• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕರೋನಾ ಸಮಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ್ದ ಆಯುಷ್‌ ವೈದ್ಯರ ಬದುಕು ಅತಂತ್ರ !

Any Mind by Any Mind
March 13, 2022
in ಕರ್ನಾಟಕ
0
ಕರೋನಾ ಸಮಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ್ದ ಆಯುಷ್‌ ವೈದ್ಯರ ಬದುಕು ಅತಂತ್ರ !
Share on WhatsAppShare on FacebookShare on Telegram

ಕೊರೋನಾ ನಿಭಾಯಿಸಲು ಸರ್ಕಾರ ಬಿದ್ದ ಪಾಡು ಅಕ್ಷರಶಃ ಪರದಾಟ. ಆರೋಗ್ಯ ಸೇವೆ ನೀಡಲು ಸಾಧ್ಯವಾದ ರೀತಿಯಲ್ಲೆಲ್ಲಾ ಪ್ರಯತ್ನಿಸುತ್ತಿದ್ದ ಸರ್ಕಾರ ಹಾಗೂ ಬಿಬಿಎಂಪಿಯ ಕೈ ಹಿಡಿದಿದ್ದು ಆಯುಷ್ ವೈದ್ಯರು. ಹೌದು, ಆಯುಷ್ ವೈದ್ಯರು ಕೋವಿಡ್ ಸಮಯದಲ್ಲಿ ನುರಿತ ವೈದ್ಯರಂತೆ ಆಖಾಡಕ್ಕಿಳಿದು ತಮ್ಮ ಜೀವವನ್ನೇ ಒತ್ತೆ ಇಟ್ಟು ಸೇವೆ ಸಲ್ಲಿಸಿದ್ದರು. ಆದರೀಗ ಕೋವಿಡ್ ಟೈಮ್ ನಲ್ಲಿ ಪಾಲಿಕೆ ಕೈ ಹಿಡಿದಿದ್ದ ಆಯುಷ್ ವೈದ್ಯರ ಕೈ ಬಿಡುತ್ತಾ ಬಿಬಿಎಂಪಿ ಎಂಬ ಪ್ರಶ್ನೆ ಉದ್ಭವವಾಗಿದೆ.

ADVERTISEMENT

ಮೂರು ಅಲೆಗಳನ್ನು ನೋಡಿ ದಂಗಾದ ಜನರು ಮತ್ತೆಂದೂ ಇಂಥಾ ಬದುಕು ಬೇಡಪ್ಪಾ ಎಂದು ಬೇಡಿಕೊಳ್ಳದೆ ಇರದವರಿಲ್ಲ. ಅಷ್ಟು ಭೀಕರವಾಗಿತ್ತು ಕೊರೋನಾ ಕಾಲ. ಅಂಥಾ ಸಮಯದಲ್ಲಿ ಬೆಂಗಳೂರಿನಂಥಾ ಕೊರೋನಾ ಹಾಟ್ ಸ್ಪಾಟ್ನಲ್ಲಿ ಬಿಬಿಎಂಪಿ ಹೆಗಲಿಗೆ ಹೆಗಲು ಕೊಟ್ಟು ದುಡಿದ್ದು ಆಯುಷ್ ವೈದ್ಯರು. ನುರಿತ ವೈದ್ಯರಂತೆ ಜನರ ನಡುವೆ ಇದ್ದು ಜನರ ಸೇವೆಯನ್ನು ಆಯುಷ್ ವೈದ್ಯರು ಮಾಡಿದ್ದರು. ಇದೀಗ ಅವರ ಬದುಕೇ ಅತಂತ್ರವಾಗಿ ಬಿಡುವ ಹಂತದಲ್ಲಿದೆ. ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದ ಮೇರೆಗೆ ಸೇವೆಗೆ ತೆಗೆದುಕೊಳ್ಳಲಾಗಿತ್ತು. ಇದೀಗ ಅವರ ಗುತ್ತಿಗೆ ಅವಧಿ ಈ ತಿಂಗಳಿಗೆ ಕೊನೆಗೊಳ್ಳಲಿದ್ದು, ಸೇವೆಯಿಂದ ತೆಗೆದುಹಾಕುವ ಸಾಧ್ಯತೆ ಇದೆ. ಇದಕ್ಕೆ ಈಗ ಆಯುಷ್ ವೈದ್ಯರು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.

