ದರ್ಶನ್ ಗ್ಯಾಂಗ್ನಿಂದ (Darshan gang) ರೇಣುಕಾಸ್ವಾಮಿ ಹತ್ಯೆ (Renuk swamy murder) ನಡೆದಿರುವ ಪ್ರಕರಣದ ಬಗ್ಗೆ ಎಂಎಲ್ಸಿ (MLC) ಹಾಗೂ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ (Saleem ahemad) ಹೇಳಿಕೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಯಾವ ಮುಲಾಜು ನೋಡದೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
![](https://pratidhvani.com/wp-content/uploads/2024/06/IMG_8303-1024x538.png)
ಯಾರು ಕಾನೂನಿಗಿಂತ ದೊಡ್ಡವರು ಅಲ್ಲ. ಈ ಪ್ರಕರಣದಲ್ಲಿ ನಿರ್ದಾಕ್ಷಿಣ್ಯವಾಗಿ ಸರ್ಕಾರ ಇಲ್ಲಿಯವರೆಗೂ ಕ್ರಮ ಕೈಗೊಳ್ತಾಯಿದೆ. ಪೋಲಿಸ್ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಯಾರು ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಆರೋಪಿ ಯಾರೇ ಆಗಿರ್ಲಿ, ಹೀರೋ ಆಗಿರಬೋದು, ಚೀರೋ ಆಗಿರಬೋದು ಯಾರನ್ನು ನೋಡೊದಿಲ್ಲ. ಯಾರೆ ಇದ್ರು ಸರ್ಕಾರದ ವತಿಯಿಂದ ಏನೆಲ್ಲಾ ಕ್ರಮದ ಅಚಶ್ಯಕತೆಯಿದೆಯೋ, ಆ ಕ್ರಮಗಳನ್ನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.