ಬಾಗಲಕೋಟೆ: ಸಚಿವ ಪ್ರಿಯಾಂಕ ಖರ್ಗೆ ಹಾಗೂ ಶರತ್ ಬಚ್ಚೇಗೌಡ ವಿರುದ್ಧ ಕಿಯೋನಿಕ್ಸ್ ವೆಂಡರ್ಸ್ ದಯಾಮರಣ ಕೋರಿ ಬರೆದ ಪತ್ರ ವಿಚಾರವಾಗಿ ಕೇಂದ್ರ ಸಚಿವ ಸೋಮಣ್ಣ ಮಾತನಾಡಿದ್ದಾರೆ.

ಬಾಗಲಕೋಟೆಯಲ್ಲಿ ರೈಲ್ವೆ ರಾಜ್ಯ ಸಹಾಯಕ ಸಚಿವ ವಿ ಸೋಮಣ್ಣ ಮಾತನಾಡಿ, ನಮಗೆ ಒಂದು ರೀತಿಯ ಅಹಸ್ಯ ಎನಿಸುತ್ತದೆ.. ಸಿದ್ದರಾಮಯ್ಯನವರ ಕಾರ್ಯವೈಖರಿ, ಸಿದ್ದರಾಮಯ್ಯನವರ ಅನುಭವ, ಸಿದ್ದರಾಮಯ್ಯನವರ ದೂರ ದೃಷ್ಟಿ, ಸಿದ್ದರಾಮಯ್ಯನವರ ಚಿಂತನೆ ಎಲ್ಲ ಮಾಯ ಆಗಿಬಿಟ್ಟಿದೆ. ಇದೊಂದು ಮಾಯಾ ಬಜಾರ್ ಸರ್ಕಾರ ಎಂದಿದ್ದಾರೆ. ಯಾರು ದಯಾಮರಣ ಏನೆಲ್ಲ ಹೇಳಿದ್ರು ಕೂಡ ಅವರ ತಲೆಗೆ ಹೋಗುವುದಿಲ್ಲ.. ಅವರು ಏನು ಮಾಡಬೇಕು ಎತ್ತ ಮಾಡಬೇಕು ಅನ್ನೋದಕ್ಕಿಂತ ಹೆಚ್ಚಾಗಿ ಕುರ್ಚಿ ಉಳಿಸಿಕೊಳ್ಳುವುದರ ಕಡೆಗೆ ಅವರು ಕಾತುರರಾಗಿದ್ದಾರೆ ಎಂದಿದ್ದಾರೆ.

ಸರ್ಕಾರ ನಡೆಸಬೇಕು, ತೊಂದರೆಯಲ್ಲಿ ಇರುವ ಜನರಿಗೆ ಸ್ಪಂದಿಸಬೇಕು ಎಂಬುದು ಯಾವುದು ಇಲ್ಲ. ಆದ್ದರಿಂದ ನನಗೆ ಅನಿಸುತ್ತದೆ ಎರಡು ಮೂರು ತಿಂಗಳಲ್ಲಿ ಈ ರಾಜ್ಯಕ್ಕೆ ಇನ್ನು ಹೆಚ್ಚಿನ ಗಂಡಾಂತರ ಬರುತ್ತದೆ. ಇನ್ನು ಮೂರು ತಿಂಗಳಲ್ಲಿ ರಾಜ್ಯಕ್ಕೆ ಗಂಡಾಂತರ ಎಂದರೆ ಸರ್ಕಾರ ಬಿದ್ದು ಹೋಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಇನ್ನು ಎರಡು ಮೂರು ತಿಂಗಳಲ್ಲಿ ಏನಾಗುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ 5 ಬಾರಿ ಶಾಸಕ ಎರಡು ಬಾರಿ ವಿಧಾನ ಪರಿಷತ್ ಸದಸ್ಯ ಆದವನು, ಆರು ಬಾರಿ ಮಂತ್ರಿಯಾಗಿದ್ದೇನೆ.. ನೂರಾರು ಕಡೆಗೆ ಹೋಗುತ್ತಿದ್ದೇನೆ ಒಂದೇ ಒಂದು ಮನೆ ಕಟ್ಟೋಕೆ ಆಗಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಕೊಟ್ಟಿರುವ ಮನೆಗಳು ಇಲ್ಲ ಎಂದಿದ್ದಾರೆ. ಕೊಟ್ಟಿರುವ ದುಡ್ಡು ಏನಾಯ್ತು ಗೊತ್ತಿಲ್ಲ.. ಸಿದ್ದರಾಮಯ್ಯನವರು ಈ ಮಟ್ಟದ ಸರ್ಕಾರವನ್ನು ನಡೆಸುತ್ತಿದ್ದಾರೆ ಅಂದ್ರೆ, ಅದಕ್ಕಿಂತ ತಲೆಬಾಗಿಸತಕ್ಕಂತ ಕೆಲಸ ಮತ್ತೊಂದಿಲ್ಲ ಎಂದಿದ್ದಾರೆ.

ಒಂದು ವಿಷಯ ಹೇಳ್ತೀನಿ ಕೇಳಿ ಸಿದ್ದರಾಮಯ್ಯನವರಿಗೆ ಎಂದಿರುವ ಸಚಿವ ಸೋಮಣ್ಣ, ಐದು ವರ್ಷ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದಂತಹ ಸಿದ್ದರಾಮಯ್ಯನವರೇ ಅವರಾಗಿದ್ದರೆ.. ದಯವಿಟ್ಟು ಅವರಿಗೆ ಇದನ್ನ ಮಾಡೋಕೆ ಆಗ್ತಾ ಇಲ್ಲ. ಎಲ್ಲಾ ಕಡೆನೂ ಚುಚ್ಚುವುದು, ಮಾಡೋದು ಏನೇನಾಗ್ತ ಇದೆಯೋ ನಮಗೆ ಗೊತ್ತಿಲ್ಲ.. ಅವರಿಗೆ ನಿಜವಾಗಲೂ ಕೂಡ ದೇಶದ ಬಗ್ಗೆ ರಾಜ್ಯದ ಬಗ್ಗೆ ಕನ್ಸರ್ನ್ ಇದ್ರೆ ಅವರು ಒಳ್ಳೆಯ ತೀರ್ಮಾನ ಮಾಡೋದು ಒಳ್ಳೆಯದು ಎಂದಿದ್ದಾರೆ. ಹೆಸರಿಗೆ ಮಾತ್ರ ಸಿದ್ದರಾಮಯ್ಯ, ಚಾವಿ ಡಿ.ಕೆ ಶಿವಕುಮಾರ್ ಬಳಿ ಇದೆ ಎಂಬ ಪ್ರಶ್ನೆಗೆ ಅಪ್ಪಾ ನಿಮಗೆ ಗೊತ್ತಿದೆ ಚಾವಿ, ನನಗ್ಯಾಕೆ ಕೇಳ್ತಿರಾ..? ನನಗೆ ಚಾವಿನೂ ಗೊತ್ತಿಲ್ಲ, ಡಿಕೆನೂ ಗೊತ್ತಿಲ್ಲ.. ನನಗೆ ಗೊತ್ತಿರೋದು ಸಿದ್ದರಾಮಯ್ಯನವರು ಮಂತ್ರಿಗಳಾಗಿದ್ದಾಗ ನಾನು ಮಂತ್ರಿಯಾಗಿದ್ದೆ. ಸಿದ್ದರಾಮಯ್ಯನವರ ಹತ್ತಿರದಲ್ಲಿ ನಾನು ಕೂಡ ಕೆಲಸ ಮಾಡಿದ್ದೇನೆ.. ಆ ಸಿದ್ದರಾಮಯ್ಯ ಕಳೆದು ಹೋಗವ್ನೆ.. ಈ ಸಿದ್ದರಾಮಯ್ಯ ನಮಗೆ ಗೊತ್ತಿಲ್ಲ ಎಂದಿದ್ದಾರೆ.

ಇವತ್ತಿನ ಸಿದ್ದರಾಮಯ್ಯನವರ ಅವ್ಯವಸ್ಥೆನಾ ಭಗವಂತ ಬಂದ್ರು ಕಾಪಾಡಲ್ಲ ಎಂದಿರುವ ವಿ ಸೋಮಣ್ಣ, ಅವರು ಏನಾದರೂ ಇನ್ನು ಸ್ವಲ್ಪ ಅವರಿಗೆ ತನ್ನದೆ ಆದಂತ ನೈತಿಕತೆ ಇದ್ರೆ, ಒಳ್ಳೆಯ ತೀರ್ಮಾನ ಮಾಡಿ ಜನರಿಗೆ ಕೈ ಮುಗಿಯೋದು ಒಳ್ಳೆಯದು ಎನ್ನುವ ಮೂಲಕ ಪರೋಕ್ಷವಾಗಿ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದಿದ್ದಾರೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ..