ಅಗ್ನಿಪಥ್ ಯೋಜನೆ ಜಾರಿಯಾದ ಮೊದಲ ದಿನದಿಂದಲೇ ದೇಶಾದ್ಯಂತ ವಿರೋದ ತೀರ್ವ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ಅನೇಕ ರಾಜಕೀಯ ನಾಯಕರು ಈ ಯೋಜನೆ ಬಗ್ಗೆ ಕಿಡಕಾರಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ. ಇದರ ನಡುವೆಯೇ ಪಕ್ಷಮ ಬಂಗಾಳದ ಸಿಎಂ ಮಮತ ಬ್ಯಾನರ್ಜಿ ಕೂಡ, BJP ತನ್ನದೇ ಆದ “ಸಶಸ್ತ್ರ” ಕೇಡರ್ ಬೇಸ್ ರಚಿಸಲು ಮುಂದಾಗಿದೆ ಎಂದು ಆರೋಪಿಸಿ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ‘ಅಗ್ನಿಪಥ’ ಯೋಜನೆಯನ್ನು ಟೀಕಿಸಿದ್ದು, ಹೊಸ ರಕ್ಷಣಾ ನೇಮಕಾತಿ ಕಾರ್ಯಕ್ರಮದ ಮೂಲಕ ಬಿಜೆಪಿ ತನ್ನದೇ ಆದ “ಸಶಸ್ತ್ರ” ಕೇಡರ್ ಬೇಸ್ ಅನ್ನು ರಚಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
“ಬಿಜೆಪಿಯು ಈ ಯೋಜನೆಯ ಮೂಲಕ ತನ್ನದೇ ಆದ ಸಶಸ್ತ್ರ ಕೇಡರ್ ಬೇಸ್ ಅನ್ನು ರಚಿಸಲು ಪ್ರಯತ್ನಿಸುತ್ತಿದೆ. ನಾಲ್ಕು ವರ್ಷಗಳ ನಂತರ ಅವರು ಏನು ಮಾಡುತ್ತಾರೆ? ಪಕ್ಷವು ಯುವಕರ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡಲು ಬಯಸುತ್ತದೆ” ಎಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.

ಬಿಜೆಪಿ ಕಚೇರಿಗಳನ್ನು ಕಾವಲು ಕಾಯುವ ಕೆಲಸವನ್ನು ‘ಅಗ್ನಿವೀರ’ರಿಗೆ ಆದ್ಯತೆ ನೀಡುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರ ಹೇಳಿಕೆ ವಿರುದ್ಧ ಬಂಗಾಳದ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು. ನಾಲ್ಕು ವರ್ಷಗಳ ಸೇವಾ ಅವಧಿಯ ನಂತರ ಬಿಜೆಪಿ ತನ್ನ ಪಕ್ಷದ ಕಚೇರಿಗಳಲ್ಲಿ ‘ಅಗ್ನಿವೀರ್’ ಸೈನಿಕರನ್ನು “ಕಾವಲುಗಾರ”ರನ್ನಾಗಿ ನೇಮಿಸಿಕೊಳ್ಳಲು ಯೋಜಿಸುತ್ತಿದೆಯೇ ಎಂದು ಅವರು ಕೇಳಿದ್ದಾರೆ.






