
ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ಬೆನಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ ಇಂದು ರಿಲೀಸ್ ಆಗಿದ್ದಾರೆ. ನಿನ್ನೆಯೇ ಅವರ ಸಹೋದರ ದಿನಕರ್ ಆಸ್ಪತ್ರೆಗೆ ಭೇಟಿ ನೀಡಿ ಡಿಸ್ಚಾರ್ಜ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರಿಂದ ಇಂದು ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ.
ನಟ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ , ಪುತ್ರ ವಿನೀಶ್, ನಟ ಧನ್ವೀರ್ ಸೇರಿದಂತೆ ದರ್ಶನ್ ರ ಆಪ್ತರು ಆಸ್ಪತ್ರೆ ಬಳಿ ಆಗಮಿಸಿದ್ದರು. ಈ ವೇಳೆ ಆಸ್ಪತ್ರೆಯಿಂದ ಪುತ್ರನ ಹೆಗಲ ಮೇಲೆ ಕೈಹಾಕಿ ಕುಂಟುತ್ತಲೇ ಬಂದ ದರ್ಶನ್ ತಮ್ಮ ಕಾರ್ ಹತ್ತಿ ಹೊರಟಿದ್ದಾರೆ.

ಬೆಂಗಳೂರಿನ ಆರ್.ಆರ್ ನಗರದ ಬಿಜಿಎಸ್ ಆಸ್ಪತ್ರೆಯಿಂದ ದರ್ಶನ್ ನೇರವಾಗಿ ಪತ್ನಿ ವಿಜಯಲಕ್ಷ್ಮಿ ಅವರ ಹೊಸಕೆರೆ ಹಳ್ಳಿಯಲ್ಲಿರುವ ಪ್ರೆಸ್ಟೀಜ್ ಸೌತ್ ರೀಚ್ ಅಪಾರ್ಟ್ಮೆಂಟ್ ಗೆ ತೆರಳಿದ್ದಾರೆ. ಆ ಮೂಲಕ 6 ತಿಂಗಳ ಸುಧೀರ್ಗ ಸಂಕಷ್ಟದ ನಂತರ ಇಂದು ದರ್ಶನ್ ಗೆ ಕಿಂಚ ರಿಲೀಫ್ ಸಿಕ್ಕಿದ್ದು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.