• Home
  • About Us
  • ಕರ್ನಾಟಕ
Monday, January 19, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಹಣ ಮೂಲ ತಿಳಿಸದ, ವ್ಯಯದ ಗುರಿ ವಿವರಿಸದ ಅಸ್ಪಷ್ಟ 20 ಲಕ್ಷ ಕೋಟಿ ರೂ. ಪ್ಯಾಕೇಜ್

by
May 14, 2020
in ದೇಶ
0
ಹಣ ಮೂಲ ತಿಳಿಸದ
Share on WhatsAppShare on FacebookShare on Telegram

ಕರೋನಾ ಎಂಬ ಕಂಡುಕೇಳರಿಯದ ಕಡುಕಷ್ಟದ ವಿರುದ್ಧ ಹೋರಾಡಲು, ಲಾಕ್ಡೌನ್ ಸೃಷ್ಟಿಸಿರುವ ದುರ್ದಿನಗಳಲ್ಲಿ ದೈನೇಸಿ ಸ್ಥಿತಿ ತಲುಪಿರುವವರಿಗೆ ತುಸು ಸಹಾಯ ಮಾಡಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಆಳುವ ಸರ್ಕಾರ ಇಡೀ ಪ್ರಪಂಚದಲ್ಲೇ ತಾನು ಘೋಷಿಸಿರುವ ಪ್ಯಾಕೇಜ್ ಬಲುದೊಡ್ಡದೆಂದು ತನ್ನ ಭುಜವನ್ನು ತಾನೇ ತಟ್ಟಿಕೊಳ್ಳುತ್ತಿದೆ. ದೇಶದ ಜಿಡಿಪಿಯ ಶೇಕಡಾ 10ರಷ್ಟು ಹಣವನ್ನು ‘ಸದ್ಯದ ಪರಿಸ್ಥಿತಿ’ ನಿರ್ವಹಣೆಗೆ ಕೊಡಲಾಗುತ್ತಿದೆ ಎಂದು ಹೇಳಿದೆ.

ADVERTISEMENT

ಘೋಷಿಸಿದವರೇ ಇದನ್ನು ‘ಬೃಹತ್’ ಎಂದು ಬಣ್ಣಿಸಿ ಬಿಟ್ಟಿದ್ದಾರೆ. ಮಾಧ್ಯಮಗಳಿಂದ ‘ಬೃಹತ್ ಭಜನೆ’ ಮುಂದುವರೆದಿದೆ. 136 ಕೋಟಿ ಜನರುಳ್ಳ ದೇಶಕ್ಕೆ 20 ಲಕ್ಷ‌ ಕೋಟಿ ರೂಪಾಯಿಗಳ ಪ್ಯಾಕೇಜ್ ಎಂಬುದು ಬೃಹತ್ ಆಗೇ ಕಾಣುತ್ತದೆ. ಅದೇ ರೀತಿ 20 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಹೇಗೆ ಹೊಂದಿಸಿಕೊಳ್ಳುತ್ತದೆ? ಎಲ್ಲಿಂದ ತರುತ್ತದೆ? ಎಂಬುದು ಕೂಡ ಬೃಹತ್ ಪ್ರಶ್ನೆಗಳೇ ಆಗಿವೆ.

ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದ್ದರು. ಅಷ್ಟು ಮಾತ್ರದ ಹಣ ಹೊಂದಿಸುವುದಕ್ಕೇ ಹೆಣಗಾಡಿದ್ದರು. ಅದು ಅವರ ಮಾಹಿತಿಗಳಲ್ಲೇ ಅಡಕವಾಗಿತ್ತು. ಆರೋಗ್ಯ ಮತ್ತು ತುರ್ತು ಸೇವಾನಿರತರಿಗೆ ತಲಾ 50 ಮತ್ತು 20 ಲಕ್ಷದವರೆಗೆ ಜೀವವಿಮೆ ನೀಡಿದ್ದು ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆ ಹಣದಿಂದ. ರೈತರಿಗೆ ಹಣ ನೀಡಿದ್ದು ಕಿಸಾನ್ ಸಮ್ಮಾನ್ ಯೋಜನೆಯಿಂದ. ಹಿರಿಯ ನಾಗರಿಕರು, ಅಂಗವಿಕಲರು ಮತ್ತು ವಿಧವೆಯರಿಗೆ ಹೇಗೂ ನೀಡುತ್ತಿದ್ದ ಹಣವನ್ನು ಪ್ಯಾಕೇಜಿನ ಭಾಗವಾಗಿಸಿದರು. ಅಷ್ಟೇಯಲ್ಲ ಬಹಳ ಸ್ಪಷ್ಟವಾಗಿ 1.7 ಲಕ್ಷ ಕೋಟಿ ಹಣವನ್ನು ಹೊಂದಿಸಲು ಮಿನರಲ್ ಫಂಡ್, ಪ್ರಾವಿಡೆಂಟ್ ಫಂಡ್ ಮತ್ತು ಕಟ್ಟಡ ಕಾರ್ಮಿಕರ ಫಂಡ್ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದರು.

Also Read: 20 ಲಕ್ಷ ಕೋಟಿ ಪ್ಯಾಕೇಜ್: ಅಂಕಿ-ಸಂಖ್ಯೆ ಗಿಮಿಕ್ ಮಾಡಿ ಜನರ ಹಾದಿ ತಪ್ಪಿಸುತ್ತಿರುವ ಪ್ರಧಾನಿ ಮೋದಿ!

ನಿರ್ಮಲಾ ಸೀತಾರಾಮನ್ ಘೋಷಿಸಿದ್ದ 1.7 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜಿನ 11.76ರಷ್ಟು ಹೆಚ್ಚಿನ ಮೊತ್ತದ ಪ್ಯಾಕೇಜ್ ಅನ್ನು ಅಂದರೆ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಅಂದರೆ ಈ ಬೃಹತ್ ಮೊತ್ತ ಹೊಂದಿಸುವುದಕ್ಕೆ ಮೊದಲಿಗಿಂತ 11.76ರಷ್ಟು ಹೆಚ್ಚಿನ ಕಸರತ್ತು ನಡೆಸಬೇಕು. ಈಗಾಗಲೇ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಯಾಗಿದೆ. ನಿರಂತರವಾಗಿ ರೂಪಾಯಿ ಅಪಮೌಲ್ಯಗೊಳ್ಳುತ್ತಿದೆ. ಇಂಧನ ದರಗಳು ಏರುಮುಖವಾಗಿವೆ. ಇಂಥ ಪರಿಸ್ಥಿತಿಯಲ್ಲಿ ಹಣ ಹೊಂದಿಸುವುದು ಇನ್ನೂ ಕಷ್ಟವಾಗಲಿದೆ.

ಕೆಲವು ಸುಲಭದ ದಾರಿಗಳು ಕೂಡ ಇವೆ; ಶ್ರೀಮಂತರಿಗೆ ವಿಶೇಷವಾದ ಕರೋನಾ ತೆರಿಗೆ ವಿಧಿಸಬಹುದು. ಕಾರ್ಪೊರೇಟ್ ತೆರಿಗೆಗಳನ್ನು ಹೆಚ್ಚಿಸಬಹುದು‌ ಆದರೆ ಈ ಕ್ರಮಗಳನ್ನು ಕಾರ್ಪೊರೇಟ್ ಕಂಪನಿಗಳ ಪರ ಇರುವ ನರೇಂದ್ರ ಮೋದಿ ಅವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇದಲ್ಲದೆ ಇಷ್ಟು ದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನವನ್ನು ಕಡಿಮೆ ಬೆಲೆಗೆ ಕೊಂಡುತಂದು ಬಡ ಭಾರತೀಯರಿಗೆ ದುಪ್ಪಟ್ಟು ದುಡ್ಡಿಗೆ ಮಾರಿರುವ ಹಣವನ್ನು ಬಳಸಿಕೊಳ್ಳಬಹುದು ಎಂಬ ಇನ್ನೊಂದು ಮಾತಿದೆ. ಆದರೆ ಇದು ಕೂಡ ಲಾಭದ ಹಣವನ್ನು ಹೊಸ ಬಂಡವಾಳ ಮಾಡುವ, ಎಂದಿಗೂ ಅದನ್ನು ಕಾರಣಕರ್ತರಿಗೆ ಹಂಚದ ಅಪ್ಪಟ ಗುಜರಾತಿಗಳ ಗುಣಲಕ್ಷಣಗಳೆಲ್ಲವೂ ಮೇಳೈಸಿರುವ ಮೋದಿಯಿಂದ ಆಗದ ಕೆಲಸ ಎಂದೇ ಹೇಳಲಾಗುತ್ತಿದೆ.

Also Read: ₹20 ಲಕ್ಷ ಕೋಟಿ ಪ್ಯಾಕೇಜ್: ಎಷ್ಟು ಸುಳ್ಳು? ಎಷ್ಟು ಸತ್ಯ?

ಕರೋನಾ ವಿರುದ್ಧ ಹೋರಾಡಲೆಂದು ದೇಶವಾಸಿಗಳು ನೀಡಿರುವ ಅಪಾರ ಪ್ರಮಾಣದ ‘ಪಿಎಂ ಕೇರ್ ಫಂಡ್’ ಇದೆ. ಅದನ್ನು ಬಳಸಲಾಗುತ್ತದೆ ಎಂಬ ಮಾಹಿತಿ ಇದೆ. ಪಾರದರ್ಶಕ ಎಂಬ ಪದದೇ ಅರ್ಥವೇ ಗೊತ್ತಿಲ್ಲದ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ‘ಪಿಎಂ ಕೇರ್ ಫಂಡ್’ಗೆ ಎಷ್ಟು ದೇಣಿಗೆ ಬಂದಿದೆ? ಅದನ್ನು ಯಾವ್ಯಾವ ಬಾಬ್ತಿಗೆ ಖರ್ಚು ಮಾಡಲಾಗುತ್ತಿದೆ? ಎಂಬುದನ್ನು ಹೇಳುವುದಿಲ್ಲ. ಲಕ್ಷಾಂತರ ಕೋಟಿ ರೂಪಾಯಿಗಳಷ್ಟು ಹಣ ‘ಪಿಎಂ ಕೇರ್ ಫಂಡ್’ಗೆ ಬಂದಿರುವ ಸಾಧ್ಯತೆಗಳೂ ಇಲ್ಲ. ಹಾಗಾದರೆ ಉಳಿದ ಹಣವನ್ನು ಹೊಂದಿಸುವುದು‌ ಹೇಗೆ?

ಇವೆಲ್ಲವುಗಳ ಹೊರತು ಉಳಿದಿರುವ ಮಾರ್ಗ ಸಾಲ ಮಾಡುವುದು. ಸಂಕಷ್ಟದಲ್ಲಿ ಸಾಲ ಮಾಡುವುದು ಶತಶತಮಾನಗಳ ಸಂಪ್ರದಾಯ. ಅದನ್ನು ತಪ್ಪು ಎಂದು ವ್ಯಾಖ್ಯಾನಿಸಲಾಗದು. ಆದರೆ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ, ಕರೋನಾ ಕಷ್ಟದ ವೇಳೆ, ಮುಂದೆ ಎಂದಿನಂತೆ ಆರ್ಥಿಕ ಚಟುವಟಿಕೆಗಳು ನಡೆಯಲಿವೆ. ಆಮದು-ರಫ್ತುಗಳೆಲ್ಲವೂ ಸುಗಮವಾಗಿ ಸಾಗಲಿವೆ ಎಂಬ ಯಾವ ಗ್ಯಾರಂಟಿಯೂ ಇಲ್ಲದ ಸಂದರ್ಭದಲ್ಲಿ ಸಾಲ ಮಾಡುವುದು ಅಪಾಯವನ್ನು ಆಹ್ವಾನಿಸಿದಂತೆ. ನರೇಂದ್ರ ಮೋದಿ ದೇಶವನ್ನು ಅಂಥ ಅಪಾಯದೆಡೆಗೆ ತಳ್ಳುತ್ತಿದ್ದಾರೆ.

ಕರೋನಾದ ವಿರುದ್ಧ ಹೋರಾಡಲು ಭಾರತವು ಬ್ರಿಕ್ಸ್‌ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ದೇಶಗಳ ಹೊಸ ಅಭಿವೃದ್ಧಿ ಬ್ಯಾಂಕ್ (NDB)ನಿಂದ 1 ಬಿಲಿಯನ್ ಹಣವನ್ನು ಕಡ ತರುತ್ತಿದೆ. ವಿಪತ್ತಿನ ಸಮಯದಲ್ಲಿ ತನ್ನ ಸದಸ್ಯ ರಾಷ್ಟ್ರಗಳನ್ನು ಬೆಂಬಲಿಸಬೇಕೆಂದು ಭಾರತಕ್ಕೆ ಸಾಲ ನೀಡಲು ಏಪ್ರಿಲ್ 30ರಂದು ಎನ್ ಡಿಬಿಯ ನಿರ್ದೇಶಕ ಮಂಡಳಿ ಸಭೆ ನಿರ್ಧರಿಸಿದೆ. ಆದರೆ ಉಳಿದ ಹಣವನ್ನು ಕೇಂದ್ರ ಸರ್ಕಾರ ಹೇಗೆ ಹೊಂದಿಸಲಿದೆ? ಏಕೆಂದರೆ ಕರೋನಾ ಇಡೀ ಜಗತ್ತನ್ನು ಜಗ್ಗಾಡುತ್ತಿದೆ. ಜಗತ್ತಿನ ಆರ್ಥಿಕ ಸ್ಥಿತಿಯೇ ದುಸ್ಥಿತಿಯಲ್ಲಿದೆ. ಇಡೀ ಜಗತ್ತಿನಲ್ಲಿ ಸಾಲದ ಬೇಡಿಕೆ ದುಪ್ಪಟ್ಟಾಗಿದೆ. ಸಾಲ ಹುಟ್ಟುವುದಾದರೂ ಎಲ್ಲಿಂದ? ಎಂಬುದು ಕೂಡ ಗಮನಾರ್ಹವಾದ ವಿಷಯ.

Also Read: 20 ಲಕ್ಷ ಕೋಟಿ ಸ್ವಾವಲಂಬಿ ಭಾರತ ಪ್ಯಾಕೇಜ್ ನಿಜವಾಗುವುದೆ?

ಇರಲಿ, 20 ಲಕ್ಷ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್‌ ಸಂಪೂರ್ಣವಾಗಿ ಲಿಕ್ವಿಡಿಟಿ (ನಗದು) ರೂಪದಲ್ಲಿ ಇರುವುದಿಲ್ಲ. ಈ 20 ಲಕ್ಷ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್‌ ಹಿಂದಿನ 1.7 ಲಕ್ಷ ಕೋಟಿಗಳ ಪ್ಯಾಕೇಜ್‌ ಅನ್ನು ಒಳಗೊಂಡಿರುತ್ತದೆ. ನೇರವಾಗಿ ಹಣ ಕೊಡುವುದು ಮಾತ್ರವಲ್ಲದೆ ಹಲವಾರು ರೀತಿಯ ಪರೋಕ್ಷವಾದ ವಿತ್ತೀಯ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೂ ಅವೆಲ್ಲವುಗಳಿಗೂ ರಿಯಾಯಿತಿ, ವಿನಾಯಿತಿ, ಪರಿಹಾರ, ಪ್ರೋತ್ಸಾಹ ಕೊಟ್ಟಷ್ಟು ಒಟ್ಟಾರೆ ಬಜೆಟ್ ಮೇಲೆ ಅದರ ಪರಿಣಾಮ-ದುಷ್ಪರಿಣಾಮಗಳು ಬಿದ್ದೇ ಬೀರುತ್ತವೆ. ಪ್ಯಾಕೇಜ್ ಎಂಬುದು ಆದಾಯ-ಖರ್ಚುಗಳನ್ನು ಹೇಳುವ ಬಜೆಟ್ ಅಲ್ಲ ನಿಜ. ಆದರೆ 20 ಲಕ್ಷ ಕೋಟಿ ರೂಪಾಯಿಗಳ ಈ ಬೃಹತ್ ಪ್ಯಾಕೇಜ್ ಹಣ ಮೂಲ ತಿಳಿಸದ, ವ್ಯಯದ ಗುರಿಯನ್ನು ನಿಖರವಾಗಿ ವಿವರಿಸದ ಅಸ್ಪಷ್ಟತೆಯಿಂದ ಕೂಡಿದೆ ಎಂಬುದೂ ಅಷ್ಟೇ ನಿಜ.

Tags: ‌ covid-19‌ ಪಿಎಂ ಕೇರ್‌ ಫಂಡ್‌ ಪ್ರಧಾನಿ ಮೋದಿNirmala SitharamanPM Cares fundPM Modiಕೋವಿಡ್-19ನಿರ್ಮಲಾ ಸೀತರಾಮನ್
Previous Post

ಭಾರತೀಯ ಸೇನೆಯಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಲು ಸಾಮಾನ್ಯ ನಾಗರಿಕರಿಗೆ ತಾತ್ಕಾಲಿಕ ಅವಕಾಶ

Next Post

ವಲಸೆ ಕಾರ್ಮಿಕರ ಹಿತಕ್ಕಾಗಿ ಕೇಂದ್ರದಿಂದ 11 ಸಾವಿರ ಕೋಟಿ.!

Related Posts

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್
ಇದೀಗ

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

by ಪ್ರತಿಧ್ವನಿ
January 18, 2026
0

ಬೆಂಗಳೂರು : ರಾಜ್ಯದ ಅಬಕಾರಿ ಇಲಾಖೆಯಲ್ಲಿ ಕೇಳಿ ಬಂದಿರುವ ಲಂಚ ಹಗರಣದಲ್ಲಿ ಬೆಂಗಳೂರು ನಗರ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು...

Read moreDetails
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

January 18, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

January 17, 2026
ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

January 17, 2026
Next Post
ವಲಸೆ ಕಾರ್ಮಿಕರ ಹಿತಕ್ಕಾಗಿ ಕೇಂದ್ರದಿಂದ 11 ಸಾವಿರ ಕೋಟಿ.!

ವಲಸೆ ಕಾರ್ಮಿಕರ ಹಿತಕ್ಕಾಗಿ ಕೇಂದ್ರದಿಂದ 11 ಸಾವಿರ ಕೋಟಿ.!

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada