ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ನಟ ದರ್ಶನ್ (Actor darshan) ಬಂಧನವಾಗಿರುವ ಹಿನ್ನಲೆ, ತನಗೆ ಜೀವ ಬೆದರಿಕೆ ಬಂದಿದೆ ಎಂದು ಬಿಗ್ ಬಾಸ್ ವಿಜೇತ (Bigboss winner), ನಟ ಪ್ರಥಮ್ (Pratham) ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
![](https://pratidhvani.com/wp-content/uploads/2024/06/IMG_8295.jpeg)
ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗಿರುವ ವಿಚಾರವಾಗಿ ಇತ್ತೀಚೆಗೆ ಪ್ರಥಮ್ ಕೆಲವು ವಿಚಾರಗಳನ್ನ ಮಾತನಾಡಿದ್ರು.ದರ್ಶನ್ ರ ಕೆಲ ಅಂದಾಭಿಮಾನಿಗಳ ವಿರುದ್ಧ ನಟ ಪ್ರಥಮ್ ಕಿಡಿ ಕಾರಿದ್ದರು. ಸೋ ಪ್ರಥಮ್ ಮಾತಿಗೆ ಕೆರಳಿದ ಕೆಲ ಕಿಡಿಗೇಡಿಗಳು ಇದೀಗ ಜೀವ ಬೆದರಿಕೆ ಹಾಕಿದ್ದಾರೆ.
ಸೋಷಿಯಲ್ ಮೀಡಿಯಾ (Social media) ಮೂಲಕ ನಟ ಪ್ರಥಮ್ ಗೆ ಕರೆ ಮಾಡಿರುವ ಕಿಡಿಗೇಡಿಗಳು ಕೊಲ್ಲೋದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ವಿಚಾರವಾಗಿ ಜ್ಞಾನಭಾರತಿ ಠಾಣೆಗೆ ಪ್ರಥಮ್ ದೂರು ದಾಖಲಿಸಿದ್ದಾರೆ.