• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನೀರು, ಸೂರು ಇಲ್ಲದ ಜಾನಪದ ಕಲಾವಿದರಿಗೆ ತಕ್ಷಣ ಜಾಗವನ್ನು ಒದಗಿಸುವಂತೆ ನಟ ಚೇತನ್ ವಿನಂತಿ

ಪ್ರತಿಧ್ವನಿ by ಪ್ರತಿಧ್ವನಿ
July 14, 2021
in ಕರ್ನಾಟಕ
0
ನೀರು, ಸೂರು ಇಲ್ಲದ ಜಾನಪದ ಕಲಾವಿದರಿಗೆ ತಕ್ಷಣ ಜಾಗವನ್ನು ಒದಗಿಸುವಂತೆ ನಟ ಚೇತನ್ ವಿನಂತಿ
Share on WhatsAppShare on FacebookShare on Telegram

ಬೆಂಗಳೂರಿನ ಕೆ ಆರ್ ಪುರದಲ್ಲಿ ೧೫ಕ್ಕೂ ಹೆಚ್ಚು ವರ್ಷಗಳ ಕಾಲದಿಂದ ನೀರು/ ವಿದ್ಯುತ್ ಇಲ್ಲದೆ ಟೆಂಟ್ಗಳಲ್ಲಿ ವಾಸಿಸುತ್ತಿರುವ ಹಿಂದುಳಿದ ಜನಪದ ಕಲಾವಿದರ ೫೩ ಕುಟುಂಬಗಳಿಗೆ ಮನೆಗಳು ಮತ್ತು ದನ ಕರುಗಳ ಆಶ್ರಯಕ್ಕೆ ಜಾಗವನ್ನು ತಕ್ಷಣ ಒದಗಿಸುವಂತೆ ಕರ್ನಾಟಕ ಜನಪದ ಕಲಾವಿದರ ಸಮುದಾಯ, ಮಾನವ ಹಕ್ಕುಗಳ ಹೋರಾಟಗಾರರು, ಮತ್ತು ನಟ ಚೇತನ್ ಅವರು ಶಾಸಕ ಭೈರತಿ ಬಸವರಾಜ್ ಅವರನ್ನು ವಿನಂತಿಸಿದ್ದಾರೆ.

ADVERTISEMENT

ಈ ಕುರಿತು ಪತ್ರವನ್ನು ಬರೆದು ವಿನಂತಿಸಿದ ಅವರು, ಶತಮಾನಗಳಿಂದ, ಕರ್ನಾಟಕದ ಜನಪದ ಕಲಾವಿದರು ನಮ್ಮ ರಾಜ್ಯ ಮತ್ತು ಭಾಷೆಗಳಿಗೆ, ಹೆಚ್ಚಿನ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದ್ದಾರೆ. ಕೆ ಆರ್ ಪುರದ ಬಡ ಗ್ರಾಮಸ್ಥರು, ಇಂತಹ ಜನಪದ ಸಂಪ್ರದಾಯವನ್ನು ‘ ಕೋಲೆ ಬಸವ ‘ ಎಂಬ ಕಲಾ ಪ್ರಕಾರದ ಮೂಲಕ ಮುಂದುವರಿಸುತ್ತಿದ್ದಾರೆ. ಈ ಕಲಾ ಪ್ರಕಾರದಲ್ಲಿ ಅಲಂಕೃತವಾದ ಒಂದು ಎತ್ತು, ನಾದಸ್ವರ, ಡೋಲ್, ತಾಳವಾದ್ಯ ಮತ್ತು ಸ್ವಯಂ ಪ್ರೇರಿತ ಸಂಭಾಷಣೆಗಳನ್ನು ಮಾಡುತ್ತಾ ಪ್ರದರ್ಶಿಸುತ್ತದೆ ಎಂದು ಬರೆದಿದ್ದಾರೆ.

Our team of human rights activists has written a letter to KA MLA & Minister @BABasavaraja requesting him to immediately provide #homes & cattle space for 53 folk artists families living in tents for 15+ yrs in KR Puram constituency, Bengaluru

Here’s letter in Kannada & English pic.twitter.com/344LVlk904

— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) July 14, 2021

ನಮ್ಮ ರಾಜ್ಯಕ್ಕೆ ಸೃಜನಶೀಲತೆಯನ್ನು ನೀಡುವ ಈ ನಾಗರಿಕ ಕಲಾವಿದರು ಮತ್ತು ಕೆ ಆರ್ ಪುರದ ವಡ್ಡರಪಾಳ್ಯದಲ್ಲಿ ವಾಸಿಸುತ್ತಿರುವ ಅವರ ಕುಟುಂಬಗಳು, ಇನ್ನೂ ಇಂತಹ ಶೋಚನೀಯ ಮತ್ತು ಕಷ್ಟದ ಸ್ಥಿತಿಯಲ್ಲಿ ವಾಸಿಸುತ್ತಿರುವುದು ದುರದೃಷ್ಟಕರ. ೧೫ಕ್ಕೂ ಹೆಚ್ಚು ವರ್ಷಗಳಿಂದ ಸರಿಯಾದ ನೀರು ಮತ್ತು ವಿದ್ಯುತ್ ಸರಬರಾಜು ಇಲ್ಲದೆ, ಮೂಲಭೂತ ಹಕ್ಕುಗಳಿಲ್ಲದೆ, ಎಲ್ಲಾ ತರದ ಪ್ರತಿಕೂಲ ಹವಾಮಾನವನ್ನ ನಿವಾರಿಸುತ್ತ ಇಂತಹ ತಾತ್ಕಾಲಿಕ ಟೆಂಟ್ಗಳಲ್ಲಿ ವಾಸಿಸುತ್ತಿದ್ದಾರೆ. ಜಾಗತಿಕವಾಗಿ ‘ಹೈಟೆಕ್ ಸಿಟಿ’ ಎಂದು ಖ್ಯಾತಿ ಹೊಂದಿರುವ ಬೆಂಗಳೂರಿನಂತಹ ನಗರದಲ್ಲಿ, ಇಂತಹ ಕೆಟ್ಟ ಬಡತನವಿದೆ ಎಂದರೆ ಅದು ನಾಚಿಕೆಗೇಡು ಎಂದಿದ್ದಾರೆ.

ಕೆ ಆರ್ ಪುರದ ಸ್ಥಳೀಯ ಶಾಸಕ ಮತ್ತು ಕರ್ನಾಟಕ ನಗರಾಭಿವೃದ್ದಿ ಸಚಿವರಾದ ಶ್ರೀ ಭೈರತಿ ಬಸವರಾಜ್ ಅವರು ಈ ಹಿಂದುಳಿದ ಜನಪದ ಕಲಾವಿದರ ಪರಿಸ್ಥಿತಿಯನ್ನು ತಕ್ಷಣ ಅರಿತುಕೊಂಡು ಅವರ ೫೩ ಕುಟುಂಬಗಳಿಗೆ ಆಶ್ರಯ, ಮತ್ತು ಜಾನುವಾರುಗಳಿಗೆ ಸ್ಥಳ ನೀಡುವ ಮೂಲಕ ಪುನರ್ವಸತಿ ಕಲ್ಪಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಕರ್ನಾಟಕ ಜನಪದ ಕಲಾವಿದರ ಸಮುದಾಯ, ಮಾನವ ಹಕ್ಕುಗಳ ಹೋರಾಟಗಾರರು, ಮತ್ತು ನಟ ಚೇತನ್ ವಿನಂತಿಸಿದ್ದಾರೆ.

Previous Post

ಚುನಾವಣಾ ರಾಜಕೀಯ: ರೈತ ಸಂಘಟನೆಗಳಲ್ಲಿ ಮೂಡಿದ ಒಡಕು?

Next Post

ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯ: ಸುರೇಶ್ ಕುಮಾರ್

Related Posts

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್
Top Story

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
March 5, 2026
0

-ತ್ಯಾಜ್ಯ ನೀರು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಟಚ್‌ ಬೆಂಗಳೂರು, ಮಾರ್ಚ್ 4, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಭವಿಷ್ಯದ ದೃಷ್ಟಿಯಿಂದ ಮೂಲ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ...

Read moreDetails
ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

March 5, 2026
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
Next Post
ಕೋವಿಡ್‌ ಬಿಕ್ಕಟ್ಟು: ಪೋಷಕರು ಹಾಗೂ ಶಾಲೆಗಳ ನಡುವೆ ಸಮನ್ವಯ ಸಾಧಿಸಬೇಕಿದೆ –ಸಚಿವ ಸುರೇಶ್‌ ಕುಮಾರ್‌

ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯ: ಸುರೇಶ್ ಕುಮಾರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada