ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರವಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಸೈಕಲ್ ಸವಾರಿಯಿಂದ ಶುರು ಮಾಡಿದ ಯಡಿಯೂರಪ್ಪ, ಇಬ್ಬರು ಶಾಸಕರಾಗಿ ಆಯ್ಕೆಯಾಗಿ ಭಾರತೀಯ ಜನತಾ ಪಾರ್ಟಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯುವ ಹಂತಕ್ಕೆ ಪಕ್ಷವನ್ನು ಬೆಳೆಸಿದ್ದು ಮಾಜಿ ಸಿಎಂ ಯಡಿಯೂರಪ್ಪ ಎನ್ನುವುದನ್ನು ಮರೆಯುವಂತಿಲ್ಲ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಪ್ರಶ್ನಾತೀತ ನಾಯಕ ಎನ್ನುತ್ತಾರೆ. ಯಡಿಯೂರಪ್ಪ ಹೇಳಿದ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ ಇತ್ತೀಚಿಗೆ ಯಡಿಯೂರಪ್ಪ ಅವರನ್ನು ಭಾರತೀಯ ಜನತಾ ಪಾರ್ಟಿಯಲ್ಲಿ ಯಡಿಯೂರಪ್ಪ ಅವರನ್ನು ತುಳಿಯುವ ಕೆಲಸ ಮಾಡಲಾಯ್ತು. ಇಡೀ ರಾಜ್ಯಕ್ಕೆ ಬಹಿರಂಗವಾಗಿ ಗೊತ್ತಾದರೂ ಯಡಿಯೂರಪ್ಪ ಮೂಲಕ ಯಾವುದೇ ಸಮಸ್ಯೆಯಿಲ್ಲ. ನಾನೇ ಸ್ವಯಂ ರಾಜೀನಾಮೆ ನೀಡಿದ್ದೇನೆ ಎಂದು ಬಹಿರಂಗವಾಗಿ ಹೇಳಿಸಿದ್ದರು.
ವಯಸ್ಸಾಯ್ತು ಅನ್ನೋ ಕಾರಣಕ್ಕೆ ಒತ್ತಡ ಹೇರಿ ರಾಜೀನಾಮೆ..!

ಯಡಿಯೂರಪ್ಪ ಸಾಕಷ್ಟು ಸರ್ಕಸ್ ಮಾಡಿ ಮುಖ್ಯಮಂತ್ರಿ ಆದವರು. ಅಧಿಕಾರ ಸಿಕ್ಕಾಗ ಕೆಲವೊಂದು ತಪ್ಪುಗಳನ್ನು ಮಾಡಿರುವುದು ಸತ್ಯ. ಆದರೆ ಯಡಿಯೂರಪ್ಪ ಕೊನೆಯ ಬಾರಿಗೆ ಆಪರೇಷನ್ ಕಮಲ ಮಾಡಿ ಅಧಿಕಾರ ಹಿಡಿದಿದ್ದರು. ಮುಖ್ಯಮಂತ್ರಿ ಆಗುವಾಗಲೇ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಹೈಕಮಾಂಡ್ ವರ್ಷ ಮುಗಿಯುವ ಹೊತ್ತಿಗೆ ಭಾರೀ ಒತ್ತಡ ಹೇರಿ ರಾಜೀನಾಮೆ ಕೊಡುವಂತೆ ಮಾಡಿದ್ದರು. ರಾಜೀನಾಮೆ ನೀಡುವ ಮುನ್ನ ಬಹಿರಂಗ ಸಭೆಯಲ್ಲಿ ಗಳಗಳನೆ ಕಣ್ಣೀರು ಹಾಕಿದ್ದರು. ಆ ಬಳಿಕ ನಾನೇ ಖುದ್ದು ರಾಜೀನಾಮೆ ನೀಡಿದ್ದೇನೆ. ಭಾರತೀಯ ಜನತಾ ಪಾರ್ಟಿ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಸಂತೋಷವಾಗಿದ್ದೇನೆ ಎಂದು ಯಡಿಯೂರಪ್ಪ ಮೂಲಕ ಹೇಳಿಕೆ ಕೊಡಿಸಿದ್ದರು. ಬಿಜೆಪಿ ನಾಯಕರೂ ಕೂಡ ಹೈಕಮಾಂಡ್ ಮಾತಿಗೆ ತಕ್ಕಂತೆ ಕುಣಿಯುವ ಕೆಲಸ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಸೋತ ಬಳಿಕ ಯಡಿಯೂರಪ್ಪ ಅವರನ್ನು ನಡೆಸಿಕೊಂಡ ಬಗ್ಗೆ ಮಾಹಿತಿಗಳು ಬಹಿರಂಗ ಆಗುತ್ತಿವೆ.
ಯಡಿಯೂರಪ್ಪನನ್ನು ಬಳಸಿಕೊಳ್ಳುತ್ತಿರುವ ಉದ್ದೇಶ ಏನು..?

ಯಡಿಯೂರಪ್ಪ ಅವರನ್ನು ಭಾರತೀಯ ಜನತಾ ಪಾರ್ಟಿ ಚುನಾವಣೆ ತನಕ ಬಳಸಿಕೊಂಡು ಸುಮ್ಮನಾಗುವ ಉದ್ದೇಶ ಹೊಂದಿತ್ತು. ಆದರೆ ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಬೆಳವಣಿಗೆ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳುವಂತೆ ಮಾಡಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಜನಪ್ರಿಯತೆ ಕುಗ್ಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಅಬ್ಬರದ ಪ್ರಚಾರ ಸಿಗುತ್ತಿದೆ. ಕಾಂಗ್ರೆಸ್ ಎದುರಿಸುವ ಶಕ್ತಿ ರಾಜ್ಯ ಬಿಜೆಪಿಯಲ್ಲಿ ಯಾವ ನಾಯಕರಿಗೂ ಇಲ್ಲದ ಕಾರಣಕ್ಕೆ ಮತ್ತೆ ಹಳೇ ಗಂಡನ ಪಾದವೇ ಗತಿ ಎನ್ನುವಂತೆ ಬಿಜೆಪಿ ಹೈಕಮಾಂಡ್ ಮತ್ತೆ ಯಡಿಯೂರಪ್ಪನನ್ನು ಎಳೆದು ತಂದಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಂತೆ ಫ್ರೀಡಂ ಪಾರ್ಕ್ಗೆ ಕರೆತಂದಿದೆ. ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜು ಮಾಡುವ ಹೊಣೆಯು ಬಿಜೆಪಿ ಹೈಕಮಾಂಡ್ ಮೇಲಿದೆ.
ಯಡಿಯೂರಪ್ಪ ಆಗ ಬೇಕಿರಲಿಲ್ಲ.. ಈಗ ಬೇಕೋ..? ಕಾಂಗ್ರೆಸ್ ಪ್ರಶ್ನೆ..
ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದು ವಯಸ್ಸಿನ ಕಾರಣಕ್ಕೆ. ಇದೀಗ ಬಿಜೆಪಿ ಹೈಕಮಾಂಡ್ ರಾಜಕೀಯ ಕಾರಣಕ್ಕಾಗಿ ಅವರನ್ನು ಫ್ರೀಡಂ ಪಾರ್ಕಿನಲ್ಲಿ, ಬಿಸಿಲು, ಮಳೆಯಲ್ಲಿ ಯಡಿಯೂರಪ್ಪ ಅವರನ್ನು ಪ್ರತಿಭಟನೆಗೆ ಕೂರಿಸುತ್ತಿರುವುದು ನಾಚಿಕೆಗೇಡು ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಅಧಿಕಾರ ನಡೆಸಲು ಮಾತ್ರ ಯಡಿಯೂರಪ್ಪಗೆ ವಯಸ್ಸಾಗಿತ್ತೇ..? ಈಗ ಯಡಿಯೂರಪ್ಪಗೆ ಹದಿನೆಂಟನೇ ವಯಸ್ಸಿನ ಹರೆಯವೇ..? ಎಂದು ಬಿಜೆಪಿ ಕರ್ನಾಟಕಕ್ಕೆ ಪ್ರಶ್ನೆ ಹಾಕಿದೆ. ಬೇಕಾದಾಗ ಬಳಸಿ, ಬೇಡವಾದಾಗ ಬಿಸಾಡುವುದಕ್ಕೆ B. S ಯಡಿಯೂರಪ್ಪ ಅವರನ್ನು ಟಿಶ್ಯು ಪೇಪರ್ ಎಂದುಕೊಂಡಿದೆಯೇ ಬಿಜೆಪಿ..? ಎಂದು ಕಾಂಗ್ರೆಸ್ ಕಾಲೆಳೆದಿದೆ. ಇನ್ನು ಒಬ್ಬ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದ ಕರ್ನಾಟಕ ಬಿಜೆಪಿ, ರಾಜಕೀಯದಿಂದ ದೂರ ತಳ್ಳಿದ್ದ B.S ಯಡಿಯೂರರನನ್ನೇ ಮತ್ತೆ ಆಶ್ರಯಿಸಿದ್ದು ಬಿಜೆಪಿಯ ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿ. ಅಗತ್ಯವಿದ್ದಾಗ ಕಾಲು ಹಿಡಿಯುವುದು, ಅಗತ್ಯವಿಲ್ಲದಾಗ ಕಾಲು ಎಳೆಯುವುದು ಬಿಜೆಪಿ ಸಂಸ್ಕೃತಿ ಎಂದು ಕುಟುಕಿದೆ. ಆದರೂ ಯಡಿಯೂರಪ್ಪ ವಿಶ್ರಾಂತಿ ಜೀವನ ಘೋಷಣೆ ಮಾಡಿದ ಬಳಿಕವೂ ರಾಜಕೀಯಕ್ಕೆ ಎಳೆಯುತ್ತಿರುವುದು ಮಾತ್ರ ಶೋಚನೀಯವೇ ಸರಿ.
ಕೃಷ್ಣಮಣಿ