ರಾಜ್ಯ ಸರ್ಕಾರಗಳಿಂದ ಕಲ್ಯಾಣ ಕರ್ನಾಟಕ (Kalyana Karnataka)!ನಿರ್ಲಕ್ಷ್ಯ ಮಾಡಲಾಗ್ತಿದೆ ಅಂತ ನಟ ಚೇತನ್ (Actor Chethan) ಬೇಸರ ಹೊರ ಹಾಕಿದ್ದಾರೆ.ರಾಜ್ಯ ಸರ್ಕಾರಗಳಿಗೆ ಕಲ್ಯಾಣ ಕರ್ನಾಟಕ ಭಾಗದ ಇತಿಹಾಸ ಹಾಗೂ ಮಹತ್ವದ ಬಗ್ಗೆ ಜ್ಞಾನ ಇಲ್ಲ.ಹಾಗಾಗಿ ಕಲ್ಯಾಣ ಕರ್ನಾಟಕಕ್ಕೆ ನಿರಂತರವಾಗಿ ಪ್ರಾದೇಶಿಕ ಅಸಮತೋಲನ ಆಗ್ತಾ ಇದೆ ಅಂತ ಕಿಡಿ ಕಾರಿದ್ದಾರೆ.

ಬೀದರ್ ಜಿಲ್ಲೆಯ (Bidar) ಬಸವಕಲ್ಯಾಣದ ಐತಿಹಾಸಿಕ ಕೋಟೆ, ಅನುಭವ ಮಂಟಪ ಸೇರಿದಂತೆ ಹಲವು ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದ ಚೇತನ್, ನಾನು ಅನೇಕ ಬಾರಿ ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದೇನೆ.ಈ ಭಾಗಕ್ಕೆ ಭೇಟಿ ನೀಡಿದ ಮೇಲೆ ನನಗೆ ಬೇಜಾರಾಗ್ತಿದೆ ಎಂದು ಹೇಳಿದ್ದಾರೆ.

ಸಾಕಷ್ಟು ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳು ಸರ್ಕಾರದ ನಿರ್ಲಕ್ಷಕ್ಕೆ ಒಳಗಾಗಿವೆ. ಬಸವಕಲ್ಯಾಣದ ಕೋಟೆ ಕರ್ನಾಟಕದ ಹೆಮ್ಮೆ ಚಾಲುಕ್ಯರ ಕಾಲದ ಈ ಕೋಟೆ ಕಡೆ ಸರ್ಕಾರ ಗಮನಹರಿಸಬೇಕಿದೆ ಅಂತ ಹೇಳಿದ್ರು.