
ಸ್ಯಾಂಡಲ್ವುಡ್ ಆ್ಯಕ್ಟರ್ ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಅವರ ವಿವಾಹ ಮೈಸೂರಿನ ವಸ್ತುಪ್ರದರ್ಶನ ಕೇಂದ್ರದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಶುಭ ಮೀನ ಲಗ್ನದಲ್ಲಿ ಡಾಲಿ, ಧನ್ಯತಗೆ ತಾಳಿ ಕಟ್ಟಿದ್ದಾರೆ. ಮೈಸೂರಿನ ವಸ್ತುಪ್ರದರ್ಶನ ಗ್ರೌಂಡ್ನಲ್ಲಿ ಹಾಕಿದ್ದ ಅದ್ಧೂರಿ ಸೆಟ್ನಲ್ಲಿ ವಿವಾಹ ಕೈಂಕರ್ಯಗಳು ನೆರವೇರಿವೆ. ಅದ್ದೂರಿ ವಿವಾಹ ಕಾರ್ಯಕ್ರಮಕ್ಕೆ ಅನೇಕ ಗಣ್ಯರು, ಸಾವಿರಾರು ಮಂದಿ ಧನಂಜಯ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
ಡಾಕ್ಟರ್ – ಆ್ಯಕ್ಟರ್ ವಿವಾಹ ಕಾರ್ಯಕ್ರಮದ ಕುರಿತು ಮಾತನಾಡಿರುವ ಡಾಲಿ ಧನಂಜಯ್, ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದೆ. ಆರತಕ್ಷತೆ ಜನ ಬಂದಿದ್ದು ಖುಷಿ ಆಯ್ತು. ನಾನು ಅಂದುಕೊಂಡಂತೆ ಎಲ್ಲವೂ ಆಗಿದೆ. ಎಲ್ಲರೂ ಖುಷಿ ಆಗಿದ್ದಾರೆ. ತುಂಬಾ ಶಾಂತಿಯುತವಾಗಿ ಫ್ಯಾನ್ಸ್ ನಡೆದುಕೊಂಡಿದ್ದಾರೆ. ಚಿತ್ರರಂಗದ ಕುಟುಂಬಕ್ಕೆ ನಾನು ಯಾವಾಗಲೂ ಆಭಾರಿ. ಜವಾಬ್ಧಾರಿ ಹೆಚ್ಚಾಗಿದೆ. ನಿಭಾಯಿಸಲೇ ಬೇಕು, ಕೆಲಸ ಮಾಡಲೇಬೇಕು ಎಂದಿದ್ದಾರೆ.

ಡಾಲಿ ಧನಂಜಯ್ ಅವರ ಕುಟುಂಬದಸ್ಥರು, ಗೆಳೆಯರು, ಅಭಿಮಾನಿಗಳು, ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಮದುವೆ ಸಮಾರಂಭದಲ್ಲಿ ಭಾಗಿ ಆಗ್ತಿದ್ದಾರೆ.. ನಟ ಶಿವಣ್ಣ, ನಟಿ ರಮ್ಯಾ, ವಿನಯ್ ರಾಜ್ ಕುಮಾರ್, ಯುವರಾಜ್ ಕುಮಾರ್, ತರುಣ್ ಸುಧೀರ್, ನಟ ಲೂಸ್ ಮಾದ, ನಟಿ ಸಪ್ತಮಿಗೌಡ, ಹಿರಿಯ ನಟಿ ಭಾರತಿ, ಹಿರಿಯ ನಟ ದೊಡ್ಡಣ್ಣ, ಮಂಡ್ಯ ರಮೇಶ್, ನಟ ನಿರ್ದೇಶಕ ಟಿ.ಎಸ್ ನಾಗಾಭರಣ ಸೇರಿದಂತೆ ಸಿನಿ ಗಣ್ಯರ ದಂಡೇ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾತ್ತು.

ಡಾಲಿ ಧನಂಜಯ್, ಧನ್ಯತ ಮದುವೆ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು, ವಿವಿಧ ಮಠಾಧೀಶರು ಭಾಗಿಯಾಗಿದ್ರು. ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಜಿ.ಟಿ.ದೇವೇಗೌಡ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಧನು-ಧನ್ಯತ ನವ ಜೋಡಿಗಳಿಗೆ ಶುಭಾಶಯ ಕೋರಿದ್ರು. ಅದ್ದೂರಿ ವಿವಾಹ ಕಾರ್ಯಕ್ರಮದಲ್ಲಿ ಭೋಜನ ವ್ಯವಸ್ಥೆ ಜೋರಾಗಿತ್ತು. ಸೆಲೆಬ್ರಿಟಿಗಳಿಗೆ, ಫ್ಯಾನ್ಸ್ಗೆ ಡಾಲಿ ಭರ್ಜರಿ ಭೋಜನ ಉಣಬಡಿಸಿದ್ದಾರೆ. 10ಕ್ಕೂ ಹೆಚ್ಚು ವೆರೈಟಿಯ ಖಾದ್ಯಗಳು ಉಣಬಡಿಸಲಾಗಿದೆ. ವೆಜಿಟೇಬಲ್ ಬಾತ್, ಗೋಧಿ ಪಾಯಸ, ಮೂರು ಬಗೆಯ ಸಿಹಿತಿಂಡಿ, ಕೊಸಂಬರಿ, ಪಲ್ಯ, ಅನ್ನ, ಸಾಂಬರ್, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ ಸೇರಿ ವಿವಿಧ ಖಾದ್ಯಗಳನ್ನ ಉಣಬಡಿಸಲಾಗ್ತಿದೆ.