Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಮೋದಿ ತವರಲ್ಲಿ ಬಚ್ಚಿಟ್ಟುಕೊಂಡಿದ್ದ ಸ್ಯಾಂಟ್ರೋ ರವಿ ಬಚಾವ್​ ಮಾಡುವ ಯತ್ನ..! ಯಾರಿಂದ.?

ಪ್ರತಿಧ್ವನಿ

ಪ್ರತಿಧ್ವನಿ

January 14, 2023
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ಮಂಡ್ಯ: ತೋಟದ ಮನೆಗೆ ನುಗ್ಗಿದ ಚಿರತೆ

ಹೃದಯಾಘಾತದಿಂದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಚಾಮುಂಡಿ ಬೆಟ್ಟ ಸೇರಿದಂತೆ 15 ಕಡೆ ರೋಪ್ ವೇ ಯೋಜನೆ

ಪತ್ನಿಗೆ ಹಿಂಸೆ ಕೊಟ್ಟ ಕೇಸ್​ನಿಂದ ಇಡೀ ಬ್ರಹ್ಮಾಂಡವನ್ನೇ ಹೊರ ಪ್ರಪಂಚಕ್ಕೆ ಗೊತ್ತಾಗುವಂತೆ ಮಾಡಿಕೊಂಡಿದ್ದ ದಲ್ಲಾಳಿ ಸ್ಯಾಂಟ್ರೋ ರವಿಯನ್ನು ಕರ್ನಾಟಕ ಪೊಲೀಸರು ಗುಜರಾತ್​ನಲ್ಲಿ ಬಂಧಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಅವರ ಪುತ್ರನ ಜೊತೆ ಸೇರಿದಂತೆ ಇಡೀ ಬಿಜೆಪಿ ಸಚಿವರು ಹಾಗು ಬಿಜೆಪಿ ಶಾಸಕರ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್​ನ ಅಹಮದಾಬಾದ್​ನಲ್ಲಿ ಬಂಧನ ಮಾಡಲಾಗಿದೆ. ಮೈಸೂರು ಪೊಲೀಸರು ಸ್ಯಾಂಟ್ರೋ ರವಿ ಬಂಧನಕ್ಕೆ ಬೆಂಗಳೂರು ಸಿಸಿಬಿ, ಮೈಸೂರು ಕಮಿಷನರ್ ಟೀಂ, ರಾಮನಗರ ಎಸ್​​ಪಿ ಹಾಗು ಮಂಡ್ಯ ಎಸ್​ಪಿ ಟೀಂ ರಚನೆ ಮಾಡಲಾಗಿತ್ತು. ಇದೀಗ ರಾಮನಗರ‌ SP ಸಂತೋಷ್​ ಬಾಬು ನೇತೃತ್ವದ ತಂಡ ಗುಜರಾತ್​​ಗೆ ತೆರಳಿ ಮಂಜುನಾಥ್​ ಅಲಿಯಾಸ್​ ಸ್ಯಾಂಟ್ರೋ ರವಿಯನ್ನು ಬಂಧನ ಮಾಡಲಾಗಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಸ್ಯಾಂಟ್ರೋ ರವಿ ಬಂಧನ ಮಾಡಿ ಬಚಾವ್ ಮಾಡುವ ಕೆಲಸ ನಡೆಯುತ್ತಿದ್ಯಾ..? ಅನ್ನೋ ಶಂಕೆ ಕಾಡುತ್ತಿದೆ.

ಸ್ಯಾಂಟ್ರೋ ರವಿ ಬಂಧನ ಭೀತಿಯಲ್ಲಿ ಎಸ್ಕೇಪ್​ ಆಗಿದ್ದು ಹೇಗೆ..?

