ಮನೆಗೆ ಮಾರಿ ಪರರಿಗೆ ಉಪಕಾರಿ ಎಂಬಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಅಂತ ಮಂಡ್ಯ (mandya) ಭಾಗದ ರೈತರು ಮತ್ತು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕಾರಣ ಇಂಥ ಭೀಕರ ಬರದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ (tamil nadu) ಕಾವೇರಿ ನೀರು ಹರಿಸಿರೋದು. ಕಳೆದ ಹಲವು ತಿಂಗಳಿಂದ ರಾಜ್ಯದಲ್ಲಿ ಬರ ತಲೆದೋರಿದೆ. ಇದೀಗ ಬೇಸಿಗೆ ಆರಂಭವಾಗಿರೋದ್ರಿಂದ ಕುಡಿಯುವ ನೀರು ಮತ್ತು ಗೃಹಬಳಕೆಗೆ ತತ್ವಾರ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ (cauvery) ನೀರು ಹರಿಸುವ ನೀಚತನಕ್ಕೆ ಇಳಿಯಬಾರದಿತ್ತು ಎಂದು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತ ಬೆಂಗಳೂರು (bengaluru) ಸೇರಿ ರಾಜ್ಯದೆಲ್ಲೆಡೆ ಈಗಾಗಲೇ ಜಲಸಂಕಷ್ಟ ತಾಂಡವವಾಡ್ತಿದೆ. ಅತ್ತ ಮಂಡ್ಯದ ಕೆಆರ್ಎಸ್ ಡ್ಯಾಂ (krs dam) ಕೂಡ ನೀರಿಲ್ಲದೇ ಬರಿದಾಗ್ತಿದೆ.. ಹೀಗಿದ್ದರೂ ಶನಿವಾರ ಸಂಜೆಯಿಂದ ಸರ್ಕಾರ ಕೆಆರ್ಎಸ್ನಿಂದ ತಮಿಳುನಾಡಿಗೆ 4 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಸುತ್ತಿರುವ ಆರೋಪ ಕೇಳಿಬಂದಿದೆ..ಆದ್ರೆ ಕೆಆರ್ಎಸ್ನಿಂದ ಹೊರ ಹರಿವು ಹೆಚ್ಚಳ ಆಗಿದೆ ಅಷ್ಟೇ, ತಮಿಳುನಾಡಿಗೆ ನಾವು ನೀರು ಬಿಡ್ತಿಲ್ಲ ಅಂತ ಆಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ..ಇದನ್ನ ಒಪ್ಪದ ಬಿಜೆಪಿ (bjp) ಸ್ಪಷ್ಟನೆ ಬಳಿಕವೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಸಿಎಂ(cm) ಹಾಗೂ ಡಿಸಿಎಂರನ್ನು (dcm) ವಾಟರ್ಮ್ಯಾನ್ ಹೋಲಿಸಿ ಪೋಸ್ಟ್ ಹಾಕಿ ಛಾಟಿ ಬೀಸಿದೆ.
ಹೀಗಾಗಿ ಕಾವೇರಿ ಕೊಳ್ಳ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ಹಾಗೂ ಕನ್ನಡಸೇನೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಪ್ಪುಬಟ್ಟೆ ಕಟ್ಟಿಕೊಂಡು ಸಿಎಂ ಹಾಗೂ ಡಿಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿವೆ..ಈ ಕೂಡಲೇ ನೀರು ನಿಲ್ಲಿಸುವಂತೆ ಆಗ್ರಹಿಸಿವೆ.