ಹಗಲಿರುಳು ಕೊರೋನಾ ವಿರುದ್ಧ ಹೋರಾಡಿದ ಗುತ್ತಿಗೆ ವೈದ್ಯರ ಸಮಯ ಈ ತಿಂಗಳು ಮುಕ್ತಾಯವಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ಸುಮಾರು 1 ಸಾವಿರ BAMS ವೈದ್ಯರನ್ನ ಸೇವೆಗೆ ತೆಗೆದುಕೊಂಡಿತ್ತು ಪಾಲಿಕೆ. ಮೂರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸೇವೆಗೆ ನೇಮಕ ಮಾಡಲಾಗಿತ್ತು. ಬಳಿಕ ಕೋವಿಡ್ 2ನೇ, 3ನೇ ಅಲೆ ಹಿನ್ನೆಲೆ ಅವರ ಸೇವೆಯನ್ನ ಮುಂದುವರಿಸಲಾಗಿತ್ತು. ಸದ್ಯ ರಾಜಧಾನಿಯಲ್ಲಿ ಕೋವಿಡ್ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಯುರ್ವೇದ ವೈದ್ಯರ ಸ್ಥಿತಿ ಅತಂತ್ರವಾಗಿದೆ. ಈ ಎಲ್ಲಾ ವೈದ್ಯರ ಸೇವೆಯನ್ನ ಮುಂದುವರಿಸದಿರಲು ಪಾಲಿಕೆ ನಿರ್ಧಾರಿಸಿದಂತಿದೆ. ಈ ಕುರಿತು ಪಾಲಿಕೆಯ ಮುಖ್ಯ ಆರೋಗ್ಯ ಅಧಿಕಾರಿ ಬಾಲ ಸುಂದರ್ ಮಾಹಿತಿ ನೀಡಿದ್ದು, ಈ ಸಂಬಂಧ ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ವರದಿ ನೀಡಲಾಗಿದೆ. ಸರ್ಕಾರದ ಸೂಚನೆ ಮೇರೆಗೆ, ಈ ವೈದ್ಯರನ್ನ ಸೇವೆಯಲ್ಲಿ ಉಳಿಸಿಕೊಳ್ಳ ಬೇಕಾ ಅಥವಾ ಬೇಡವಾ ಎಂಬ ನಿರ್ಧಾರಕ್ಕೆ ಪಾಲಿಕೆ ಬರಲಿದೆ ಎಂದು ಹೇಳಿದ್ದಾರೆ.

ಆಯುಷ್ ವೈದ್ಯರನ್ನು ಸೇವೆಯಿಂದ ತೆಗೆದು ಹಾಕದಂತೆ ಕರ್ನಾಟಕ ಆಯುಷ್ ವೈದ್ಯರ ಸಂಘ ಒತ್ತಾಯಿಸಿದೆ. ಕೊರೋನಾ ಸಮಯದಲ್ಲಿ MBBS ವೈದ್ಯರಂತೆ ಬದುಕು ಒತ್ತೆ ಇಟ್ಟು ಜನರ ಹಾಗೂ ಸರ್ಕಾರದ ಸೇವೆ ಮಾಡಿದ್ದೇವೆ. ಈಗ ಕೆಲಸ ಮುಗಿದ ಬಳಿಕ ಏಕಾಏಕಿ ನಮ್ಮನ್ನು ತೆಗೆದು ಹಾಕಿದರೆ ಹೇಗೆ.!? ನಮ್ಮ ಬದುಕಿಗೆ ಭದ್ರತೆ ಒದಗಿಸಿ ಬೇಕಿದ್ದರೆ ತೆಗೆದು ಹಾಕಿ. ನಮ್ಮ ಕ್ಲಿನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳು ಹೀಗೆ ನೂರಾರು ಅವಕಾಶಗಳಿವೆ. ಇಲ್ಲಿ ಎಲ್ಲಾದರು ಆಯುಷ್ ವೈದ್ಯರಿಗೆ ಸ್ಥಳನಿಯೋಜನೆ ಮಾಡಿ ಬೇಕಿದ್ದರೆ ಕಿತ್ತು ಹಾಕಿ. ಕೊರೋನಾ ಸಮಯದಲ್ಲಿ ಬೆಂಗಳೂರಿನಲ್ಲಿ ಆಯುಷ್ ವೈದ್ಯರು ಎಲ್ಲರಂತೆ ಬದುಕನ್ನು ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ಅದನ್ನಾದರೂ ಬಿಬಿಎಂಪಿ ಹಾಗೂ ಸರ್ಕಾರ ಗಮನದಲ್ಲಿಟ್ಟುಕೊಂಡು ಪರ್ಯಾಯ ಕಲ್ಪಿಸಬೇಕು ಎಂದು ಕರ್ನಾಟಕ ಆಯುಷ್ ವೈದ್ಯರ ಸಂಘದ ಕಾರ್ಯದರ್ಶಿ ಈರಣ್ಣ ಆಕ್ರೋಶ ಹೊರ ಹಾಕಿದ್ದಾರೆ.

ಹೀಗೆ ಇದೀಗ ಆಯುಷ್ ವೈದ್ಯರ ಬದುಕು ಅತಂತ್ರವಾಗಿದೆ. ಮುಂದೆ ನಾಲ್ಕನೇ ಅಲೆ ಬರಬಹುದು ಎಂಬ ಅಭಿಪ್ರಾಯ ಹಿರಿಯ ತಜ್ಞ ವೈದ್ಯರ ವಲಯದಲ್ಲಿ ಇದ್ದರೂ ಕೂಡ ಅಷ್ಟೊಂದು ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಆಯುಷ್ ವೈದ್ಯರ ಸೇವೆಯನ್ನು ಕೊನೆಗೊಳಿಸಲು ಪಾಲಿಕೆ ತೀರ್ಮಾನಿಸಿದಂತೆ. ಆದರೆ ಕೆಲಸ ಮುಗಿದ ಬಳಿಕ ಸೇವೆಯಿಂದ ತೆಗೆದು ಹಾಕುವುದು ನೈತಿಕ ನೆಲೆಗಟ್ಟಿನಲ್ಲಿ ಸರಿಯೇ ಎಂಬ ಪ್ರಶ್ನೆ ಸದ್ಯದ್ದು.

Tags: ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ಗುತ್ತಿಗೆ ಆಧಾರನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಯುಷ್‌ ವೈದ್ಯಸಿದ್ದರಾಮಯ್ಯ
Previous Post

ರಷ್ಯಾ ಸರ್ಕಾರ ಮತ್ತು ಸೇನೆಯ ವಿರುದ್ಧ ಹಿಂಸಾತ್ಮಕ ಪೋಸ್ಟ್ : ‌ ಇನ್ಸ್ಟಾಗ್ರಾಮ್‌ ನಿಷೇಧಿಸಿದ ರಷ್ಯಾ!

Next Post

ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ಅವಗಣನೆಗೆ ಒಳಗಾಯಿತೇ ಟಿ.ಬಿ?

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
ಕೇಂದ್ರ ಸರ್ಕಾರದ ಮೇಲೆ ಭರವಸೆ ಇದೆ: ಡಿಸಿಎಂ ಡಿ.ಕೆ ಶಿವಕುಮಾರ್ ಅಚ್ಚರಿ ಹೇಳಿಕೆ

ಕೇಂದ್ರ ಸರ್ಕಾರದ ಮೇಲೆ ಭರವಸೆ ಇದೆ: ಡಿಸಿಎಂ ಡಿ.ಕೆ ಶಿವಕುಮಾರ್ ಅಚ್ಚರಿ ಹೇಳಿಕೆ

February 13, 2026
Next Post
ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ಅವಗಣನೆಗೆ ಒಳಗಾಯಿತೇ ಟಿ.ಬಿ?

ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ಅವಗಣನೆಗೆ ಒಳಗಾಯಿತೇ ಟಿ.ಬಿ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada