• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಭಾರತದ ರೈತರ ಹೋರಾಟಕ್ಕೆ ಮತ್ತಷ್ಟು ಬಲ: ಅಮೇರಿಕಾದ 87 ರೈತ ಸಂಘಗಳಿಂದ ಬೆಂಬಲ

by
February 22, 2021
in ವಿದೇಶ
0
ಭಾರತದ ರೈತರ ಹೋರಾಟಕ್ಕೆ ಮತ್ತಷ್ಟು ಬಲ: ಅಮೇರಿಕಾದ 87 ರೈತ ಸಂಘಗಳಿಂದ ಬೆಂಬಲ
Share on WhatsAppShare on FacebookShare on Telegram

ಭಾರತದ ರೈತರ ಹೋರಾಟಕ್ಕೆ ವಿಶ್ವದಾದ್ಯಂತ ಬೆಂಬಲ ಸಿಕ್ಕಿದ್ದು, ಇದೀಗ ಅಮೇರಿಕಾದ ಕೃಷಿ-ಪರಿಸರ ವಿಜ್ಞಾನ, ಕೃಷಿ ಮತ್ತು ಆಹಾರ ನ್ಯಾಯ ಸಂಘಟನೆ ಸೇರಿದಂತೆ 87 ರೈತ ಸಂಘಟನೆಗಳು ಭಾರತದ ರೈತರ ಪ್ರತಿಭಟನೆಗೆ ಬೆಂಬಲನೀಡಿದ್ದು, ಇದರಿಂದ ರೈತ ಹೋರಾಟಕ್ಕೆ ಮತ್ತಷ್ಟು ಬಲಸಿಕ್ಕಂತಾಗಿದೆ.

ADVERTISEMENT

ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಆಧುನಿಕ ಇತಿಹಾಸದಲ್ಲಿಯೇ ವಿಶ್ವದ ರೋಮಾಂಚನಕಾರಿ ಪ್ರತಿಭಟನೆಯಾಗಿದೆ ಎಂದು ಬೆಂಬಲ ಸೂಚಿಸಿದ ರೈತ ಸಂಘಟನೆಗಳು ಅಭಿಪ್ರಾಯಪಟ್ಟಿವೆ. ಅಮೇರಿಕಾ ರೈತರಿಗೆ ಸರಿಪಡಿಸಲಾಗದ ಹಾನಿಗೆ ಕಾರಣವಾದ ರೇಗನ್ ಯುಗದ ನೀತಿಗಳ ಕೆಟ್ಟ ಉದಾಹರಣೆಗಳನ್ನು ಉಲ್ಲೇಖಿಸಿ, ಅಮೇರಿಕಾ ರೈತ ಸಂಘಗಳು ಭಾರತದ ಪ್ರತಿಭಟನಾನಿರತ ರೈತರಿಗೆ ಬೆಂಬಲ ನೀಡಿವೆ ಎಂದು ದಿ ವೈರ್ ವರದಿ ಮಾಡಿದೆ.

“ನವ ಉದಾರೀಕರಣದ ಶಕ್ತಿಗಳಿಂದ” ಕೃಷಿ ಹೇಗೆ ಸಂಕಷ್ಟಕ್ಕೆ ಸಿಲುಕಿದೆ ಹಾಗು ಅವುಗಳ ನಡುವಿರುವ ನಿಕಟ ಸಂಬಂಧವನ್ನು ಉಲ್ಲೇಖಿಸಿ ಪತ್ರಬರೆದು, ಕೃಷಿಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಭಾರತದ ರೈತರಿಗೆ ಅಮೇರಿಕಾದ ರೈತರು ನಾವು ಕೂಡ ನಿಮ್ಮ ಹೋರಾಟಕ್ಕೆ ಬೆಂಬಲಿಸುತ್ತೇವೆಂಬ ಸಂದೇಶ ಕೊಟ್ಟಿದ್ದಾರೆ.

ರೈತರ ಗಮನಕ್ಕೆ ತರದೆ ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸದೆ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂಬುವುದು ಭಾರತದ ರೈತರ ಬೇಡಿಕೆಯಾಗಿದೆ. ತಮ್ಮ ಹಕ್ಕು ಮತ್ತು ಘನತೆಗಾಗಿ ಹೋರಾಡುತ್ತಿರುವ ಅಸಂಖ್ಯಾತ ರೈತರಿಗೆ ಬೆಂಬಲ ಸೂಚಿಸಿ, ನಮ್ಮ ಒಗ್ಗಟ್ಟಿನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆಂದು ಅಮೇರಿಕಾ ರೈತ ಸಂಘಟನೆಗಳು ಪತ್ರದಲ್ಲಿ ಉಲ್ಲೇಖಿಸಿವೆ. ಹೋರಾಟದ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೆಲವು ಬೆಳೆಗಳಿಗೆ ಮಾತ್ರ ಲಭ್ಯವಿದೆ. ತರಕಾರಿ ಸೇರಿದಂತೆ ಎಲ್ಲಾ ಉತ್ಪನ್ನಗಳಿಗೂ ಎಂಎಸ್‌ಪಿ ಯನ್ನು ನಿಗದಿಪಡಿಸಬೇಕೆಂದು ಆಗ್ರಹಿಸಲಾಗಿದೆ.

ಎಲ್ಲಾ ದೇಶಗಳಿಗೆ ಹೋಲಿಸಿದರೆ ಅಮೇರಿಕಾದ ಕೃಷಿ ಕ್ಷೇತ್ರವು ದೊಡ್ಡಮಟ್ಟದ ಬೆಂಬಲ ಪಡೆದರೂ ಅಸಮಾನತೆ ಉಳಿದಿದೆ. ಸುರಕ್ಷಿತ ಭೂಮಿಯ ಅಧಿಕಾರ ಹೊಂದಿರದ, ತರಕಾರಿ ಮತ್ತು ಸಣ್ಣ-ಪ್ರಮಾಣದ ಜಾನುವಾರು ಕ್ಷೇತ್ರಗಳಲ್ಲಿ ಕೇಂದ್ರೀಕೃತವಾಗಿರುವ ಕಪ್ಪು, ಸ್ಥಳೀಯ, ಲ್ಯಾಟಿನೋ, ಏಷಿಯನ್-ಪೆಸಿಫಿಕ್ ಜನರನ್ನು ಇದರಿಂದ ಹೊರಗಿಡಲಾಗಿದೆ. ಇಲ್ಲಿ ರೈತರ ಬದಲು ದೊಡ್ಡ ಕೃಷಿ ವ್ಯವಹಾರ, ಕೃಷಿ ಕಾರ್ಯಾಚರಣೆಗಳಿಗೆ ಬೆಂಬಲ ಸಿಗುತ್ತಿದೆ ಎಂದು ಅಮೇರಿಕಾ ರೈತ ಸಂಘಗಳು ದೂರಿವೆ. ಭಾರತದ ರೈತರು ಅನುಭವಿಸುತ್ತಿರುವ ಈಗಿನ ಸಮಸ್ಯೆಯನ್ನು ನಾವು 40 ವರ್ಷಗಳ ಹಿಂದೆ ಅನುಭವಿಸಿದ್ದೆವು ಎಂದು ಅಮೇರಿಕಾ ರೈತಸಂಘಟನೆಗಳು ಅಭಿಪ್ರಾಯಪಟ್ಟಿವೆ.

ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಯಲ್ಲಿ ಭಾರತದ ಎಂಎಸ್‌ಪಿ ವ್ಯವಸ್ಥೆಗೆ ಅಮೇರಿಕಾ ಪ್ರಮುಖ ಎದುರಾಳಿಯಾಗಿದೆ. ಆಸ್ಟ್ರೇಲಿಯಾ, ಕೆನಡಾ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳೊಂದಿಗೆ ಸೇರಿ ಅಮೆರಿಕವು, ಭಾರತದ ಎಂಎಸ್‌ಪಿ ವ್ಯಾಪಾರವನ್ನು ವಿರೂಪಗೊಳಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸ್ವತಂತ್ರ ರೈತರನ್ನು ಮತ್ತು ಸ್ಥಳೀಯ ಆಹಾರ ವ್ಯವಸ್ಥೆಯನ್ನು ಬೆಂಬಲಿಸುವ ಮುಖೇನ ಕೃಷಿ ಕಾನೂನುಗಳನ್ನು ರೈತರಿಗೆ ಅನುಕೂಲವಾಗುವಂತೆ ರೂಪಿಸಬೇಕೆಂದು ಅಮೇರಿಕಾ ಮತ್ತು ಭಾರತ ಸರ್ಕಾರವನ್ನು ಅಮೇರಿಕಾದ ರೈತ ಸಂಘಟನೆಗಳು ಒತ್ತಾಯಿಸಿವೆ.

ಭಾರತದ ಸಂಯುಕ್ತ ಕಿಸಾನ್‌ ಮೋರ್ಚಾ ಸೇರಿದಂತೆ, ಇತರೆ ರೈತ ಸಂಘಟನೆಗಳ, ಕೃಷಿಕರ ಏಕೀಕೃತ ಹೋರಾಟಕ್ಕೆ ನಾವು ಗೌರವ ಕೊಡುತ್ತೇವೆ ಮತ್ತು ನಾವೂ ಅವರೊಂದಿಗೆ ಕೈಜೋಡಿಸುತ್ತೇವೆಂದು ಅಮೇರಿಕಾದ 87 ರೈತ ಸಂಘಟನೆಗಳು ಘೋಷಿಸಿವೆ.

Previous Post

ಕಾಂಗ್ರೆಸ್‌-ಡಿಎಂಕೆ ಮೈತ್ರಿ ಸರ್ಕಾರ ಪತನ: ಪುದುಚೇರಿ ಮುಖ್ಯಮಂತ್ರಿ ರಾಜೀನಾಮೆ

Next Post

ಯತ್ನಾಳ್‌ ವಿರುದ್ದ ಸಿಡಿದೆದ್ದ ಬಿಜೆಪಿ ನಾಯಕರು; ಏಕವಚನದಲ್ಲಿ ವಾಗ್ದಾಳಿ

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ವಿದೇಶ

ಅಮೆರಿಕದ ಹೊಸ ಮಸೂದೆಯಿಂದ ಭಾರತೀಯರಿಗೆ ಆತಂಕ ಹೆಚ್ಚಳ

by ಪ್ರತಿಧ್ವನಿ
April 27, 2026
0

 ಅಮೆರಿಕದಲ್ಲಿ H-1B ವೀಸಾ ನೀತಿಯನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ರಿಪಬ್ಲಿಕನ್ ಶಾಸಕರ ಗುಂಪೊಂದು ಹೊಸ ಮಸೂದೆಯನ್ನು ಮಂಡಿಸಿದ್ದು, ಇದು ವಿದೇಶಿ ಉದ್ಯೋಗಿಗಳ, ವಿಶೇಷವಾಗಿ ಭಾರತೀಯರ ನಡುವೆ ಆತಂಕವನ್ನು ಹೆಚ್ಚಿಸಿದೆ.ಅರಿಜೋನಾ...

Read moreDetails
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

April 27, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
Next Post
ಯತ್ನಾಳ್‌ ವಿರುದ್ದ ಸಿಡಿದೆದ್ದ ಬಿಜೆಪಿ ನಾಯಕರು; ಏಕವಚನದಲ್ಲಿ ವಾಗ್ದಾಳಿ

ಯತ್ನಾಳ್‌ ವಿರುದ್ದ ಸಿಡಿದೆದ್ದ ಬಿಜೆಪಿ ನಾಯಕರು; ಏಕವಚನದಲ್ಲಿ ವಾಗ್ದಾಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada