ಪ್ರವಾದಿ ಮೊಹಮ್ಮದ್ ಅವರ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವಹೇಳನ ಹೇಳಿಕೆಯ ಬಳಿಕ ಇದೀಗ ಭಾರತ ಹಾಗೂ ಅರಬ್ ದೇಶಗಳ ಮಧ್ಯೆ ತಿಕ್ಕಾಟ ತಾರಕಕ್ಕೇರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಕೂಗು ಕೇಳಿಬರುತ್ತಿದೆ.
ಹೌದು, ಸೌದಿ ಅರೇಬಿಯಾ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಯನ್ನು “ಅವಮಾನಕರ” ಎಂದು ಖಂಡಿಸಿದೆ. ಗಲ್ಫ್ನಲ್ಲಿ ಭಾರತೀಯ ಸರಕುಗಳನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾದ ಕರೆಗಳ ಬಂದಿದ್ದವು. ಇದಾದ ಬೆನ್ನಲ್ಲೇ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸುವ ಮಟ್ಟಿಗೆ ಮುಂದುವರಿದಿತ್ತು. ಆ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ.
ನೂಪುರ್ ಶರ್ಮಾ ಅವರ ಹೇಳಿಕೆಯನ್ನು ಖಂಡಿಸಿ ಗಲ್ಫ್ ರಾಷ್ಟ್ರಗಳು ಭಾರತೀಯ ಸರಕುಗಳನ್ನು ಬಹಿಷ್ಕರಿಸುವಂತೆ ಕರೆಕೊಟ್ಟಿದ್ದಾರೆ ಎಂದು ಭಾರತದ ಟ್ವೀಟ್ಟಿಗರು, ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ, ಭಾರತದಲ್ಲಿ ಕಾರ್ಯಚರಿಸುತ್ತಿರುವ ಕತಾರ್ ಏರ್ವೇಸ್ಗೆ ಬಹಿಷ್ಕಾರ ಹಾಕಿ. ನಾವು ಅರಬ್ ದೇಶಗಳ ಯಾವುದೇ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂಬ ಅಭಿಯಾನ ಭಾರತದಲ್ಲಿ ಆರಂಭವಾಗಿದೆ.

ಈ ಕುರಿತು ಟ್ವೀಟ್ಟಿಗರು ಟ್ವೀಟ್ ಮಾಡಿದ್ದು ಬಹುತೇಕ ಜನರ ಅಭಿಪ್ರಾಯ, ನೂಪುರ್ ಶರ್ಮಾ ಕೇವಲ ಉದಾಹರಣೆಯಾಗಿ ಪ್ರವಾದಿ ಮೊಹಮ್ಮದ್ ಕುರಿತಾಗಿ ಮಾತನಾಡಿದ್ದಾರೆ. ಹೊರತು ಅವಹೇಳನಕಾರಿ ಮಾಡಿಲ್ಲ ಎಂದು ನೂಪುರ್ ಶರ್ಮಾರ ಹೇಳಿಕೆ ಪರ ಧ್ವನಿ ಕೇಳಿ ಬರುತ್ತಿದೆ. ಈ ನಡುವೆ ಅರಬ್ ದೇಶಗಳಾದ ಕತಾರ್, ಓಮನ್, ಸೌದಿ ಅರೇಬಿಯಾದಲ್ಲಿ ಭಾರತದಿಂದ ರಫ್ತಾಗುತ್ತಿರುವ ಸರಕುಗಳು ಸೇರಿದಂತೆ ಆಹಾರ ಉತ್ಪನ್ನಗಳನ್ನು ಖರೀದಿಸದಂತೆ ಬಾಯ್ಕಾಟ್ ಚಳವಳಿ ಆರಂಭವಾಗಿದೆ. ಈ ನಡುವೆ ಭಾರತದಲ್ಲಿ ಕಾರ್ಯಚರಿಸುತ್ತಿರುವ ಕತಾರ್ ಏರ್ವೇಸ್ಗೆ ಬಹಿಷ್ಕಾರ ಹಾಕಿ. ನಾವು ಅರಬ್ ದೇಶಗಳ ಯಾವುದೇ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂಬುದಾಗಿದ್ದು, ಭಾರತದಲ್ಲಿ ಅಭಿಯಾನ ಆರಂಭವಾಗಿದೆ.






