ಮೈಸೂರು ಜಿಲ್ಲೆಯ (Mysuru) ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ, ಮಾಟ ಮಂತ್ರದ (Black magic) ಪ್ರಯೋಗಕ್ಕೆ 43 ವರ್ಷದ ವ್ಯಕ್ತಿ ಸಾವನ್ನಪಿದ್ದು, ಮೈಸೂರು ಜಿಲ್ಲೆ ಬೆಚ್ಚಿ ಬೀಳುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚಿಗೆ ಶರದ್ ಹುಣ್ಣಿಮೆಯ ದಿನದಂದು ವಾಮಾಚಾರದ ಪ್ರಯೋಗಕ್ಕೆ 43 ವರ್ಷದ ಸದಾಶಿವ (sada shiva) ಎಂಬ ವ್ಯಕ್ತಿಯನ್ನ ಕತ್ತು ಸೀಳಿ ಬಲಿ ಕೊಡಲಾಗಿದೆ.ಗ್ರಾಮದ ಸರ್ಕಾರಿ ಶಾಲೆಯ ಬದುವಿನ ಗದ್ದೆಯಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ನರಳಾಡುತ್ತಾ ಸದಾಶಿವ ಅವರನ್ನ ಕಂಡ ಗ್ರಾಮಸ್ಥರೊಬ್ಬರು ಊರಿನವರಿಗೆ ವಿಷಯ ತಿಳಿಸಿದ್ದಾರೆ.
ಈ ಮಾಹಿತಿ ತಿಳಿಯುತ್ತಿದ್ದಂತೆ ಸದಾಶಿವ ಅವರನ್ನು ಉಳಿಸಲು ಮುಂದಾದ ಗ್ರಾಮಸ್ಥರು, ತಕ್ಷಣವೇ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದ್ರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸದಾಶಿವ ಮೃತಪಟ್ಟಿದ್ದಾರೆ.ಇನ್ನು ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.