ಮಂಡ್ಯದ ನಾಗಮಂಗಲದಲ್ಲಿ (Nagamangala) ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (C T ravi) ಟ್ವಿಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress govt.) ಅಧಿಕಾರಕ್ಕೆ ಬಂದ ಅವಧಿಯಲ್ಲಿ ಮತಾಂದತೆ ಮಿತಿ ಮೀರಿದೆ. ನಾಗಮಂಗಲ ಗಲಾಟೆಗೆ ಸಂಪೂರ್ಣ ಸರ್ಕಾರವೇ ಹೊಣೆ ಹೊರಬೇಕು. ಕಿಡಿಗೇಡಿಗಳು ಮಚ್ಚು-ಲಾಂಗು ಹಿಡಿದು ಗಣೇಶನ ಮೇಲೆ ಗಲಾಟೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಉತ್ತರ ಪ್ರದೇಶದಲ್ಲಿ (Uttar pradesh) ಯೋಗಿ ಆದತ್ಯನಾಥ್ (Yogi adiyanath) ನೇತೃತ್ವದ ಮಾದರಿಯ ಸರ್ಕಾರವೇ ಇಂಥ ಕಿಡಿಗೇಡಿ ತನಕ್ಕೆ ತಕ್ಕ ಮದ್ದು ಅಂತ ಸಿ.ಟಿ ರವಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.