ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ (RANYA rao gold smuggling) ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಸಚಿವ ಸಂತೋಷ್ ಲಾಡ್ (Santosh lad) ಪ್ರತಿಕ್ರಿಯಿಸಿದ್ದು, ವಿಮಾನ ನಿಲ್ದಾಣಗಳು (Airports) ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ನಾವು ಯಾರನ್ನೂ ಡಿಫೆಂಡ್ ಮಾಡಲ್ಲ. ದೇಶಕ್ಕೆ ಅಕ್ರಮವಾಗಿ ಗೋಲ್ಡ್ ಈ ರೀತಿ ಬರೋದು ವೈಯಲೇಶನ್ ಆಗುತ್ತೆ. ಡಿಆರ್ ಪಾಸ್ ಆಗಿ ಹೇಗೆ ಹೊರ ಬರೋಕೆ ಸಾಧ್ಯ?ಇದು ಒಂದೇ ಏರ್ಪೋರ್ಟ್ ಅಲ್ಲಬೇರೆಡೆಯೂ ಆಗಿರಬಹುದು, ಯಾಕೆ ಆಗಿರಲ್ಲ? ತನಿಖೆ ಮಾಡಿದರೆ ತಾನೇ ಹೊರಬರೋದು? ಎಂದಿದ್ದಾರೆ.
ಇನ್ನು ಕಸ್ಟಮ್ಸ್ ಯಾಕೆ ಬೈಪಾಸ್ ಮಾಡ್ತಾರೆ? ಲೀಗಲ್ ಆಗಿ ತಂದರೆ ಏನೂ ಸಮಸ್ಯೆ ಇಲ್ಲ. ದುಬೈನವರು ಎಷ್ಟು ಖರೀದಿ ಮಾಡಿದ್ರೂ ಕೊಡ್ತಾರೆ. ಅಫಿಶಿಯಲಿ ನೀವು ಖರೀದಿ ಮಾಡಿ ತರಬಹುದು.ನಮ್ಮಲ್ಲಿ ಕಸ್ಟಮ್ಸ್ ಇದ್ದಾರೆ,ಅವರನ್ನ ಪಾಸ್ ಮಾಡಿದ್ರೆ ತಾನೇ ಹೊರಬರೋದು? ಎಂದಿದ್ದಾರೆ.

ದುಬೈನಲ್ಲಿ ಕಳ್ಳತನ ಆಗೋದಿಲ್ಲ.ಅಲ್ಲಿ 100 ಕೆಜಿ ಬೇಕಾದ್ರೂ ಕೊಡ್ತಾರೆ.ಆದರೆ, ಇಲ್ಲಿ ಕಸ್ಟಮ್ಸ್ ನವರು ಬಿಟ್ಟಿದ್ದೇಕೆ? ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.