್ಯಮಂತ್ರಿ ಆಗಿದ್ದವರು, ನೀವು ಆಗ ಮಾಡಿದ ಅದ್ವಾನಗಳನ್ನ ಜನ ಈಗಲೂ ಅನುಭವಿಸ್ತಿದ್ದಾರೆ
ಕುಮಾರಸ್ವಾಮಿ ಅವರೇ ಆ ಪೆನ್ ಡ್ರೈವ್ ಏನಾಯ್ತು..?, ಏನೇನೋ ಆರೋಪ ಮಾಡ್ತೀರಿ.. ಬಾಯಿಗೆ ಬಂದಂತೆ ಮಾತ್ನಾಡಬೇಡಿ, ಆದ್ರೆ, ಮಾಡಿದ ಆರೋಪಗಳಲ್ಲಿ ಯಾವುದನ್ನ ಸಾಬೀತು ಮಾಡಿದ್ದೀರಿ..?, ನೀವು ಸಿಎಂ ಆಗಿದ್ದವರು, ಮಾತಿನಿಂದ ನಿಮ್ಮ ಘನತೆ ಕಡಿಮೆ ಆಗುತ್ತಿದೆ, ಎಂದು ಕಿಡಿ ಕಾರಿದ್ದಾರೆ.
ಇನ್ನು, ಗ್ಯಾರಂಟಿ ಯೋಜನೆಗಳಿಗೆ SCSP-TSP ಹಣ ಬಳಕೆ ವಿಚಾರ, ರಾಜ್ಯ ಸರ್ಕಾರದ ನಿಲುವಿಗೆ MLC H.ವಿಶ್ವನಾಥ್ ಸಮರ್ಥನೆ ನೀಡಿದ್ದು, ಅಗತ್ಯ ಇರುವ ಕಡೆಗೆ ಅನುದಾನ ಬಳಸಿಕೊಳ್ಳಲು ಅಧಿಕಾರವಿದೆ, ಅನುದಾನ ಬಳಕೆಗೆ ಸರ್ಕಾರಕ್ಕೆ ಅನುವಂಶೀಯವಾದ ಅಧಿಕಾರವಿದೆ, ಅದನ್ನೇ ಬಿಜೆಪಿ, JDSನವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ದಲಿತರಿಗೆ ಏನು ಮಾಡಿದರು..?, ನಾನೂ JDS ರಾಜ್ಯಾಧ್ಯಕ್ಷನಾಗಿದ್ದೆ.. ಮೈತ್ರಿ ವೇಳೆ 12 ಸಚಿವ ಸ್ಥಾನ ಸಿಕ್ಕಿತ್ತು, ಇದರಲ್ಲಿ 7 ಸಚಿವರು ಕುಮಾರಸ್ವಾಮಿ ಮನೆಯವರೇ ಆಗಿದ್ದರು, ಬಂಡೆಪ್ಪ ಕಾಶೆಂಪೂರ್ ಒಬ್ಬ ಕುರುಬ, ಇನ್ನಿಬ್ಬರು ಲಿಂಗಾಯತರು, 12ರ ಪೈಕಿ 2 ಸಚಿವ ಸ್ಥಾನಗಳು ಖಾಲಿಯಾಗಿಯೇ ಇತ್ತು
ಅದನ್ನ ದಲಿತರು ಹಾಗೂ ಮುಸ್ಲಿಮರಿಗೆ ಕೊಡಿ ಅಂತ ಕೇಳಿದ್ದೆ, ಆದ್ರೆ, ಖಾಲಿ ಬಿಟ್ಟರೇ ಹೊರತು ದಲಿತರಿಗೆ ಸಚಿವ ಸ್ಥಾನ ಸಿಗಲಿಲ್ಲ, ಅಂತಹವರು ಈಗ ದಲಿತರ ಉದ್ಧಾರದ ಬಗ್ಗೆ ಮಾತನಾಡುತ್ತಾರೆ, ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿ ಕಾರಿದ್ದಾರೆ.