ಮಂಗಳೂರು: ಶತ್ರು ಭೈರವಿ ಯಾಗದ ಕುರಿತು ಡಿಸಿಎಂ ಡಿಕೆಶಿ ಮಾಡಿರುವ ಆರೋಪಕ್ಕೆ ಕೇರಳ ಸರ್ಕಾರ ಸ್ಪಷ್ಟನೆ ನೀಡಿದ್ದು, ಯಾವುದೇ ಯಾಗ ನಡೆದಿಲ್ಲ. ಅದು ಸುಳ್ಳು ಎಂದು ಹೇಳಿದೆ.
![](https://pratidhvani.com/wp-content/uploads/2024/06/dk-shivakumar-5-1024x576.webp)
ಡಿಸಿಎಂ ಡಿ.ಕೆ. ಶಿವಕುಮಾರ್, ಕೇರಳದ (Kerala) ರಾಜರಾಜೇಶ್ವರಿ ದೇವಾಲಯದಲ್ಲಿ ನನ್ನ ಹಾಗೂ ಸಿಎಂ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂದು ಆರೋಪಿಸಿದ್ದರು.
![](https://pratidhvani.com/wp-content/uploads/2024/05/4r7rpdj8_dk-shivakumar_625x300_17_April_24-1024x630.webp)
ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇರಳ ಸರ್ಕಾರ (Kerala Government) ತನಿಖೆ ನಡೆಸಿ, ತಳಿಪರಂ ರಾಜರಾಜೇಶ್ವರಂ ಹಾಗೂ ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ಯಾವುದೇ ರೀತಿಯ ಶತ್ರುಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲ ಎಂದು ಹೇಳಿದೆ. ಈ ಮೂಲಕ ಡಿಸಿಎಂಗೆ ಹಿನ್ನಡೆಯಾದಂತಾಗಿದೆ.