• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಈ ಭಾರತೀಯ ಸೇನಾಧಿಕಾರಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮತ್ತು ಕುಟುಂಬವನ್ನು ರಕ್ಷಿಸಿದ್ದು ಹೇಗೆ..?

by
April 6, 2021
in ವಿದೇಶ
0
ಈ ಭಾರತೀಯ ಸೇನಾಧಿಕಾರಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮತ್ತು ಕುಟುಂಬವನ್ನು ರಕ್ಷಿಸಿದ್ದು ಹೇಗೆ..?
Share on WhatsAppShare on FacebookShare on Telegram

1971 ರಲ್ಲಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ತೆಗೆದುಕೊಂಡ ದಿಟ್ಟ ನಿಲುವಿನ ಕಾರಣದಿಂದ ಬಾಂಗ್ಲಾ ದೇಶವು ಸ್ವಾತಂತ್ರ್ಯ ಪಡೆದುಕೊಂಡಿತು. ಆದರೆ ಆ ಸಮಯದಲ್ಲಿ ಪಾಕಿಸ್ತಾನ ಪಡೆಗಳಿಂದ ಬಾಂಗ್ಲಾದೇಶದ ಲಕ್ಷಾಂತರ ಹಿಂದೂಗಳು ಕೊಲ್ಲಲ್ಪಟ್ಟು ಸಾವಿರಾರು ಹಿಂದೂ ಮುಸ್ಲಿಮರು ಭಾರತದೊಳಗೆ ನುಸುಳಿ ಬಂದರು. ಈ ಐತಿಹಾಸಿಕ ಯುದ್ದದಲ್ಲಿ ಬಾಂಗ್ಲಾ ದೇಶದ ಈಗಿನ ಪ್ರಧಾನಿ ಶೇಖ್ ಹಸೀನಾ ಕುಟುಂಬ ಬದುಕಿ ಉಳಿದಿದ್ದೇ ಒಂದು ರೋಚಕ ಕಥೆ. ಇದು 13 ದಿನಗಳ ಸುದೀರ್ಘ ಬಾಂಗ್ಲಾದೇಶ ವಿಮೋಚನಾ ಯುದ್ಧ ಮುಗಿದ ಒಂದು ದಿನದ ನಂತರ, ಢಾಕಾ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ಸೈನಿಕರ ಗುಂಪೊಂದು ಪಾಕಿಸ್ಥಾನ ಸೈನ್ಯವು ಭಾರತೀಯ ಪಡೆಗಳಿಗೆ ಶರಣಾಗಿರುವ ಕಲ್ಪನೆಯನ್ನೂ ಮಾಡಿರಲಿಲ್ಲ. ಬಾಂಗ್ಲಾದೇಶದ ವಿಮೋಚನಾ ನಾಯಕ ಶೇಖ್ ಮುಜಿಬುರ್ ರಹಮಾನ್ ಅವರ ಕುಟುಂಬವನ್ನು ಢಾಕಾದ ಧನ್ಮೊಂಡಿಯಲ್ಲಿರುವ ತಮ್ಮ ನಿವಾಸದಲ್ಲಿ ಪಾಕಿಸ್ತಾನದ ಒಂದು ಡಜನ್ ಸೈನಿಕರು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಒತ್ತೆಯಾಳುಗಳಾಗಿರುವವರಲ್ಲಿ ರಹಮಾನ್ ಅವರ ಮಗಳು, ಪ್ರಸ್ತುತ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಮಗ ಸೇರಿದ್ದರು.

ADVERTISEMENT

ಆ ಸೈನಿಕರರಿಗೆ ಹಸೀನಾ ಕುಟುಂಬವನ್ನು ನಿರ್ನಾಮ ಮಾಡಲು ಆದೇಶ ನೀಡಲಾಗಿತ್ತೆಂದು ವರದಿಯಾಗಿದೆ. ಆದರೆ ಆ ಆದೇಶಗಳನ್ನು ಎಂದಿಗೂ ಪಾಲಿಸಲಾಗಲಿಲ್ಲ. ಆ ಕುಟುಂಬವನ್ನು ಉಳಿಸಲು ನಿಯೋಜಿಸಲಾಗಿದ್ದ ಭಾರತೀಯ ಸೇನೆಯ ಧೈರ್ಯಶಾಲಿ ಯುವ ಅಧಿಕಾರಿಯೊಬ್ಬರು ಪಾಕಿಸ್ತಾನದ ಸೈನಿಕರವರೆಗೆ ನಿರಾಯುಧರಾಗಿ ನಡೆದು ಪರಿಸ್ಥಿತಿಯನ್ನು ನಿಭಾಯಿಸಿದರು. ಅವರು ನಡೆದುಕೊಂಡು ಹೋಗುವಾಗ ಪಾಕಿಸ್ತಾನ ಸೈನಿಕರ ಬಂದೂಕುಗಳು ಅವರ ಎದೆಗೆ ಗುರಿ ಮಾಡಿದ್ದವು. ಅವರು ಪಾಕಿಸ್ತಾನ ಸೈನಿಕರಿಗೆ ಯುದ್ಧ ಮುಗಿದಿದೆ ಎಂದು ಹೇಳಿ ಅವರ ಮನ ಗೆದ್ದರು. ಇದು ಕೆಲಸ ಮಾಡಿತು, ಮತ್ತು ಹಸೀನಾ ಕುಟುಂಬವನ್ನು ಬಿಡುಗಡೆ ಮಾಡಲಾಯಿತು. ಭರ್ತಿ 50 ವರ್ಷಗಳ ನಂತರ ಈ ಘಟನೆಯನ್ನು ಪುನರಾವಲೋಕಿಸಿದಾಗ ಆಗ 29 ವರ್ಷ ವಯಸ್ಸಿನ ಮೇಜರ್ ಆಗಿದ್ದ ಕರ್ನಲ್ ಅಶೋಕ್ ತಾರಾ (ನಿವೃತ್ತ) ಮಾನಸಿಕ ಯುದ್ಧವು ಶತ್ರುವನ್ನು ಸೋಲಿಸಲು ಸಹಾಯ ಮಾಡುತ್ತದೆ ಎಂದು ತನಗೆ ತಿಳಿದಿದೆ ಎಂದು ಹೇಳಿದರು. ಅವರಿಗೆ ಸಹಾಯ ಮಾಡಿದ ಇನ್ನೊಂದು ವಿಷಯವೆಂದರೆ ಅವರ ತಾಯಿ ಅವರಿಗೆ ನೀಡಿದ ಸಂದೇಶ. “ಭಯವು ಮನಸ್ಸಿನ ಸ್ಥಿತಿ ಎಂದು ನನ್ನ ತಾಯಿ ನನಗೆ ಕಲಿಸಿದ್ದರು” ಎಂದು ಅವರು ಹೇಳಿದರು. ರಹಮಾನ್ ಅವರ ಕುಟುಂಬವನ್ನು ರಕ್ಷಿಸುವಲ್ಲಿ ಅಶೋಕ್ ಅವರ ಪಾತ್ರವು ಬಾಂಗ್ಲಾದೇಶ ವಿಮೋಚನಾ ಯುದ್ಧದ ಅತ್ಯಂತ ಪ್ರಸಿದ್ಧ ಸಾಹಸಗಳಲ್ಲಿ ಒಂದಾಗಿದೆ. ನಂತರದ ದಿನಗಳಲ್ಲಿ, ರಾಷ್ಟ್ರಪತಿಯಾಗಿ ರಾಷ್ಟ್ರವನ್ನು ಮುನ್ನಡೆಸಿದ ರಹಮಾನ್ ಅವರು ಅಶೋಕ್ ಅವರನ್ನು ಭೇಟಿಯಾಗಲು ಬಯಸಿದ್ದು, ಅವರ ಕಿರಿಯ ಮಗಳು ಶೇಖ್ ರೆಹಾನಾ ಅಶೋಕ್ ಅವರಿಗೆ ಪತ್ರ ಬರೆದಿದ್ದಾರೆ.

