ಆದಿಪುರುಷ್ ಚಿತ್ರ ತಂಡ ಅದ್ಯಾವಾಗ ಟೀಸರ್ ರಿಲೀಸ್ ಮಾಡಿದ್ರೋ ಅಂದಿನಿಂದ ಒಂದಲ್ಲ ಒಂದು ರೀತಿಯಾದ ವಿವಾದಕ್ಕೆ ಗುರಿಯಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಆದಿಪುರುಷ್ ಸಿನಿಮಾದ ಗ್ರಾಫಿಕ್ ಸರಿ ಇಲ್ಲ, ಆ ಸಿನಿಮಾದ ಗ್ರಾಫಿಕ್ ಸಮಸ್ಯೆ ಇನ್ನೂ ಮುಗಿದಿಲ್ಲ ಎಂಬ ಗುಮಾನಿ ಇಂದಿಗೂ ಕಡಿಮೆಯಾಗಿಲ್ಲ. ಇದರ ನಡುವೆಯೇ ಇದೀಗ ಚಿತ್ರತಂಡ ತಿರುಪತಿಯಲ್ಲಿ ಅದ್ದೂರಿಯಾಗಿ ಆದಿಪುರುಷ್ ಚಿತ್ರದ ಪ್ರಿ ರಿಲಿಸ್ ಈವೆಂಟ್ ಅನ್ನ ತಿರುಪತಿಯಲ್ಲಿ ಮಾಡಿ ಮುಗಿಸಿದೆ. ಇದೀಗ ಈ ಕಾರ್ಯಕ್ರಮಕ್ಕೆ ಮುನ್ನ ನಡೆದ ಕೆಲ ಬೆಳವಣಿಗೆಗಳು ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
![](https://pratidhvani.com/wp-content/uploads/2023/06/adipurush-director-as-om-raut-read-on-001-1024x538.jpg)
ಹೌದು.. ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಹಾಗೂ ನಟಿ ಕೃತಿ ಸನೋನ್ ನಟಿಸಿರುವ ಆದಿಪುರುಷ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಬಹಳ ಕುತೂಹಲ ಮೂಡಿಸಿದೆ. ಸದ್ಯ., ಸಿನಿಮಾದ ನಿರ್ದೇಶಕ ಓಂ ರಾವತ್ ದೇವಸ್ಥಾನದಲ್ಲೇ ನಟಿ ಕೃತಿ ಸನೋನ್ ಅವರನ್ನ ಚುಂಬಿಸಿ ಸ್ವಾಗತಿಸಿದ್ದಾರೆ. ಇದು ಆದಿಪುರುಷ್ ಚಿತ್ರಕ್ಕೆ ಹೊಸ ವಿವಾದ ಅಂಟುವ ಹಾಗೆ ಮಾಡಿದೆ.
ಎಸ್… ದೇವಸ್ಥಾನದಲ್ಲೇ ನಿರ್ಮಾಪಕರು ನಟಿ ಕೃತಿ ಸನೋನ್ (krithi Sanon) ಕೆನ್ನೆಗೆ ಮುತ್ತಿಟ್ಟಿದ್ದು, ಇದು ವೆಸ್ಟರ್ನ್ ಕಲ್ಚರ್ನ ಭಾಗ, ವೆಸ್ಟರ್ನ್ ಕಲ್ಚರ್ ಫಾಲೋ ಮಾಡುವವರು ರಾಮಯಣದ ಕತೆಯನ್ನಾಧರಿಸಿ, ಅದಿಪುರುಷ್ ಸಿನಿಮಾ ಮಾಡಿರುವುದು ಬಹಳ ದೊಡ್ಡ ವಿಪರ್ಯಾಸ ಅಂತ ನೆಟ್ಟಿಗರು ಟೀಕೆ ಮಾಡಿದ್ದಾರೆ. ಇನ್ನು ಕೆಲ ನೆಟ್ಟಿಗರು ದೇವಸ್ಥಾನದಲ್ಲಿ ಹೇಗಿರಬೇಕು ಅನ್ನೋದು ಬಹುತೇಕರಿಗೆ ಗೊತ್ತಿಲ್ಲ, ಸಿನಿಮಾ ಪ್ರಚಾರಕ್ಕಾಗಿ ಇವರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ, ದೇವಸ್ಥಾನದ ಮಹತ್ವ ಗೊತ್ತಿರುವವರು ಇಂತಹ ಕೆಲಸ ಮಾಡುತ್ತಿರಲಿಲ್ಲ, ದೇವಸ್ಥಾನದಲ್ಲಿ ಸಂಸ್ಕಾರವನ್ನ ಪಾಲನೆ ಮಾಡ್ತಾ ಇದ್ರು ಸಾಕಷ್ಟು ಮಂದಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಚಿತ್ರತಂಡ ಯಾವುದೇ ರೀತಿಯಾದ ಪ್ರತಿಕ್ರಿಯೆ ಕೊಡುವ ಗೋಜಿಗೆ ಹೋಗಿಲ್ಲ, ಸದ್ಯಕ್ಕೆ ಚಿತ್ರ ಬಿಡುಗಡೆಯ ಬಗ್ಗೆ ಮಾತ್ರ ಚಿತ್ರತಂಡ ತಲೆಕೆಡಿಸಿಕೊಂಡಿದ್ದು, ಚಿತ್ರದ ಪ್ರಚಾರ ಕಾರ್ಯಕ್ಕೆ ಬೇಕಾದ ಎಲ್ಲಾ ರೀತಿಯಾದ ತಯಾರಿಗಳನ್ನ ಚಿತ್ರತಂಡ ಮಾಡಿಕೊಂಡಿದೆ