ಮೈಸೂರಿನಲ್ಲಿ ಜನವರಿ 2ರಂದು ಮಂಜುನಾಥ್​ ಅಲಿಯಾಸ್​ ಸ್ಯಾಂಟ್ರೋ ರವಿ ನನಗೆ ಮೋಸ ಮಾಡಿದ್ದಾನೆ ಎಂದು ಪತ್ನಿ ದೂರು ದಾಖಲು ಮಾಡ್ತಿದ್ದ ಹಾಗೆ ಕೇರಳಕ್ಕೆ ಬಸ್​ನಲ್ಲಿ ಜಾಗ ಖಾಲಿ ಮಾಡಿದ್ದ ಆರೋಪಿ ಮಂಜುನಾಥ್​, ಕೇರಳದಿಂದ ವಿಮಾನದ ಮೂಲಕ ಗುಜರಾತ್​ ಸೇರಿಕೊಂಡಿದ್ದ ಎನ್ನುವುದು ಪೊಲೀಸ್​ ಮೂಲಗಳ ಮಾಹಿತಿ. ಗುಜರಾತ್​ನ ಸ್ನೇಹಿತರೊಬ್ಬರ ಸಹಾಯದಿಂದ ಅಹಮದಾಬಾದ್​ನಲ್ಲಿ ಸ್ಯಾಂಟ್ರೋ ರವಿ ಉಳಿದುಕೊಂಡಿದ್ದ. ವೇಷ ಬದಲಿಸಿಕೊಂಡು ಸಂಚಾರ ಮಾಡಿದ್ದಾನೆ. ವಿಗ್ ಮತ್ತು ಸ್ಪೆಕ್ಟ್ ತೆಗೆದು ಟ್ರಾವೆಲ್ ಮಾಡಿದ್ದರಿಂದ ಪೋಟೋ ಸಹಿತ ಲುಕ್ ಔಟ್ ನೋಟಿಸ್​ ಹೊರಡಿಸಿದ್ದರು ಮೈಸೂರು ಪೊಲೀಸರಿಗೆ ರವಿ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎನ್ನಲಾಗ್ತಿದೆ. ಸದ್ಯ ಅಹಮದಾಬಾದ್​ನಲ್ಲಿ ರಾಜ್ಯ ಪೊಲೀಸರ ವಶದಲ್ಲಿರೋ ಸ್ಯಾಂಟ್ರೋ ರವಿಯನ್ನು ಶನಿವಾರ ಬೆಳಗ್ಗೆ ಮೈಸೂರಿಗೆ ಕರೆತರಲು ಪ್ರಯತ್ನ ನಡೆದಿದೆ. ಸ್ಥಳೀಯ ಕೋರ್ಟ್​ಗೆ ಹಾಜರು ಮಾಡಿ ಆ ಬಳಿಕ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದುಕೊಂಡು ಬರಲಾಗುತ್ತದೆ. ಆದ್ರೆ ಸ್ಯಾಂಟ್ರೋ ರವಿಯನ್ನು ಬಚಾವ್ ಮಾಡುವ ಪ್ರಯತ್ನ ನಡೆದಿದೆ ಎನ್ನುವ ಶಂಕೆ ಗೃಹ ಸಚಿವರ ಮಾತಿನಿಂದಲೇ ಮೂಡುತ್ತಿದೆ.

ಗೃಹ ಸಚಿವರಿಗೂ ಸ್ಯಾಂಟ್ರೋ ರವಿಗೂ ಟ್ರಾವೆಲ್​ ಲಿಂಕ್..!

ಗುಜರಾತ್​ನ ಅಹಮದಾಬಾದ್​ನಲ್ಲಿ ಸ್ಯಾಂಟ್ರೋ ರವಿ ಹಾಗು ಆತನ ಆಪ್ತ ರಾಮ್ ಜೀ (45), ಮತ್ತು ಸತೀಶ್ ಕುಮಾರ್ (35) ಎಂಬುವರನ್ನು ಬಂಧನ ಮಾಡಲಾಗಿದೆ. ದೂರು ದಾಖಲಾದ 11 ದಿನಗಳ ನಂತರ ಸ್ಯಾಂಟ್ರೋ ರವಿಯನ್ನು ಬಂಧನ ಮಾಡಲಾಗಿದೆ. ಇನ್ನು ವಂಚಕ ಎನ್ನಲಾದ, ಸ್ಯಾಂಟ್ರೋ ರವಿಯನ್ನು, ಬಂಧಿಸುವಲ್ಲಿ, ರಾಜ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನ ಬಂಧನದಿಂದ, ಎಲ್ಲಾ ಊಹಾ ಪೋಹಗಳಿಗೆ ತೆರೆ ಬಿದ್ದಂತಾಗಿದೆ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ, ತಪ್ಪಿಸಿ ಕೊಳ್ಳುತ್ತಿದ್ದ, ಸ್ಯಾಂಟ್ರೋ ರವಿಯನ್ನು ಬಂಧಿಸಿದ್ದು, ಆತನ ವಿರುದ್ಧ ಇರುವ ಆರೋಪಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ, ತಪ್ಪಿತಸ್ಥನಾಗಿದ್ದರೆ, ಸೂಕ್ತ ಕಾನೂನು ಕ್ರಮ ಜರುಗಿಸಿ, ಸಂತ್ರಸ್ತ ವ್ಯಕ್ತಿಗೆ, ನ್ಯಾಯ ಒದಗಿಸಲಾಗುತ್ತದೆ ಎಂದಿದ್ದಾರೆ. ವಿಶೇಷ ಅಂದ್ರೆ ಗುರುವಾರ ಅಷ್ಟೇ ಗುಜರಾತ್​ನ ಅಹಮದಾಬಾದ್​​ಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರಗ ಜ್ಞಾನೇಂದ್ರ, ನಾನು ಗುಜರಾತ್​ಗೆ ಭೇಟಿ ನೀಡಿದ್ದು ಕಾಕತಾಳಿಯ ಅಷ್ಟೆ ಎಂದಿದ್ದಾರೆ. ಆದರೆ ಕಾಂಗ್ರೆಸ್​ ಮಾತ್ರ ಇದು ಕಾಕತಾಳಿಯ ಅಲ್ಲವೇ ಅಲ್ಲ ಎಂದು ಕುಟುಕಿದೆ.

ಪೊಲೀಸ್​ ಇಲಾಖೆಯಂದ ಸ್ಯಾಂಟ್ರೋ ರವಿಗೆ ಶಿಕ್ಷೆ ಆಗುತ್ತಾ..?

ಪೊಲೀಸ್​ ಆಧಿಕಾರಿಗಳ ವರ್ಗಾವಣೆ ದಂಧೆ ಮಾಡುತ್ತಾ, ಹಿರಿಯ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು, ಯುವತಿಯರನ್ನು ಮಂಚಕ್ಕೆ ರವಾನೆ ಮಾಡುವ ಕೆಲಸ ಮಾಡುತ್ತಿದ್ದ ಸ್ಯಾಂಟ್ರೋ ರವಿ ಬಿಜೆಪಿ ಸರ್ಕಾರದಲ್ಲಿ ಬೃಹತ್​ ಹೆಮ್ಮರವಾಗಿ ಬೆಳೆದುಕೊಂಡಿದ್ದಾನೆ. ಇದೀಗ ಸರ್ಕಾರ ರಾಜ್ಯ ಸರ್ಕಾರದ ಅಧೀನದಲ್ಲೇ ತನಿಖೆ ನಡೆಯಲಿದೆ. ಈಗಾಗಲೇ ಅಧಿಕಾರಿಗಳ ವರ್ಗಾವಣೆ ಮೂಲಕ ಇಡೀ ಪೊಲೀಸ್​ ಅಧಿಕಾರಿಗಳ ಮೇಲೆ ದರ್ಪ ದವಲತ್ತು ಮೆರೆದಿರುವ ಸ್ಯಾಂಟ್ರೋ ರವಿಯನ್ನು ಪೊಲೀಸ್ರು ಸರಿಯಾಗಿ ವಿಚಾರಣೆ ಮಾಡಲು ಸಾಧ್ಯವೇ..? ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ. ನ್ಯಾಯಾಂಗ ತನಿಖೆ ಆಗಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ. ಮೈಸೂರಿನಲ್ಲಿ ಮಂಜುನಾಥ್​ ಅಲಿಯಾಸ್​ ಸ್ಯಾಂಟ್ರೋ ರವಿ, ಪತ್ನಿ ಕೊಟ್ಟಿದ್ದ ಕಿರುಕುಳ ಕೇಸ್​​ವೊಂದು ದಾಖಲಾಗಿತ್ತು. ಆ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಸ್ಯಾಂಟ್ರೋ ರವಿ ಯಾರು..? ಆತನ ಕಾಯಕ ಏನು..? ಅನ್ನೋದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಬಳಿಕ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಇದೀಗ ಬಂಧನ ಆಗಿದೆ. ರಾಜ್ಯ ಸರ್ಕಾರ ತನಿಖೆಯಲ್ಲಿ ಸತ್ಯ ಹೊರಬರುತ್ತಾ..? ಅನ್ನೋದೇ ಅನುಮಾನ.

-ಕೃಷ್ಣಮಣಿ

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

T67 ಶೀರ್ಷಿಕೆ ಘೋಷಣೆಗೆ ಸಿದ್ಧತೆ: ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು ʼEAGLEʼ.!
Top Story

T67 ಶೀರ್ಷಿಕೆ ಘೋಷಣೆಗೆ ಸಿದ್ಧತೆ: ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು ʼEAGLEʼ.!

by ಪ್ರತಿಧ್ವನಿ
February 2, 2023
ಟರ್ಕಿ, ಸಿರಿಯಾದಲ್ಲಿ 24 ಗಂಟೆಗಳ ಅವಧಿಯಲ್ಲಿ ಪ್ರಬಲ ಮೂರು ಭೂಕಂಪ: 2300 ಕ್ಕೂ ಅಧಿಕ ಸಾವು
ವಿದೇಶ

ಟರ್ಕಿ, ಸಿರಿಯಾದಲ್ಲಿ 24 ಗಂಟೆಗಳ ಅವಧಿಯಲ್ಲಿ ಪ್ರಬಲ ಮೂರು ಭೂಕಂಪ: 2300 ಕ್ಕೂ ಅಧಿಕ ಸಾವು

by ಪ್ರತಿಧ್ವನಿ
February 6, 2023
ಕುಮಾರಸ್ವಾಮಿ ಹೆಂಗೆ ಅಂದ್ರೆ ಬುಸ್… ಬುಸ್… ತರ . #pratidhvaninews #pratidhvani #hdkumaraswamy #zamir
ರಾಜಕೀಯ

ಕುಮಾರಸ್ವಾಮಿ ಹೆಂಗೆ ಅಂದ್ರೆ ಬುಸ್… ಬುಸ್… ತರ . #pratidhvaninews #pratidhvani #hdkumaraswamy #zamir

by ಪ್ರತಿಧ್ವನಿ
February 7, 2023
Ayanur Manjunath: ಶಿವಮೊಗ್ಗ ನಗರಕ್ಕೆ ಐಕೆಟ್ ಬೇಡಿಕೆ ಇಟ್ಟ ಆಯನೂರು, ಈಶ್ವರಪ್ಪನರನ್ನೇ ಕುಟುಕಿದರು #pratidhvani
ರಾಜಕೀಯ

Ayanur Manjunath: ಶಿವಮೊಗ್ಗ ನಗರಕ್ಕೆ ಐಕೆಟ್ ಬೇಡಿಕೆ ಇಟ್ಟ ಆಯನೂರು, ಈಶ್ವರಪ್ಪನರನ್ನೇ ಕುಟುಕಿದರು #pratidhvani

by ಪ್ರತಿಧ್ವನಿ
February 8, 2023
ಬಿಜೆಪಿ ಸರ್ಕಾರ ಬಂದ್ ಮೇಲೆ ಕರ್ನಾಟಕ 20 ವರ್ಷ ಹಿಂದೆ ಉಳಿದಿದೆ : Siddaramaiah #pratidhvani #siddaramaiah #bjp
ರಾಜಕೀಯ

ಬಿಜೆಪಿ ಸರ್ಕಾರ ಬಂದ್ ಮೇಲೆ ಕರ್ನಾಟಕ 20 ವರ್ಷ ಹಿಂದೆ ಉಳಿದಿದೆ : Siddaramaiah #pratidhvani #siddaramaiah #bjp

by ಪ್ರತಿಧ್ವನಿ
February 8, 2023
Next Post
ಭಾರತ್​ ಜೋಡೋ ಯಾತ್ರೆ: ರಾಹುಲ್ ಜೊತೆ ಹೆಜ್ಜೆ ಹಾಕುತ್ತಿದ್ದ ಸಂಸದ ಸಂತೋಖ್ ಸಿಂಗ್ ಹೃದಯಾಘಾತಕ್ಕೆ ಬಲಿ

ಭಾರತ್​ ಜೋಡೋ ಯಾತ್ರೆ: ರಾಹುಲ್ ಜೊತೆ ಹೆಜ್ಜೆ ಹಾಕುತ್ತಿದ್ದ ಸಂಸದ ಸಂತೋಖ್ ಸಿಂಗ್ ಹೃದಯಾಘಾತಕ್ಕೆ ಬಲಿ

ಸ್ಯಾಂಟ್ರೋ ರವಿಗೆ ಗಂಟೆಗೊಮ್ಮೆ ಇನ್ಸುಲಿನ್ ನೀಡಿ ವಿಚಾರಣೆ: ಎಡಿಜಿಪಿ ಅಲೋಕ್ ಕುಮಾರ್

ಸ್ಯಾಂಟ್ರೋ ರವಿಗೆ ಗಂಟೆಗೊಮ್ಮೆ ಇನ್ಸುಲಿನ್ ನೀಡಿ ವಿಚಾರಣೆ: ಎಡಿಜಿಪಿ ಅಲೋಕ್ ಕುಮಾರ್

ಜೋಷಿಮಠದ ದುರಂತ – ನಮ್ಮಲ್ಲಿ ನಿಸರ್ಗಪ್ರಜ್ಞೆ ಹೆಚ್ಚಿಸುವುದೇ ?

ಜೋಷಿಮಠದ ದುರಂತ - ನಮ್ಮಲ್ಲಿ ನಿಸರ್ಗಪ್ರಜ್ಞೆ ಹೆಚ್ಚಿಸುವುದೇ ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist