ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಗರಂ ಆಗಿದ್ದರು. ಏಕವಚನದಲ್ಲಿ ಸಂಬೋಧಿಸಿ ಯಾವನ್ರಿ ಅವನು ನನ್ನ ಕೇಳೋದಕ್ಕೆ, ನಾನು ಏನು ಬೇಕಾದರೂ ಹೇಳಿಕೆ ನೀಡ್ತೀನಿ ಎಂದು ರೇಗಾಡಿದರು. ಅಷ್ಟಕ್ಕೂ ಈಶ್ವರಪ್ಪಗೆ ಸಿಟ್ಟು ತರಿಸಿದ್ದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ರವರು ಶಿವಮೊಗ್ಗ ಸಭೆಯಲ್ಲಿ ಮಾತನಾಡಿದ್ದು. ಕೆಎಸ್ ಈಶ್ವರಪ್ಪ ಮುರುಗೇಶ್ ನಿರಾಣಿ ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ, ಅಪರೂಪಕ್ಕೆ ಸತ್ಯ ಹೇಳಿದ್ದಾರೆ ಹಾಗೂ ಅವು ಹೈಕಮಾಂಡ್ ಮಾತುಗಳು ಎಂದು ಸಿದ್ದರಾಮಯ್ಯ ಹೇಳಿದ್ದರು.
ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ನಿಧನ: ಸದನದಲ್ಲಿ ನುಡಿ ನಮನ
https://youtube.com/live/FN3GgTx9Q2E
Read moreDetails