2012 ರಲ್ಲಿ ಶೇಖ್ ಹಸೀನಾ ಅವರು ಅಶೋಕ್ ಅವರಿಗೆ ‘ಬಾಂಗ್ಲಾದೇಶದ ಸ್ನೇಹಿತ’ಎಂಬ ಗೌರವ ನೀಡಿದರು. ಐದು ವರ್ಷಗಳ ನಂತರ, ಅವರು 1971 ರ ಹುತಾತ್ಮರನ್ನು ಗೌರವಿಸುವ ಸಮಾರಂಭದ ಅಂಗವಾಗಿ ಹಸೀನಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡರು. ಅಶೋಕ್ ಅವರ ಸಾಹಸಕ್ಕೆ ಅವರಿಗೆ ವೀರ ಚಕ್ರ ಪ್ರಶಸ್ತಿಯನ್ನೂ ನೀಡಲಾಗಿದೆ. 1963 ರಲ್ಲಿ ಸೇನೆಗೆ ಸೇರಿದ ಅಶೋಕ್ ಅಚರಿಗೆ ರೆಹಮಾನ್ ಕುಟುಂಬವನ್ನು ರಕ್ಷಿಸುವ ಜವಾಬ್ದಾರಿ ನೀಡಲಾಗಿತ್ತು. ಅವರು ಕೇವಲ ಇಬ್ಬರು ಸೈನಿಕರೊಂದಿಗೆ ರೆಹಮನ್ ಮನೆಗೆ ತೆರಳಿದರು. ಮನೆ ಇನ್ನೂ ನೂರು ಮೀಟರ್ ದೂರದಲ್ಲಿರುವಾಗಲೇ ಮನೆ ಕಾಯುತ್ತಿರುವ ಪಾಕಿಸ್ತಾನಿ ಸೈನಿಕರು ಹತ್ತಿರ ಹೋದರೆ ಗುಂಡು ಹೊಡೆಯುತ್ತಾರೆ ಎಂದು ಜನರು ಎಚ್ಚರಿಕೆ ನೀಡಿದರು. ತಮ್ಮ ಆಯುಧವನ್ನು ಇಬ್ಬರು ಸೈನಿಕರಿಗೆ ನೀಡಿ ಅವರು ನಿರಾಯುಧರಾಗಿ ಮನೆಯೆಡೆ ಹೆಜ್ಜೆ ಹಾಕಿದರು. ಮನೆಯ ಹೊರಗಿದ್ದ ಪಾಕಿಸ್ತಾನ ಸೈನಿಕರು ಅವರು ಮುಂದೆ ಹೋಗದಂತೆ ತಡೆದರು. ಆಗ ಅಶೋಕ್ ಅವರಿಗೆ ಪಾಕಿಸ್ತಾನ ಸೈನ್ಯ ಶರಣಾಗಿರುವುದಾಗಿ ಹೇಳಿದರೂ ಅದನ್ನು ಅವರು ನಂಬಲಿಲ್ಲ. ನಂತರ ನೀವು ನನ್ನ ಮೇಲೆ ಗುಂಡು ಹಾರಿಸಿದರೆ, ನೀವೆಲ್ಲರೂ ಕೊಲ್ಲಲ್ಪಡುತ್ತೀರಿ ಎಂದು ನಾನು ಅವರಿಗೆ ಹೇಳಿದೆ. ಪಾಕಿಸ್ತಾನದಲ್ಲಿ ಕಾಯುತ್ತಿರುವ ಅವರ ಕುಟುಂಬಗಳಿಗೆ ಏನಾಗಬಹುದು ಎಂದು ಊಹಿಸಲು ಕೇಳಿದೆ, ಎಂದು ಅವರು ಹೇಳಿದರು. ಅಶೋಕ್ ಸೈನಿಕರಿಗೆ ಶರಣಾಗುವಂತೆ ಹೇಳಿದರು ಮತ್ತು ಅವರು ಶರಣಾದರೆ ತಮ್ಮ ಕುಟುಂಬಗಳನ್ನು ಸೇರಲು ಕಳಿಸಿಕೊಡುವುದಾಗಿಯೂ ಭರವಸೆ ನೀಡಿದರು.

ಮಾತುಕತೆಗಳು ಸುಮಾರು 30 ನಿಮಿಷಗಳ ಕಾಲ ಮುಂದುವರೆದವು. ಮಾತುಕತೆಯುದ್ದಕ್ಕೂ ಅಶೋಕ್ ಅವರನ್ನೆ ಗುರಿಯಾಗಿಸಿಕೊಂಡು ಬಂದೂಕು ಹಿಡಿಯಲಾಗಿತ್ತು. ಒಂದು ಹಂತದಲ್ಲಿ, ಪಾಕಿಸ್ತಾನದ ಸೈನಿಕನೊಬ್ಬ ಭಾರತೀಯ ಸೇನಾ ಅಧಿಕಾರಿಯನ್ನು ಹೆದರಿಸಲು ಒಂದು ಸುತ್ತಿನ ಗುಂಡಿನ ದಾಳಿ ನಡೆಸಿದರು ಎಂದು ಅವರು ಹೇಳಿದರು. ನಂತರ ಮಾತುಕಥೆ ಯಶಸ್ವಿಯಾಯಿತು. ಅವರು ಮನೆಯ ಬಾಗಿಲೆಡೆ ಹೋದಾಗ ಅವರು ಭೇಟಿಯಾದ ಮೊದಲ ವ್ಯಕ್ತಿ ಶೇಖ್ ಮುಜಿಬುರ್ ರಹಮಾನ್ ಅವರ ಪತ್ನಿ ಶೇಖ್ ಫಾಜಿಲತುನ್ನೆಸಾ ಮುಜೀಬ್. ಅವರು ಅವಳು ನನ್ನನ್ನು ಅಪ್ಪಿಕೊಂಡರು ಮತ್ತು ನಾನು ದೇವಮಾನವ ಮತ್ತು ಅವರ ಮಗನಂತೆ ಎಂದು ಹೇಳಿದ್ದರು ಎಂದು ಅಶೋಕ್ ಜ್ಞಾಪಿಸಿಕೊಂಡರು. ಆ ಕಟ್ಟಡದಲ್ಲಿನ ಪಾಕಿಸ್ತಾನಿ ಧ್ವಜವನ್ನು ಹೊಸ ಬಾಂಗ್ಲಾದೇಶ ಧ್ವಜದೊಂದಿಗೆ ಬದಲಾಯಿಸಲು ಅವರು ಹೇಳಿ ಅದನ್ನು ಮಾಡಿದಾಗ , ಜಾಯ್ ಬಾಂಗ್ಲಾ (ಬಂಗಾಳಕ್ಕೆ ವಿಜಯ) ಎಂದು ಕೂಗಿದರು 86 ವಯಸ್ಸಿನ ಅಶೋಕ್ ಹೇಳಿದರು. ನಂತರ ಪಾಕಿಸ್ತಾನದ ಸೈನಿಕರನ್ನು ಅಶೋಕ್ ಅವರ ಕಾರಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ನಾಗರಿಕ ಬಟ್ಟೆ ಹಾಕಿಸಲಾಯಿತು. ಏಕೆಂದರೆ ಸೈನಿಕರ ಬಟ್ಟೆ ಹಾಕಿದರೆ ಮುಕ್ತಿವಾಹಿನಿ ಕಾರ್ಯಕರ್ತರು ಧಾಳಿ ಮಾಡುವ ಅಪಾಯವಿತ್ತು.

ಆಗ ಅಶೋಕ್ ಅವರು ಬಾಂಗ್ಲಾದೇಶದಲ್ಲಿ ಸುಮಾರು ಒಂದು ತಿಂಗಳು ಇದ್ದರು, ಅವರ ಘಟಕವು ಮಿಜೋರಾಂಗೆ ಸ್ಥಳಾಂತರಗೊಂಡಿದ್ದರೂ ಸಹ, ರಹಮಾನ್ ಅವರನ್ನು ಭೇಟಿಯಾಗಲು ಬಯಸಿದ್ದರು. ನಂತರ ಜನವರಿ 12 ರಂದು ನಾನು ಅವರನ್ನು ಭೇಟಿಯಾದಾಗ, ಅವರ ಮಾತಿನಲ್ಲಿ ನನಗೆ ನೋವುಂಟಾಯಿತು. ದೌರ್ಜನ್ಯಕ್ಕೆ ಒಳಗಾದ ಬಾಂಗ್ಲಾದೇಶದ ಜನರ ಕಷ್ಟಗಳನ್ನು ಹೇಗೆ ಸರಿಪಡಿಸುವುದು ಎಂಬುದರ ಕುರಿತು ಅವರು ಮಾತನಾಡಿದರು. ಅವರು ಭಾರತಕ್ಕೆ ಹಿಂತಿರುಗಿದ ನಂತರ ಅವರಿಗೆ ರೆಹಾನಾದಿಂದ ಎರಡು ಪತ್ರಗಳು ಬಂದವು. ನಾನು ಅವರಿಗೆ ಮತ್ತೆ ಪತ್ರ ಬರೆದೆ, ಆದರೆ ಅವರು ನನ್ನ ಪತ್ರಗಳನ್ನು ಸ್ವೀಕರಿಸಲಿಲ್ಲ. ಯಾವ ಕಾರಣಗಳಿಗಾಗಿ ನನಗೆ ಗೊತ್ತಿಲ್ಲ, ಎಂದು ಅವರು ಹೇಳಿದರು. ವರ್ಷಗಳ ನಂತರ ಅವರ ಮತ್ತು ಶೇಖ್ ಕುಟುಂಬದ ನಡುವೆ ಯಾವುದೇ ಸಂಪರ್ಕವಿರಲಿಲ್ಲ. ಮಧ್ಯಂತರದಲ್ಲಿ, 1975 ರಲ್ಲಿ ನಡೆದ ದಂಗೆಯ ಸಮಯದಲ್ಲಿ ರೆಹಮಾನ್ ಮತ್ತು ಅವರ ಪತ್ನಿ ಮತ್ತು ಹಸೀನಾ ಅವರ ಸಹೋದರರು ಸೇರಿದಂತೆ ಇಡೀ ಕುಟುಂಬವನ್ನು ಅವರ ಮನೆಯಲ್ಲಿ ಹತ್ಯೆ ಮಾಡಲಾಯಿತು. ಆ ಸಮಯದಲ್ಲಿ ಜರ್ಮನಿಯಲ್ಲಿದ್ದ ಕಾರಣ ಹಸೀನಾ ಮತ್ತು ರೆಹಾನಾ ಬದುಕುಳಿದರು. ನಂತರ ಅಶೋಕ್ ಅವರನ್ನು ಬಾಂಗ್ಲಾದೇಶ ಗೌರವಿಸಿದಾಗ ಅವರು ಭೇಟಿಯಾದರು. 1994 ರಲ್ಲಿ ಸೇನೆಯಿಂದ ನಿವೃತ್ತರಾದ ಅಶೋಕ್ ಅವರು ಈಗ ಕುಟುಂಬದೊಂದಿಗೆ ನೊಯ್ಡಾದಲ್ಲಿ ವಿಶ್ರಾಂತ ಜೀವನ ನಡೆಸುತಿದ್ದಾರೆ.

Previous Post

ಪಂಚರಾಜ್ಯ ಚುನಾವಣೆ: ಮತದಾನದ ಹಕ್ಕು ಚಲಾಯಿಸಲಿರುವ 5 ರಾಜ್ಯಗಳ ಸುಮಾರು 20 ಕೋಟಿ ಮತದಾರರು

Next Post

ಕೊಡಗಿನಲ್ಲಿ ಭೂಕುಸಿತ ತಡೆಗೆ “ಮಿಯಾವಾಕಿ” ವನ ನಿರ್ಮಾಣ ಯೋಜನೆ ಸೂಕ್ತವೇ?

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ವಿದೇಶ

ಅಮೆರಿಕದ ಹೊಸ ಮಸೂದೆಯಿಂದ ಭಾರತೀಯರಿಗೆ ಆತಂಕ ಹೆಚ್ಚಳ

by ಪ್ರತಿಧ್ವನಿ
April 27, 2026
0

 ಅಮೆರಿಕದಲ್ಲಿ H-1B ವೀಸಾ ನೀತಿಯನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ರಿಪಬ್ಲಿಕನ್ ಶಾಸಕರ ಗುಂಪೊಂದು ಹೊಸ ಮಸೂದೆಯನ್ನು ಮಂಡಿಸಿದ್ದು, ಇದು ವಿದೇಶಿ ಉದ್ಯೋಗಿಗಳ, ವಿಶೇಷವಾಗಿ ಭಾರತೀಯರ ನಡುವೆ ಆತಂಕವನ್ನು ಹೆಚ್ಚಿಸಿದೆ.ಅರಿಜೋನಾ...

Read moreDetails
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

April 27, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
Next Post
ಕೊಡಗಿನಲ್ಲಿ ಭೂಕುಸಿತ ತಡೆಗೆ “ಮಿಯಾವಾಕಿ” ವನ ನಿರ್ಮಾಣ ಯೋಜನೆ ಸೂಕ್ತವೇ?

ಕೊಡಗಿನಲ್ಲಿ ಭೂಕುಸಿತ ತಡೆಗೆ “ಮಿಯಾವಾಕಿ” ವನ ನಿರ್ಮಾಣ ಯೋಜನೆ ಸೂಕ್ತವೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada