ಬೆಂಗಳೂರು ಕೇಂದ್ರ (bangalore central) ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಮನ್ಸೂರ್ ಅಲಿಖಾನ್ (mansur ali khan) ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಸಂಪಂಗಿರಾಮ ನಗರದ ಗಣೇಶ ದೇವಾಲಯಕ್ಕೆ (Ganesha temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಬಳಿಕ ಸಾವಿರಾರು ಕಾರ್ಯಕರ್ತರ ಜೊತೆ ರ್ಯಾಲಿ ಮೂಲಕ ಬಿಬಿಎಂಪಿ ಕೇಂದ್ರ ಕಚೇರಿಗೆ ಆಗಮಿಸಿದ ಮನ್ಸೂರ್ ಆಲಿಖಾನ್ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಈ ಬಾರಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಕಾಂಗ್ರೇಸ್ (congress) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮನ್ಸೂರ್ ಅಲಿ ಖಾನ್, ಸತತವಾಗಿ ಆಯ್ಕೆಯಾಗಿರುವ ಪಿ.ಸಿ.ಮೋಹನ್ರಿಗೆ (PC mohan ಟಫ್ ಫೈಟ್ ನೀಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿ ಕಂಡುಬಂದಿದೆ. ಈಗಾಗಲೇ ನನ್ನ ವಿರೋಧಿ ಬಹಳ ವೀಕ್ ಕ್ಯಾಂಡಿಡೇಟ್ ಎಂಬ ಹೇಳಿಕೆ ಕೊಟ್ಟಿರುವ ಮನ್ಸೂರ್ ಬಹಳ ಆತ್ಮವಿಶ್ವಾಸದಲ್ಲಿದ್ದಾರೆ.
ಮುಸ್ಲಿಂ ಮತ್ತು ಕ್ರೈಸ್ತ ಮತಗಳ ಜೊತೆಗೆ ಹಿಂದೂಗಳ ಮತ ಗಳಿಸಿಕೊಂಡ್ರೆ ಬೆಂಗಳೂರು ಕೇಂದ್ರ ಗೆಲ್ಲೋದು ಸುಲಭ ಎಂಬ ಲೆಕ್ಕಾಚಾರದಲ್ಲಿರುವ ಮನ್ಸೂರ್ ಅಲಿ ಖಾನ್ ಜಾತ್ಯಾತೀತ ನೆಲೆಗಟ್ಟಿನಲ್ಲಿ ಸರ್ವ ಧರ್ಮ ಸಮನ್ವಯ ಎಂಬ ತತ್ವದಲ್ಲಿ ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ಸಂಪಂಗಿರಾಮ ನಗರದ ಗಣೇಣ ದೇವಸ್ಥಾನಕ್ಕೆ ಭೇಟಿ ಕೊಟ್ಟು ಒಂದು ಸಂದೇಶ ರವಾನೆ ಮಾಡೋ ಪ್ರಯತ್ನ ಮಾಡಿದ್ದಾರೆ.