008ರ ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾದ ಶ್ರೀಶಾಂತ್ ಹಾಗು ಹರ್ಭಜನ್ ನಡುವಿನ ಕಪಾಳಮೋಕ್ಷ ಪ್ರಕರಣ ಸಂಬಂಧ ಬಜ್ಜಿ ಶ್ರೀಶಾಂತ್ ಕ್ಷಮೆಯಾಚಿಸಿದ್ದಾರೆ.
ಶನಿವಾರ ಖಾಸಗಿ ಸುದ್ದಿವಾಹಿನಿಯಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಈ ಇಬ್ಬರು ಆಟಗಾರರು ಪಾಲ್ಗೊಂಡಿದ್ದರು 2008ರಲ್ಲಿ ನಡೆದ ಘಟನೆಯಿಂದ ತಮ್ಮಗಾದ ಮುಜುಗರವನ್ನ ಹರ್ಭಜನ್ ಶ್ರೀಶಾಂತ್ ಬಳಿ ಹೇಳಿಕೊಂಡರು.

ಮುಂಬೈ ಇಂಡಿಯನ್ಸ್ ಹಾಗು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ನಾಯಕ ಸಚಿನ್ ತೆಂಡುಲ್ಕರ್ ಅನುಪಸ್ಥಿತಿಯಲ್ಲಿ ಟರ್ಬೋನೇಟರ್ ತಂಡವನ್ನ ಮುನ್ನಡೆಸಿದ್ದರು. ಮಹತ್ತರ ಪಂದ್ಯದಲ್ಲಿ ಮುಂಬೈ ಪಂಜಾಬ್ ವಿರುದ್ದ 66 ರನ್ಗಳ ಸೋಲನ್ನುಭವಿಸಿತ್ತು.
ಆಗ ಎದುರಾಳಿ ತಂಡದ ಆಟಗಾರನಾಗಿದ್ದ ಶ್ರೀಶಾಂತ್ ನಡವಳಿಕೆಯಿಂದ ಆಕ್ರೋಶಗೊಂಡು ನಾನು ಪಂದ್ಯ ಮುಗಿದ ನಂತರ ನಾನು ಆ ರೀತಿ ನಡೆದುಕೊಳ್ಳಬಾರದಿತ್ತು. ಇದರಿಂದ ಸಹ ಆಟಗಾರನಿಗು ಸಹ ಮುಜುಗರ ಉಂಟಾಯಿತ್ತು ಎಂದಿದ್ದಾರೆ.
ಕಾರ್ಯಕ್ರಮದ ಲೈವ್ ಶೋನಲ್ಲಿ ಹರ್ಭಜನ್ ಶ್ರೀಶಾಂತ್ ಕ್ಷಮೆಯಾಚಿಸಿದ್ದಾರೆ.






