
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿರುವ ದರ್ಶನ್ಗೆ ಜೈಲಿನ ಊಟ ಹಿಡಿಸ್ತಿಲ್ಲ. ಪ್ರೋಟಿನ್ ಕಡಿಮೆ ಆಗಿ ಆರೋಗ್ಯ ಹದಗಟ್ಟಿದೆ. ತೂಕದಲ್ಲಿ ಇಳಿಕೆ ಆಗಿದೆ ಎಂದು ದರ್ಶನ್ ವಕೀಲರು ಹೇಳಿದ್ದರು. ಅದರಂತೆ ಹೈಕೋರ್ಟ್ಗೆ ರಿಟ್ ಅರ್ಜಿಯನ್ನೂ ಸಲ್ಲಿಕೆ ಮಾಡಿದ್ರು. ಆ ಬಳಿಕ ಹೈಕೋರ್ಟ್ ಸೂಚನೆಯಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹೋಗಲಾಗಿತ್ತು. ಆದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಅರ್ಜಿಯನ್ನ ವಜಾ ಮಾಡಿತ್ತು.

ಮ್ಯಾಜಿಸ್ಟ್ರೇಟ್ ಕೋರ್ಟ್ ಮನೆಯೂಟ ಅರ್ಜಿಯನ್ನು ವಜಾ ಮಾಡಿದ ಬಳಿಕ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಜೈಲು ಅಧಿಕಾರಿಗಳಿಂದ ವರದಿ ಕೇಳಿತ್ತು. ಜೊತೆಗೆ ಆಗಸ್ಟ್ 20ರಂದು ಆದೇಶ ನೀಡುವುದಾಗಿ ಕಾಯ್ದಿರಿಸಿದೆ. ಈ ನಡುವೆ ಜೈಲು ಅಧಿಕಾರಿಗಳೂ ಕೂಡ ವರದಿ ಕೊಟ್ಟಿದ್ದು, ಹೈಕೋರ್ಟ್ನಲ್ಲಿ ನಾಳೆ ಮನೆಯೂಟ ಅರ್ಜಿ ಏನಾಗುತ್ತದೆ ಅನ್ನೋ ಕುತೂಹಲ ಮೂಡಿಸಿದೆ.
ಆದರೆ ಜೈಲು ಅಧಿಕಾರಿಗಳು ಕೂಡ ಮನೆಯೂಟ ನೀಡುವುದಕ್ಕೆ ಸಾಧ್ಯವಿಲ್ಲ. ದರ್ಶನ್ ಒಬ್ಬರಿಗೆ ಮನೆಯೂಟ ನೀಡುವುದಕ್ಕೆ ಒಪ್ಪಿಗೆ ಕೊಟ್ಟರೆ ಜೈಲಿನಲ್ಲಿರುವ 5 ಸಾವಿರ ಕೈದಿಗಳಿಗೂ ಮನೆಯೂಟ ನೀಡುವ ಅನಿವಾರ್ಯತೆ ಎದುರಾಗುತ್ತದೆ. ಆ ರೀತಿ ಮನೆಯಿಂದ ಊಟ ಕೊಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಇದೀಗ ಜೈಲು ಅಧಿಕಾರಿಗಳ ವರದಿಯನ್ನು ಮೀರಿ ಹೈಕೋರ್ಟ್ ಮನೆಯೂಟಕ್ಕೆ ಅವಕಾಶ ನೀಡುವ ಸಾಧ್ಯತೆ ತೀರ ಕಡಿಮೆ ಎನ್ನಲಾಗ್ತಿದೆ.
