ಸರ್ಕಾರಿ ಹುದ್ದೆಗಳ ಭರ್ತಿ ನೇಮಕದ ಭ್ರಷ್ಟಾಚಾರ ಸಂಬಂಧಿ ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಿಎಸ್ಐ ಹುದ್ದೆಗೆ ಮಾತ್ರವಲ್ಲ KPSC ನೇಮಕದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತದೆ. KPSC ಅಧ್ಯಕ್ಷ ಸದಸ್ಯರಾಗಲು ಕೋಟಿ ಕೋಟಿ ಕೊಟ್ಟು ಅಧಿಕಾರ ನಡೆಸೋರು ಸುಮ್ಮನೇ ಇರ್ತಾರೆಯೇ. KPSC ಅಧ್ಯಕ್ಷನಾಗಿದ್ದ ಶಾಂ ಭಟ್ ಮನೆಯಲ್ಲಿ ಭ್ರಷ್ಟಾಚಾರ ವಿರೋಧಿ ದಳಗಳು ದಾಳಿಯಾದಾಗ ಏನೆಲ್ಲ ಸಿಕ್ಕಿದೆ ಎಂಬುದನ್ನು ನಾಡಿನ ಜನತೆ ನೋಡಿಲ್ಲವೇ ಎಂದು ಕಿಡಿಕಾರಿದ್ದಾರೆ.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪಿಎಸ್ಐ ಹುದ್ದೆಗೆ ಮಾತ್ರವಲ್ಲ KPSC ನೇಮಕದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತದೆ . ಎಡಲ್ಲಾ ಸರ್ಕಾರ ಅವಧಿಯಲ್ಲೂ ಈ ಭಷ್ಟಾಚಾರ ನಡೆದಿದೆ. ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಅವರನ್ನು ಕೇಳಿ, ತಮ್ಮ ಅಧಿಕಾರದ ಅವಧಿಯಲ್ಲಿ KPSC ಸಂಸ್ಥೆಗೆ ಯಾವ ಸದಸ್ಯರನ್ನು ಹಣ ಇಲ್ಲದೇ ಪ್ರಮಾಣಿಕವಾಗಿ ನೇಮಕ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂಬುದು ಸರಿಯಲ್ಲ. ಈ ಹಿಂದೆಯೂ ಪೊಲೀಸ್ ನೇಮಕಾತಿಯಲ್ಲಿ ಅವ್ಯವಹಾರ ನಡೆಯುತ್ತಲೇ ಇದೆ ಎಂದು ಆರೋಪಿಸಿದ್ದಾರೆ.
![](https://pratidhvani.com/wp-content/uploads/2022/04/BASANAGOUDA-PATIL-YATNAL-LEAD-1024x576.jpg)
ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಕುಟುಂಬದವರಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಫೂಡ್ ಕಿಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಜಮೀರ್ ಅಹ್ಮದ್ ಖಾನ್ ಯಾವಾಗಲೂ ಹಿಂದೂ ವಿರೋಧಿ ಸರ್ಕಾರದ ವಿರುದ್ದವಿದ್ದಾನೆ. ಪೊಲೀಸ್ ಠಾಣೆ ಹಾಗೂ ದೇವಸ್ಥಾನದ ಮೇಲೆ ಕಲ್ಲು ಒಗೆಯೋರು. ಅಂಥವರ ಬಂಧನವಾದ ಬಳಿಕ ಹೋಗಿ ಸನ್ಮಾನ ಮಾಡುವುದು ಮಾಡುತ್ತಾನೆ. ಹಾಗಾದರೆ ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಸ್ವಪಕ್ಷದ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ.
ಮುಂದುವರೆದು, ನಮ್ಮವರದ್ದೇ ಸಲುಗೆಯಿದೆ, ಎಲ್ಲಾ ಅಡ್ಜೆಸ್ಟ್ಮೆಂಟ್ ಇರೋ ಕಾರಣ ಹೀಗಾಗುತ್ತಿದೆ ಇಂಥವರನ್ನು ಗೃಹ ಸಚಿವರು ಒದ್ದು ಒಳಗೆ ಹಾಕಬೇಕೆಂದು ಯತ್ನಾಳ ಒತ್ತಾಯ ಎಂದು ಹೇಳಿದ್ದಾರೆ.